“ಮಳೆಬಿಲ್ಲು’ ಮೇಲೆ ಶರತ್ ಕನಸು
Team Udayavani, Jul 15, 2019, 3:03 AM IST
ಚಿತ್ರರಂಗಕ್ಕೆ ಬರುವ ಹೊಸ ನಾಯಕ ನಟರು ತುಂಬಾ ಎಕ್ಸೆ„ಟ್ ಆಗುವ ದಿನ ಯಾವುದೆಂದರೆ ತಮ್ಮ ಸಿನಿಮಾದ ಬಿಡುಗಡೆಯ ದಿನಾಂಕ ಹತ್ತಿರ ಬರುವಾಗ. ಜನ ತಮ್ಮ ಸಿನಿಮಾವನ್ನು ಹೇಗೆ ತೆಗೆದುಕೊಳ್ಳುತ್ತಾರೋ ಎಂಬ ಕಾತರ ಮನೆ ಮಾಡಿರುತ್ತದೆ. ಈಗ ನವನಟ ಶರತ್ ಅವರಿಗೂ ಈ ತರಹದ ಒಂದು ಅನುಭವವಾಗುತ್ತಿದೆ.
ಯಾವ ಶರತ್ ಎಂದರೆ “ಮಳೆಬಿಲ್ಲು’ ಸಿನಿಮಾ ಬಗ್ಗೆ ಹೇಳಬೇಕು. “ಮಳೆಬಿಲ್ಲು’ ಎಂಬ ಸಿನಿಮಾವೊಂದು ಬರುತ್ತಿರುವ ವಿಚಾರ ನಿಮಗೆ ಗೊತ್ತಿರಬಹುದು. ಚಿತ್ರ ಈ ವಾರ (ಜು.19) ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ನವನಟ ಶರತ್ ನಾಯಕರಾಗಿ ನಟಿಸಿದ್ದಾರೆ. ಸೋಲೋ ಹೀರೋ ಆಗಿ ಶರತ್ಗೆ ಇದು ಮೊದಲ ಸಿನಿಮಾ.
ಈ ಹಿಂದೆ “ಕ’ ಎಂಬ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ಆ ನಂತರ ಮುಂಬೈನಲ್ಲಿ ಆ್ಯಕ್ಟಿಂಗ್ ಕೋರ್ಸ್ ಮಾಡಿದ ಶರತ್, “ನಗುವ ನಯನ’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ. “ಮಳೆಬಿಲ್ಲು’ ಶರತ್ ಅವರ ಎರಡನೇ ಸಿನಿಮಾ. ಸ್ಕೂಲ್-ಕಾಲೇಜಿನಲ್ಲಿ ನಡೆಯುವ ಕಥೆಯಾದ್ದರಿಂದ ಶರತ್ ಇಲ್ಲಿ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರಂತೆ.
ಸ್ಕೂಲ್ ಹಾಗೂ ಕಾಲೇಜು ಹುಡುಗನಾಗಿ ನಟಿಸಿದ್ದಾರೆ. ಆರಂಭದಲ್ಲಿ ಸ್ಕೂಲ್ ಹುಡುಗನ ಪಾತ್ರವನ್ನು ಬೇರೆ ಹುಡುಗರಿಂದ ಮಾಡಿಸಲು ನಿರ್ದೇಶಕರು ಚಿಂತನೆ ನಡೆಸಿದ್ದರಂತೆ. ಆದರೆ, ಕೊನೆಗೆ ಶರತ್ ಅವರೇ ಈ ಪಾತ್ರಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡು ನಟಿಸಿದರಂತೆ. ಈ ಪಾತ್ರಕ್ಕಾಗಿ 15 ದಿನದಲ್ಲಿ ಏಳು ಕೆ.ಜಿ ತೂಕ ಇಳಿಸಿದ್ದಾಗಿ ಹೇಳುತ್ತಾರೆ.
ಕಾಲೇಜು ಗೆಟಪ್ನಲ್ಲಿ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾಗಿ ಹೇಳುವ ಶರತ್ಗೆ ಈ ಸಿನಿಮಾ ಮೇಲೆ ವಿಶ್ವಾಸವಿದೆ. “ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈಗಾಗಲೇ ಟ್ರೇಲರ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದ್ದು, ಸಿನಿಮಾವನ್ನೂ ಜನ ಇಷ್ಟಪಡುತ್ತಾರೆಂಬ ವಿಶ್ವಾಸವಿದೆ’ ಎನ್ನುವುದು ಶರತ್ ಮಾತು. ಚಿತ್ರವನ್ನು ನಾಗರಾಜ್ ಹಿರಿಯೂರು ನಿರ್ದೇಶಿಸಿದ್ದು, ನಿಂಗಪ್ಪ ನಿರ್ಮಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ