ವಿಜಯಪುರದಲ್ಲಿ ಸರ್ಕಾರಿ ಹಾಡು!
Team Udayavani, May 11, 2017, 2:35 PM IST
“ಜೋಗಿ’ ಖ್ಯಾತಿಯ ಅಶ್ವಿನಿ ರಾಮ್ಪ್ರಸಾದ್ ಮತ್ತೆ ಬಂದಿರುವುದು ಎಲ್ಲರಿಗೂ ಗೊತ್ತಿದೆ. ಸದ್ದಿಲ್ಲದೆಯೇ ಅವರು “ಸರ್ಕಾರಿ ಕೆಲಸ ದೇವರ ಕೆಲಸ ‘ ಎಂಬ ಸಿನಿಮಾ ಮಾಡಿರುವುದೂ ಗೊತ್ತು. ಈಗ ಹೊಸ ವಿಷಯ ಏನೆಂದರೆ, ಅಶ್ವಿನಿ ರಾಮ್ಪ್ರಸಾದ್ ಚಿತ್ರದ ಆಡಿಯೋ ಬಿಡುಗಡೆಯನ್ನು ಉತ್ತರ ಕರ್ನಾಟಕದ ತವರೂರು ಎನಿಸಿರುವ ವಿಜಯಪುರದಲ್ಲಿ ಮಾಡಲು ಸಜ್ಜಾಗಿದ್ದಾರೆ.
ಅಶ್ವಿನಿ ರಾಮ್ಪ್ರಸಾದ್ ವಿಜಯಪುರದಲ್ಲೇ ತಮ್ಮ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡೋಕೂ ಕಾರಣವಿದೆ. ಕಳೆದ ಎರಡು ದಶಕಗಳ ಹಿಂದೆ ಅವರು ತಮ್ಮ ಅಶ್ವಿನಿ ರೆಕಾರ್ಡಿಂಗ್ ಕಂಪೆನಿ ಮೂಲಕ “ಬೊಳ್ಳುಳ್ಳವ್ವ ಬೊಳ್ಳುಳ್ಳಿ’ ಎಂಬ ಜಾನಪದ ಗೀತೆ ಹೊರತಂದಿದ್ದರು. ಅದು ಸೂಪರ್ ಡೂಪರ್ ಹಿಟ್ ಆಗಿತ್ತು. ಈಗ ಅವರು ತಮ್ಮ ನಿರ್ಮಾಣದ “ಸರ್ಕಾರಿ ಕೆಲಸ ದೇವರ ಕೆಲಸ’ ಚಿತ್ರದಲ್ಲಿ ಅದೇ ಹಾಡನ್ನು ರಿಮೀಕ್ಸ್ ಮಾಡಿ ಬಳಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಷೆಯಲ್ಲಿರುವ ಆ ಹಾಡನ್ನು ಅಲ್ಲಿನ ಜನರ ಎದುರೇ ಬಿಡುಗಡೆ ಮಾಡಬೇಕು ಎಂಬುದು ಅವರ ಉದ್ದೇಶ. ಹಾಗಾಗಿ ಮೇ 13 ರ ಸಂಜೆ 6 ಗಂಟೆಗೆ ಬಿ.ಎಲ್.ಡಿ.ಇ.ಎ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮದಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡಲಿದ್ದಾರೆ.
ಅಷ್ಟೇ ಅಲ್ಲ, ಗಾಯಕ ಚಂದನ್ ಶೆಟ್ಟಿ ಅಂದು “ಸಂಭ್ರಮ’ ಎಂಬ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಅಂದಿನ ಕಾರ್ಯಕ್ರಮದಲ್ಲಿ ನಟ ನೀನಾಸಂ ಸತೀಶ್ ಕೂಡ ಹೈಲೆಟ್ ಆಗಲಿದ್ದಾರೆ. ಆ ಕಾರ್ಯಕ್ರಮದಲ್ಲಿ “ಬೊಳ್ಳುಳ್ಳವ್ವ ಬೊಳ್ಳುಳ್ಳಿ’ ಹಾಡಿಗೆ ನೃತ್ಯ ತಂಡವೊಂದು ಹೆಜ್ಜೆಹಾಕುವ ಮೂಲಕ ವಿಜಾಪುರ ಮಂದಿಗೆ ಮನರಂಜನೆ ಕೊಡಲಿದೆ. ಅದರೊಂದಿಗೆ “ಸರ್ಕಾರಿ ಕೆಲಸ ದೇವರ ಕೆಲಸ’ ಚಿತ್ರದಲ್ಲಿ ಚಂದನ್ ಶೆಟ್ಟಿ ಕೂಡ ವಿಶೇಷವಾದ ಹಾಡೊಂದನ್ನು ಹಾಡಿದ್ದಾರೆ. ಅಂದು ಆ ಹಾಡಿಗೂ ಚಂದನ್ ಶೆಟ್ಟಿ ದನಿಯಾಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Madhya pradesh Lok Sabha 20204: ಮಧ್ಯಪ್ರದೇಶದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿ
Vijayapura; ವಿಕಸಿತ ಭಾರತದಲ್ಲಾಗಿರುವ ಅಭಿವೃದ್ಧಿ ಏನು: ಕೆಪಿಸಿಸಿ ವಕ್ತಾರ ಗಣಿಹಾರ ಪ್ರಶ್ನೆ
Pavagada: ಬೈಕ್ ಗೆ ಕಾಡು ಹಂದಿ ಡಿಕ್ಕಿಯಾಗಿ ಸವಾರ ಸಾವು
Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?