ಬೆಂಗಳೂರಿನಲ್ಲಿ ಯುವರತ್ನ ಚಿತ್ರದ ಚಿತ್ರಿಕರಣ ಆರಂಭ
Team Udayavani, Sep 24, 2020, 7:10 AM IST
ಬೆಂಗಳೂರು: ಸ್ಯಾಂಡಲ್ವುಡ್ನ ಬಹು ಬೇಡಿಕೆಯ ನಟ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರು ತಮ್ಮ ಬಹು ನಿರೀಕ್ಷಿತ ಯುವರತ್ನ ಚಿತ್ರದ ಶೂಟಿಂಗ್ ಅನ್ನು ಸೆಪ್ಟೆಂಬರ್ 26ರಿಂದ ಬೆಂಗಳೂರಿನಲ್ಲಿ ಆರಂಭಿಸಲಿದ್ದಾರೆ.
ಈ ಚಿತ್ರವನ್ನು ಸಂತೋಷ್ ಆನಂದ್ರಾಮ್ ನಿರ್ದೇಶಿಸುತ್ತಿದ್ದಾರೆ.
ಕಳೆದ ಏಪ್ರೀಲ್ ತಿಂಗಳಿನಲ್ಲೇ ಚಿತ್ರ ತೆರೆಕಾಣಬೇಕಿತ್ತು. ಕೋವಿಡ್ ವೈರಸ್ನ ಕಾರಣದಿಂದಾಗಿ ಪ್ರೋಡಕ್ಷನ್ ವಿಳಂಬವಾಗಿದೆ.
ಚಿತ್ರದ ಉಳಿದ ಭಾಗವನ್ನು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಚಿತ್ರೀಕರೀಸಲು ಚಿತ್ರ ತಂಡ ನಿರ್ಧರಿಸಿದೆ.
ಸ್ಟುಡಿಯೋದಲ್ಲಿ ಬೃಹತ್ ಸೆಟ್ವೊಂದನ್ನು ಹಾಕಲಾಗಿದ್ದು, ಚಿತ್ರದ ದ್ವಿತಿಯಾರ್ಧ ಭಾಗದಲ್ಲಿ ಬರುವ ಹಾಡುಗಳನ್ನು ಅಲ್ಲಿ ಚಿತ್ರೀಕರಿಸಲಾಗುವುದು. ಹಾಡುಗಳನ್ನು ಮೊದಲು ವಿದೇಶದಲ್ಲಿ ಚಿತ್ರೀಕರಿಸಲು ನಿರ್ಧರಿಸಲಾಗಿತ್ತು.
ಪ್ರಯಾಣಕ್ಕೆ ನಿರ್ಬಂಧ ಇರುವುದರಿಂದ ಬೆಂಗಳೂರಿನಲ್ಲೇ ಚಿತ್ರೀಕರಣ ನಡೆಯಲಿದೆ ಎನ್ನಲಾಗುತ್ತಿದೆ.
ಸ್ಯಾಂಡಲ್ವುಡ್ನಲ್ಲಿ ಪೋಸ್ಟ್ ಪ್ರೊಡಕ್ಷನ್ ಆರಂಭಿಸುತ್ತಿರುವ ಮೊದಲ ಚಿತ್ರ ತಂಡ ಇದಾಗಿದೆ. ಮೇ ತಿಂಗಳಲ್ಲಿ ನಿದೇಶಕ ಸಂತೋಷ್ ಆನಂದ್ರಾಮ್ ಅವರು ನಟ ಪುನಿತ್ ಚಿತ್ರದ ಡಬ್ಬಿಂಗನಲ್ಲಿ ಭಾಗವಹಿದ್ದ ವೀಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಮಾರ್ಚ್ನಲ್ಲಿ ಪುನೀತ್ ಅವರ 45ನೇ ಹುಟ್ಟು ಹಬ್ಬದ ಮುನ್ನಾದಿನ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆಯಾಗಿ, ಪ್ರೇಕ್ಷಕರಿಂದ ಉತ್ತಮ ಪ್ರತಿಕಿಯೆ ಗಳಿಸಿತ್ತು. ಆಕ್ಷನ್ ಮತ್ತು ಮನೋರಂಜನೆ ಆಧಾರಿತ ಈ ಚಿತ್ರದ ಮೂಲಕ ಬಹುಭಾಷಾ ನಟಿ ಸಯ್ಯೇಶಾ ಅವರು ಸ್ಯಾಂಡಲ್ವುಡ್ ಪ್ರವೇಶಿಸಲಿದ್ದಾರೆ.
ರಾಜಕುಮಾರ, ಕೆಜಿಎಫ್ ನಂತ ಚಿತ್ರಗಳನ್ನು ನಿರ್ಮಿಸಿದ ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಮ್ಸ್ ಇದಕ್ಕೆ ಬಂಡವಾಳ ಹೂಡಿದೆ. ಏತನ್ಮಧ್ಯೆ ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಜೇಮ್ಸ್ ಚಿತ್ರತಂಡದ ಜತೆಗೂ ಪುನೀತ್ ಕಾರ್ಯನಿರ್ವಹಿಸುತ್ತಿದಾರೆ. ಅಲ್ಲದೇ ಪುನೀತ್ ಅವರು ಫ್ಯಾಮಿಲಿ ಪ್ಯಾಕ್ ಎಂಬ್ ಕಾಮಿಡಿ ಆಧಾರಿತ ಸಿನಿಮಾ ನಿರ್ಮಿಸುತ್ತಿದ್ದು, ಲಿಖೀತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ
Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ
Udupi: ರಮಾಬಾಯಿ ಕೊಚ್ಚಿಕಾರ್ ಪೈ ನಿಧನ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ