ತಮಿಳು ಸಿನಿಮಾಕ್ಕೆ ಸೆಟ್ ಬಿಟ್ಟುಕೊಟ್ಟ ಬುದ್ಧಿವಂತ
Team Udayavani, Dec 2, 2019, 10:43 AM IST
ಉಪೇಂದ್ರ ನಾಯಕರಾಗಿರುವ “ಬುದ್ಧಿವಂತ-2′ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದೆ. ಇತ್ತೀಚೆಗೆಶಿವಮೊಗ್ಗದಲ್ಲಿ ಜೈಲ್ ಸೆಟ್ ಹಾಕಿ ಚಿತ್ರೀಕರಣ ಕೂಡಾನಡೆದಿದೆ. ಸಾಮಾನ್ಯವಾಗಿ ಚಿತ್ರೀಕರಣ ನಡೆದ ನಂತರ ಸೆಟ್ಅನ್ನು ತೆಗೆಯಲಾಗುತ್ತದೆ. ಆದರೆ, “ಬುದ್ಧಿವಂತ-2′ ತಂಡ ಮಾತ್ರ ತಮ್ಮ ಸೆಟ್ ಅನ್ನು ಕೆಡವದೇ, ಮತ್ತೂಂದು ಚಿತ್ರಕ್ಕೆಸಹಾಯವಾಗುವಂತೆ ಬಿಟ್ಟುಕೊಟ್ಟಿದೆ.
ಅದು ತಮಿಳು ಸಿನಿಮಾವೊಂದಕ್ಕೆ! ಹೌದು, ತಮಿಳಿನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ದೊಡ್ಡ ಹಿಟ್ ಆದ “ಖೈದಿ‘ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ ಈಗ ತಮಿಳಿನ ಇಬ್ಬರು ಸ್ಟಾರ್ ನಟರಾದ ವಿಜಯ್ ಹಾಗೂ ವಿಜಯ್ ಸೇತುಪತಿಯವರಿಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾಕ್ಕಾಗಿಯೇ “ಬುದ್ಧಿವಂತ-2′ ಸೆಟ್ ಅನ್ನು ಬಿಟ್ಟುಕೊಡಲಾಗಿದೆ. “ಬುದ್ಧಿವಂತ-2′ ಚಿತ್ರೀಕರಣ ಮುಗಿಸಿ ಹೊರಡುವ ವೇಳೆ, ತಮಿಳು ಚಿತ್ರದ ಪ್ರೊಡಕ್ಷನ್ ಮ್ಯಾನೇಜರ್ ಬಂದು, “ಈ ಸೆಟ್ ಅನ್ನು ನಾವು ಬಳಸಬಹುದಾ‘ ಎಂದ ಕೇಳಿದರಂತೆ. ಇದಕ್ಕೆ “ಬುದ್ಧಿವಂತ-2′ ನಿರ್ಮಾಪಕ ಟಿ.ಆರ್.ಚಂದ್ರಶೇಖರ್ ಖುಷಿಯಿಂದಲೇ ಒಪ್ಪಿದ್ದಾರೆ.
ಒಂದಷ್ಟು ಬದಲಾವಣೆ ಮಾಡಿಕೊಂಡು “ಬುದ್ಧಿವಂತ-2′ ಸೆಟ್ನಲ್ಲಿ ತಮಿಳು ಸಿನಿಮಾದ ಚಿತ್ರೀಕರಣವೂ ನಡೆಯಲಿದೆ. ಈ ಬಗ್ಗೆ ಮಾತನಾಡುವ ನಿರ್ಮಾಪಕ ಟಿ.ಆರ್.ಚಂದ್ರಶೇಖರ್, “ನಮ್ಮ ಸೆಟ್ ಅನ್ನು ತಮಿಳು ಸಿನಿಮಾದವರು ಬಳಕೆ ಮಾಡುತ್ತಾರೆಂದಾಗ ಖುಷಿಯಿಂದ ಒಪ್ಪಿಕೊಂಡೆ.
ಅಷ್ಟೊಂದು ಖರ್ಚು ಮಾಡಿ ಹಾಕಿರುವ ಸೆಟ್ ಅನ್ನು ಸುಮ್ಮನೆ ತೆಗೆದು ಹಾಕುವ ಬದಲುಯಾರಿಗಾದರೂ ಬಳಕೆಯಾಗೋದು ಮುಖ್ಯ‘ ಎನ್ನುವುದು ಚಂದ್ರಶೇಖರ್ ಮಾತು. “ಬುದ್ಧಿವಂತ-2′ ಚಿತ್ರವನ್ನು ಜಯರಾಮ್ ನಿರ್ದೇಶಿಸುತ್ತಿದ್ದು, ಉಪೇಂದ್ರ ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!