ಬಾಹುಬಲಿ ನೋಡಿ ದಕ್ಷಿಣ ಭಾರತದ ಚಿತ್ರಗಳ ಆಸೆ ಹುಟ್ಟಿತು


Team Udayavani, Apr 1, 2018, 11:33 AM IST

simran.jpg

ನೀವು ಚಿತ್ರಮಂದಿರಕ್ಕೆ ಹೋದ ಕೂಡಲೇ ಮೊದಲು ನಿಮಗೆ ಸಿನಿಮಾಕ್ಕಿಂತ ಮುಂಚೆ “ಧೂಮಪಾನ ಹಾನಿಕಾರ’ ಎಂಬ ಜಾಹೀರಾತು ಕಾಣುತ್ತದೆ. ತಂದೆ ಸಿಗರೇಟು ಸೇದುವುದನ್ನೇ ನೋಡುವ ಪುಟ್ಟ ಹೆಣ್ಣುಮಗಳು, ಹಿನ್ನೆಲೆಯಲ್ಲಿ “ಖುಷಿ ಯಾರಿಗೆ ಬೇಡ, ಧೂಮ್ರಪಾನಕ್ಕೆ ಬೆಲೆ ತೆರಬೇಕಾದಿತು’ ಎಂಬ ಮಾತು ಕೇಳಿಬರುತ್ತಿದೆ. ಆ ಜಾಹೀರಾತಿನಲ್ಲಿ ಪುಟ್ಟ ಬಾಲಕಿಯಾಗಿ ಕಾಣಿಸಿಕೊಂಡವರು ಸಿಮ್ರಾನ್‌ ನಾಟೇಕರ್‌.

ಎಂಟು ವರ್ಷವಿರುವಾಗ ಆ ಜಾಹೀರಾತಿನಲ್ಲಿ ಸಿಮ್ರಾನ್‌ ಕಾಣಿಸಿಕೊಂಡಿದ್ದರು. ಇವತ್ತು ಸಿಮ್ರಾನ್‌ ನಾಯಕಿಯಾಗಿದ್ದಾರೆ. ಆದರೆ, ಚಿತ್ರಮಂದಿರಗಳಲ್ಲಿ ಇವತ್ತಿಗೂ ಅದೇ ಜಾಹೀರಾತು. ಕನ್ನಡದ “ಕಾಜಲ್‌’ ಚಿತ್ರದಲ್ಲಿ ಈ ನೋ ಸ್ಮೋಕಿಂಗ್‌ ಬೇಬಿ ಸಿಮ್ರಾನ್‌ ನಟಿಸಿದ್ದಾರೆ. ಮೊದಲ ಬಾರಿಗೆ ಕನ್ನಡ ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟಿರುವ ಸಿಮ್ರಾನ್‌ ಜೊತೆಗಿನ ಚಿಟ್‌ಚಾಟ್‌ ಇಲ್ಲಿದೆ …
  
* ನೀವು ಎಂಟು ವರ್ಷವಿದ್ದಾಗ ಚಿತ್ರೀಕರಿಸಿದ ಜಾಹೀರಾತು ಈಗಲೂ ಪ್ರಸಾರವಾಗುತ್ತಿದೆ?
ಹೌದು, ನಾನು ಎಂಟು ವರ್ಷವಿರುವಾಗ ಮಾಡಿದ ಮೊದಲ ಜಾಹೀರಾತಿದು. ಆ ಜಾಹೀರಾತು ಚಿತ್ರೀಕರಣವಾಗಿ ನಾಲ್ಕು ವರ್ಷ ಅದನ್ನು ಬಳಸಿರಲಿಲ್ಲ. ನಾನು ಕೂಡಾ ಮರೆತು ಬಿಟ್ಟಿದ್ದೆ. ಆ ನಂತರ ಹಾಕಿದರು. ಅದೊಂದು ದಿನ ನನ್ನ ಅಮ್ಮನ ಫ್ರೆಂಡ್‌ ಫೋನ್‌ ಮಾಡಿ, “ನಿಮ್ಮ ಮಗಳ ಜಾಹೀರಾತು ಬರುತ್ತಿದೆ’ ಎಂದು ಹೇಳಿದಾಗಲೇ ನನಗೆ ಈ ಜಾಹೀರಾತು ಬಳಕೆಯಾಯಿತೆಂದು ಗೊತ್ತಾಗಿದ್ದು.

* ಆ ಜಾಹೀರಾತು ನೋಡಿದಾಗ ನಿಮಗೆ ಹೇಗನಿಸುತ್ತಿದೆ?
ಖುಷಿಯಾಗುತ್ತಿದೆ. ಸಿಗರೇಟು ಸೇದಬೇಡಿ ಎಂದು ಹೇಳುವ ಜಾಹೀರಾತಾಗಿರುವುದರಿಂದ ನನಗೆ ಹೆಮ್ಮೆ ಇದೆ. ಎಲ್ಲರೂ ನನ್ನನ್ನ “ನೋ ಸ್ಮೋಕಿಂಗ್‌ ಹುಡುಗಿ’ ಎಂದು ಕರೆಯುತ್ತಾರೆ.

* ನಿಮ್ಮ ಬಣ್ಣದ ಬದುಕಿನ ಪಯಣದ ಬಗ್ಗೆ ಹೇಳಿ?
ನಾನು 150ಕ್ಕೂ ಹೆಚ್ಚು ಜಾಹೀರಾತು ಮಾಡಿದ್ದೇನೆ. 4 ಟಿವಿ ಶೋ, ಕೆಲವು ಹಿಂದಿ ಸಿನಿಮಾ ಹಾಗೂ ಒಂದು ಗುಜರಾತಿ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ. 

* ಕನ್ನಡ ಸಿನಿಮಾ ಮಾಡಲು ಕಾರಣ?
ನನಗೆ ಹಿಂದಿನಿಂದಲೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಇತ್ತು. ಆದರೆ ಹೇಗೆ ಮತ್ತು ಯಾರನ್ನು ಸಂಪರ್ಕಿಸಬೇಕೆಂದು ಗೊತ್ತಿರಲಿಲ್ಲ. ಆ ಸಂದರ್ಭದಲ್ಲಿ ನನಗೆ “ಕಾಜಲ್‌’ ಚಿತ್ರದ ಅವಕಾಶ ಬಂತು. ಕಥೆ ಹಾಗೂ ನನ್ನ ಪಾತ್ರ ಇಷ್ಟವಾಗಿ ಒಪ್ಪಿಕೊಂಡೆ.

* ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟಿಸಬೇಕೆಂಬ ನಿಮ್ಮ ಕನಸಿಗೆ ಕಾರಣವೇನು?
ನಿಜ ಹೇಳಬೇಕೆಂದರೆ ನಾನು “ಬಾಹುಬಲಿ’ ಚಿತ್ರ ನೋಡಿ ಫಿದಾ ಆಗಿದ್ದೆ. ಆ ನಂತರ ನನಗೆ ಸೌತ್‌ ಇಂಡಿಯನ್‌ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಬಂತು.

* ನೀವು “ಕಾಜಲ್‌’ ಚಿತ್ರಕ್ಕಾಗಿ ಮೂರು ಹಿಂದಿ ಸಿನಿಮಾಗಳನ್ನು ಬಿಟ್ಟಿದೀರಂತೆ?
ಹೌದು, ನಾನು ಈ ಕಥೆ ಕೇಳಿ ಒಪ್ಪಿಕೊಂಡ ಸಮಯದಲ್ಲೇ ಆ ಸಿನಿಮಾಗಳ ಅವಕಾಶ ಬಂತು. ಆದರೆ, ನನಗೆ ಸೌತ್‌ ಇಂಡಿಯನ್‌ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದರಿಂದ ನಾನು ಹಿಂದಿ ಸಿನಿಮಾಗಳನ್ನು ಬಿಟ್ಟೆ.

* “ಕಾಜಲ್‌’ ಚಿತ್ರದಲ್ಲಿ ನಿಮ್ಮ ಪಾತ್ರವೇನು?
ನಾನಿಲ್ಲಿ ಅಮೆರಿಕಾದಿಂದ ಇಲ್ಲಿನ ಹಳ್ಳಿಯೊಂದಕ್ಕೆ ಬರುವ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಇಲ್ಲಿಗೆ ಬಂದ ನಂತರ ಏನೆಲ್ಲಾ ಆಗುತ್ತದೆ, ಅಮೆರಿಕಾದಲ್ಲಿ ಹುಟ್ಟಿ ಬೆಳೆದ ನಾನು ಇಲ್ಲಿನ ವಾತಾರವರಣಕ್ಕೆ ಹೇಗೆ ಹೊಂದಿಕೊಳ್ಳುತ್ತೇನೆ ಎಂಬ ಅಂಶದೊಂದಿಗೆ ನನ್ನ ಪಾತ್ರ ಸಾಗುತ್ತದೆ. 

* ಮುಂದೆ ಕನ್ನಡದಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೀರಾ?
ಖಂಡಿತಾ ನಟಿಸುತ್ತೇನೆ. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಆಸೆ ನನಗಿದೆ. 

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.