ಶರಣ್ಗೆ ಮಂಜು ಸ್ವರಾಜ್ ಚಿತ್ರ
Team Udayavani, Nov 13, 2017, 6:00 PM IST
ಶರಣ್ ಅಭಿನಯದ ಎರಡು ಚಿತ್ರಗಳು ಚಿತ್ರೀಕರಣದಲ್ಲಿವೆ. ತಾವೇ ನಿರ್ಮಿಸಿ-ನಟಿಸಿರುತ್ತಿರುವ “ರ್ಯಾಂಬೋ-2′ ಚಿತ್ರೀಕರಣ ಒಂದು ಕಡೆಯಾದರೆ, ಮಲಯಾಳಂನ “ಟು ಕಂಟ್ರೀಸ್’ ಚಿತ್ರದ ರೀಮೇಕ್ನಲ್ಲೂ ಶರಣ್ ನಟಿಸುತ್ತಿದ್ದಾರೆ. ಈ ನಡುವೆಯೇ ಶರಣ್ ಹೊಸ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕಿನ್ನೂ ಹೆಸರಿಟ್ಟಿಲ್ಲ. ಈಗಷ್ಟೇ ಸ್ಕ್ರಿಪ್ಟ್ ಹಂತದಲ್ಲಿದೆ. ಚಿತ್ರವನ್ನು ತರುಣ್ ಶಿವಪ್ಪ ನಿರ್ಮಿಸುತ್ತಿದ್ದಾರೆ.
ಈ ಹಿಂದೆ “ರೋಸ್’, “ಮಾಸ್ ಲೀಡರ್’ ಸಿನಿಮಾಗಳನ್ನು ನಿರ್ಮಿಸಿದ್ದ ತರುಣ್ ಶಿವಪ್ಪ ಈಗ ಶರಣ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ಮಂಜು ಸ್ವರಾಜ್ ನಿರ್ದೇಶಿಸುತ್ತಿದ್ದಾರೆ. ಶಿವರಾಜಕುಮಾರ್ ಅವರ “ಶ್ರೀಕಂಠ’ ಚಿತ್ರದ ನಂತರ ಮಂಜು ಸ್ವರಾಜ್, ನಿರ್ದೇಶಿಸುತ್ತಿರುವ ಸಿನಿಮಾವಿದು. ಅಂದಹಾಗೆ, ಈ ಹಿಂದೆ ಮಂಜು ಸ್ವರಾಜ್, ಮಿತ್ರ ಅವರಿಗೆ “ಸಣ್ಣಕ್ಕಿ ರಾಮೇಗೌಡ’ ಎಂಬ ಸಿನಿಮಾ ಮಾಡುತ್ತಾರೆಂದು ಸುದ್ದಿಯಾಗಿತ್ತು.
ಆದರೆ, ಈಗ ಆ ಚಿತ್ರ ಮುಂದಕ್ಕೆ ಹೋಗಿದೆ. ಮಂಜು ಸ್ವರಾಜ್ ಹೇಳುವಂತೆ, “ಸದ್ಯಕ್ಕೆ ಆ ಚಿತ್ರ ಮಾಡುತ್ತಿಲ್ಲ. ಅದಕ್ಕಿಂತ ಮುಂಚಿನ ಕಮಿಟ್ಮೆಂಟ್ ಮುಗಿಸಿಕೊಂಡು ಆ ಸಿನಿಮಾ ಮಾಡುವ ಆಲೋಚನೆ ಇದೆ’ ಎನ್ನುತ್ತಾರೆ ಮಂಜು ಸ್ವರಾಜ್. ಶರಣ್ ನಾಯಕರಾಗಿರುವ ಚಿತ್ರಕ್ಕೆ ತರುಣ್ ಸುಧೀರ್ ಅವರು ಸ್ಕ್ರಿಪ್ಟ್ ಮಾಡುತ್ತಿದ್ದಾರೆ. ಈ ಹಿಂದೆ ತರುಣ್ ಸುಧೀರ್ ಅವರ “ರ್ಯಾಂಬೋ’, “ವಿಕ್ಟರಿ’, “ಅಧ್ಯಕ್ಷ’ ಚಿತ್ರಗಳ ಸ್ಕ್ರಿಪ್ಟ್ನಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು.
“ವಿಕ್ಟರಿ’ ಹಾಗೂ “ಅಧ್ಯಕ್ಷ’ ಚಿತ್ರಗಳನ್ನು ತರುಣ್ ಸುಧೀರ್ ಸಹೋದರ ನಂದಕಿಶೋರ್ ನಿರ್ದೇಶಿಸಿದ್ದರು. ಇಬ್ಬರ ಕೈ ಚಳಕ ಫಲಿಸಿತ್ತು. ಈಗ ಮತ್ತೂಮ್ಮೆ ಶರಣ್ ಸಿನಿಮಾದ ಸ್ಕ್ರಿಪ್ಟ್ನಲ್ಲಿ ಕೂತಿದ್ದಾರೆ ತರುಣ್. ಸದ್ಯ ಚಿತ್ರಕ್ಕೆ ನಾಯಕಿಯಾಗಲೀ, ಶೀರ್ಷಿಕೆಯಾಗಲೀ ಅಂತಿಮವಾಗಿಲ್ಲ. ಅರ್ಜುನ್ ಜನ್ಯಾ ಸಂಗೀತ ನೀಡುತ್ತಿದ್ದು, ಚಿತ್ರ ಸಂಕ್ರಾಂತಿ ವೇಳೆಗೆ ಸೆಟ್ಟೇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Temperature ರಾಜ್ಯದ 10 ಜಿಲ್ಲೆಗಳಲ್ಲಿ ಬೀಸಲಿದೆ ಬಿಸಿಗಾಳಿ
Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ
ಸಂಪತ್ತು ಹಂಚಿಕೆ ಬಗ್ಗೆ ನಾವೆಲ್ಲಿ ಹೇಳಿದ್ದೇವೆ: ಖರ್ಗೆ ಪ್ರಶ್ನೆ