ಹಿರಿಯ ನಟಿ ಜಯಂತಿ ಗುಣಮುಖ
Team Udayavani, Apr 6, 2018, 5:38 PM IST
ಕಳೆದ ಕೆಲವು ದಿನಗಳಿಂದ ವಿಕ್ರಮ್ ಆಸ್ಪತ್ರೆಯಲ್ಲಿ ಅಸ್ತಮಾ ಹಾಗೂ ಉಸಿರಾಟದ ತೊಂದರೆಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಜಯಂತಿ ಸಂಪೂರ್ಣ ಈಗ ಗುಣಮುಖರಾಗಿದ್ದು, ಶುಕ್ರವಾರ ಮನೆಗೆ ತೆರಳಿದ್ದಾರೆ. ಮನೆಯಲ್ಲಿ ಕಟ್ಟುನಿಟ್ಟಿನ ಆಹಾರ ಪದಾರ್ಥಗಳ ಜೊತೆಗೆ ವಿಶ್ರಾಂತಿ ಪಡೆಯುವಂತೆ ವಿಕ್ರಂ ಆಸ್ಪತ್ರೆಯ ವೈದ್ಯರು ಅವರಿಗೆ ಸೂಚಿಸಿದ್ದಾರೆ.
ಮನೆಗೆ ತೆರಳುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಅವರು, “ನನ್ನ ಆರೋಗ್ಯ ವಿಚಾರಿಸಿದ ಹಾಗೂ ಬೇಗನೇ ಗುಣಮುಖವಾಗುವಂತೆ ಪ್ರಾರ್ಥಿಸಿದ ಎಲ್ಲರಿಗೂ ನಾನು ಕೃತಜ್ಞತೆ ಸಲ್ಲಿಸುತ್ತೇನೆ. ಮುಖ್ಯವಾಗಿ ಮಾಧ್ಯಮಗಳು ಪ್ರತಿ ನಿತ್ಯ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದವು. ನನಗಾಗಿ ಆಸ್ಪತೆಯ ಬಳಿ ಕಾಯುತ್ತಿದ್ದವು. ಬೇರೆ ಭಾಷೆಯ ಮಾಧ್ಯಮಗಳು ನನ್ನ ಆರೋಗ್ಯದ ಬಗ್ಗೆ ಹುಸಿ ಸುದ್ದಿ ಹಬ್ಬಿಸಿದ್ದವು.
ಆದರೆ ನಮ್ಮ ಕನ್ನಡದ ಮಾಧ್ಯಮಗಳು ವಾಸ್ತವಾಂಶವನ್ನಷ್ಟೇ ಬಿತ್ತರಿಸಿದ್ದು ಹೆಮ್ಮೆ ಅನಿಸುತ್ತಿದೆ. ನನ್ನಿಂದ ಯಾರಿಗಾದರೂ ತೊಂದರೆಯಾದರೆ ಕ್ಷಮಿಸಿ’ ಎಂದು ಭಾವುಕರಾದರು. ಜಯಂತಿ ಪುತ್ರ ಕೃಷ್ಣಕುಮಾರ್ ಮಾತನಾಡಿ, ಅಮ್ಮನ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕೆಂದು ವೈದ್ಯರು ಒಂದು ಪಟ್ಟಿಕೊಟ್ಟಿದ್ದಾರೆ. ಹತ್ತು ದಿನಗಳ ನಂತರ ಮತ್ತೆ ತಪಾಸಣೆಗೆ ಬರುವಂತೆ ಸೂಚಿಸಿದ್ದಾರೆ ಎಂದರು. ಜಯಂತಿ ಅವರಿಗೆ ಡಾ.ಸತೀಶ್ ನೇತೃತ್ವದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ