ಚಂದನವನದಲ್ಲಿ ತಾರೆಯರ ಸಂಕ್ರಾಂತಿ ಸಂಭ್ರಮ


Team Udayavani, Jan 14, 2021, 11:03 AM IST

ಚಂದನವನದಲ್ಲಿ ತಾರೆಯರ ಸಂಕ್ರಾಂತಿ ಸಂಭ್ರಮ

ಹೊಸವರ್ಷದ ಮೊದಲ ಹಬ್ಬ ಸಂಕ್ರಾಂತಿಯ ಸಂಭ್ರಮಕ್ಕೆ ಜನಮನ ಸಿದ್ಧವಾಗಿದೆ. ಕೋವಿಡ್‌ ಆತಂಕದ ಛಾಯೆ ನಿಧಾನವಾಗಿ ಕರಗುತ್ತ, ಹೊಸಭರವಸೆಯ ಆಶಯದೊಂದಿಗೆ ಸಂಕ್ರಾಂತಿ ಎದುರಾಗುತ್ತಿದೆ. ಇನ್ನು ಸಂಕ್ರಾಂತಿಯ ಸಂಭ್ರಮಕ್ಕೆ ಸ್ಯಾಂಡಲ್‌ವುಡ್‌ ಮಂದಿ ಕೂಡ ಹೊಸ ಜೋಶ್‌ನಲ್ಲಿ ಸಿದ್ಧವಾಗಿದ್ದಾರೆ. ಹಾಗಾದ್ರೆ ಯಾವ್ಯಾವ ತಾರೆಯರ ಈ ಬಾರಿ ಸಂಕ್ರಾಂತಿಗೆ ಏನೆಲ್ಲ ಪ್ಲಾನ್‌ ಮಾಡಿಕೊಂಡಿದ್ದಾರೆ, ಹಬ್ಬದ ಸಂಭ್ರಮ ಹೇಗಿರುತ್ತದೆ ಅನ್ನೋದನ್ನ ಓದುಗರ ಮುಂದೆ ಹಂಚಿಕೊಂಡಿದ್ದಾರೆ.

ಸಂಕ್ರಾಂತಿ ಅಂದ್ರೆ ಚಿಕ್ಕವಯಸ್ಸಿನಲ್ಲಿ ಹೊಸಬಟ್ಟೆ ತೊಟ್ಟು, ಕೈ ತುಂಬ ಬಳೆ ಹಾಕಿಕೊಂಡು, ದೊಡ್ಡದಾಗಿ ಬಣ್ಣ ಬಣ್ಣದ ರಂಗೋಲಿ ಚಿತ್ತಾರ ಬಿಡಿಸಿ ಟ್ರೆಡಿಷನಲ್‌ ಆಗಿ ಹಬ್ಬವನ್ನು ಆಚರಿಸುತ್ತಿದ್ದ ದಿನಗಳು ನೆನಪಿಗೆ ಬರುತ್ತದೆ. ಫ್ರೆಂಡ್ಸ್‌ ಜೊತೆ
ಸೇರಿಕೊಂಡು ಎಲ್ಲರ ಮನೆಗೂ ಹೋಗಿ ಎಳ್ಳು-ಬೆಲ್ಲ, ಸಿಹಿ ತಿಂಡಿ ತಿಂದು ಬರುತ್ತಿದ್ದೆವು, ಕಳೆದ ಎರಡು ವರ್ಷಗಳಿಂದ ಬೇರೆ ಬೇರೆ ಕಾರಣಗಳಿಂದ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿರಲಿಲ್ಲ. ಆದ್ರೆ ಈ ವರ್ಷ ಸಂಕ್ರಾಂತಿಯನ್ನ ಹೊಸ ಜೋಶ್‌ನಲ್ಲಿ ಫ್ಯಾಮಿಲಿ ಜೊತೆಗೇ ಆಚರಣೆ ಮಾಡುವ ಪ್ಲಾನ್‌ ಮಾಡಿಕೊಂಡಿದ್ದೇನೆ .
– ಹರ್ಷಿಕಾ ಪೂರ್ಣಚ್ಚ, ನಟಿ

ಚಿಕ್ಕವಯಸ್ಸಿ ನಿಂದಲೂ ಸಂಕ್ರಾಂತಿ ಅಂದ್ರೆ ನನಗೆ ತುಂಬ ಇಷ್ಟವಾದ ಹಬ್ಬ. ಎಲ್ಲ ರಿಲೇಟಿವ್ಸ್‌, ಫ್ರೆಂಡ್ಸ್‌ ಮನೆಗೆ ಹೋಗಿ ಎಳ್ಳು-ಬೆಲ್ಲ ಹಂಚಿ ಬರುತ್ತಿದ್ದ ನೆನಪು ಈಗಲೂ ಹಸಿರಾಗಿದೆ. ಎಳ್ಳು-ಬೆಲ್ಲವನ್ನ ಚಿಕ್ಕ ಬಾಕ್ಸ್‌ನಲ್ಲಿ ಹಾಕಿಕೊಂಡು ಹಬ್ಬ ಮುಗಿದ ಮೇಲೂತಿನ್ನುತ್ತಿದ್ದ ನೆನಪು ಕಣ್ಮುಂದೆ ಬರುತ್ತದೆ. ಹಬ್ಬದ ದಿನ ಗವಿಗಂಗಾಧರೇಶ್ವರ ದೇವಸ್ಥಾನಕ್ಕೆ ಹೋಗುವುದು, ಪೂಜೆ
ಮಾಡಿಸುವುದು, ಹಬ್ಬದ ಊಟ ಮಾಡುವುದು ಪ್ರತಿವರ್ಷ ನಡೆದು ಕೊಂಡು ಬರುತ್ತಿರುವ ನಮ್ಮ ಹಬ್ಬದ ಆಚರಣೆ. ಆದ್ರೆ ಈ ವರ್ಷ ಕೋವಿಡ್‌ ಭಯ ಇನ್ನೂ ಇರುವುದರಿಂದ, ಪ್ರತಿವರ್ಷದಷ್ಟು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿಲ್ಲ. ಆದಷ್ಟೂ ಮನೆಮಂದಿಯ ಜೊತೆ ಸೇರಿಕೊಂಡು ಸರಳವಾಗಿ ಹಬ್ಬವನ್ನು ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ.
– ಸೋನು ಗೌಡ, ನಟಿ

ಸಾಮಾನ್ಯವಾಗಿ ಪ್ರತಿವರ್ಷ ಸಂಕ್ರಾಂತಿ ಹಬ್ಬವನ್ನು ಸಾಗರದ ಹತ್ತಿರವಿರುವ ನಮ್ಮ ಊರಿನಲ್ಲೇ ಆಚರಿಸಿಕೊಂಡು ಬರುತ್ತಿದ್ದೇನೆ. ಹಬ್ಬಕ್ಕಾಗಿ ಅಮ್ಮನ ಜೊತೆ ಅಜ್ಜಿ ಮನೆಗೆ ಹೋಗುತ್ತಿದ್ದೆ. ಹಬ್ಬಕ್ಕೂ ಮೊದಲೇ ಊರಿಗೆ ಹೋಗಿ ಅಲ್ಲೊಂದಷ್ಟು ದಿನ ಇದ್ದು,
ಹಬ್ಬದ ತಯಾರಿ ಮಾಡಿಕೊಂಡು, ಹಬ್ಬವನ್ನು ಆಚರಿಸುವ ಖುಷಿಯೇ ಬೇರೆ.
ದೇವಸ್ಥಾನಕ್ಕೆ ಹೋಗುವುದು, ಮನೆಯವರ ಜೊತೆಗೆ ಸೇರಿ ಹಬ್ಬದ ಅಡುಗೆ ಮಾಡಿ ಊಟ ಮಾಡುವುದು, ಒಂದಷ್ಟು ಹರಟೆ-ತರಲೆ, ತುಂಟಾದ ಎಲ್ಲ ಹಬ್ಬದ ಸಂಭ್ರದಲ್ಲಿರುತ್ತಿತ್ತು. ಊರಿಗೆ ಹೋಗಿ ಹಬ್ಬ ಮಾಡಿದ್ರೇನೆ, ಮನಸ್ಸಿಗೆ ಏನೋ ಒಂಥರಾ ತೃಪ್ತಿ. ಆದ್ರೆ ಕಾರಣಾಂತರಗಳಿಂದ ಈ ಬಾರಿ ಊರಿಗೆ ಹೋಗಲಾಗುತ್ತಿಲ್ಲ. ಹಾಗಾಗಿ ಬೆಂಗಳೂರಿನಲ್ಲೇ, ಸಂಕ್ರಾಂತಿ ಆಚರಿಸಲು ಪ್ಲಾನ್‌ ಮಾಡಿಕೊಂಡಿದ್ದೇನೆ. ಹಬ್ಬಕ್ಕೆ ಎಲ್ಲ ತಯಾರಿ ಮಾಡಿ ಕೊಂಡಿದ್ದರೂ, ಊರಿಗೆ ಹೋಗಿ ಹಬ್ಬ ಮಾಡುತ್ತಿಲ್ಲವಲ್ಲ ಎಂಬ ಸಣ್ಣ
ಬೇಸರ ವಂತೂ ಇದ್ದೇ ಇದೆ.
– ಕೃತ್ತಿಕಾ ರವೀಂದ್ರ, ನಟಿ 

ಸಂಕ್ರಾಂತಿ ಅಂದ್ರೇನೆ ಅದು ಹೆಣ್ಣು ಮಕ್ಕಳ ಹಬ್ಬ. ನಮ್ಮ ಮನೆಯಲ್ಲಿ ಮೊದಲಿನಿಂದಲೂ ಸಂಕ್ರಾಂತಿ ಹಬ್ಬವನ್ನು ಸಾಂಪ್ರದಾಯಿಕವಾಗಿಯೇ ಆಚರಿಸಿಕೊಂಡು ಬರುತ್ತಿದ್ದೇವೆ. ಮನೆಯವರ ಜೊತೆ ಹಬ್ಬ ಮಾಡೋದು, ಎಳ್ಳು-ಬೆಲ್ಲ ಬೀರೋದು,
ಇಡೀ ದಿನ ಫ್ಯಾಮಿಲಿ ಜೊತೆ ಸಮಯ ಕಳೆಯೋದು ನನಗೆ ಇಷ್ಟ. ಈ ಬಾರಿಯೂ ಮನೆಮಂದಿಯ ಜೊತೆಗೆ ಸಂಕ್ರಾಂತಿ ಆಚರಣೆ
ಮಾಡುತ್ತಿದ್ದೇನೆ. ಕಳೆದ ಸಂಕ್ರಾಂತಿಗಿಂತ ಈ ಬಾರಿ ಸಂಕ್ರಾಂತಿ ವೈಯಕ್ತಿಕವಾಗಿ ನನಗಂತೂ ತುಂಬಾ ಸ್ಪೆಷಲ್‌ ಆಗಿದೆ. ಕೋವಿಡ್‌ ಭಯ ದೂರ ವಾಗಿ, ಈ ಬಾರಿ ಸಂಕ್ರಾಂತಿ ಎಲ್ಲರಿಗೂ ಒಳ್ಳೆಯದು ಮಾಡಲಿ

– ಖುಷಿ, ನಟಿ

ಮೊದಲಿನಿಂದಲೂ ಬಹುತೇಕ ಎಲ್ಲ ಹಬ್ಬಗಳನ್ನು ನಮ್ಮ ಮನೆಯಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರುವ ಪದ್ದತಿ ಇದೆ. ಹಾಗೇ, ಸಂಕ್ರಾಂತಿಯನ್ನು ಕೂಡ ಸಾಂಪ್ರದಾ ಯಿಕವಾಗಿಯೇ ಆಚರಿಸುತ್ತೇವೆ. ಹಬ್ಬದ ದಿನ ಹೊಸ ಬಟ್ಟೆ ತೊಟ್ಟು, ಆದಷ್ಟು ಸಮಯ ಫ್ಯಾಮಿಲಿ ಜೊತೆಗೆ ಕಳೆಯುತ್ತೇನೆ. ಇನ್ನು ದೇವಸ್ಥಾನಕ್ಕೆ ಹೋಗೋದು, ಫ್ರೆಂಡ್ಸ್‌ – ರಿಲೇಟಿವ್ಸ್‌ ಮನೆಗೆ ಹೋಗೋದು, ಎಳ್ಳು-ಬೆಲ್ಲ, ಸಿಹಿ ಹಂಚಿ ಸಂಭ್ರಮಿಸುವುದು ಇದ್ದೇ ಇರುತ್ತದೆ. ಆದ್ರೆ ಈ ಬಾರಿ ಕೋವಿಡ್‌ ಹೆದರಿಕೆ ಇನ್ನೂ ಕಡಿಮೆಯಾಗದಿರುವುದರಿಂದ, ಸರಳವಾಗಿ ಮನೆಯಲ್ಲೇ ಫ್ಯಾಮಿಲಿ ಜೊತೆ ಹಬ್ಬವನ್ನು ಆಚರಿಸಲು ಯೋಚನೆ ಮಾಡಿದ್ದೇನೆ.
ಎಲ್ಲರೂ ಮನೆಯಲ್ಲಿ ಇದ್ದು ಸಂಕ್ರಾಂತಿ ಆಚರಿಸಿ.

– ಶ್ರೀಲೀಲಾ, ನಟಿ

ಟಾಪ್ ನ್ಯೂಸ್

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು

Lok Sabha Election: ಸೀನಿಯರ್‌ ಖೂಬಾಗೆ ಜ್ಯೂನಿಯರ್‌ ಖಂಡ್ರೆ ಸವಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

New Movie: ಪತ್ರಕರ್ತ ಚಿತ್ರಕ್ಕೆ ಮುಹೂರ್ತ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

Dr Rajkumar: ಇಂದು ರಾಜ್‌ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.