ಕೇಸ್ ರೀ ಓಪನ್ :ಶಿವಾಜಿ ಸುರತ್ಕಲ್-2ನಲ್ಲಿ ರಮೇಶ್ ಅರವಿಂದ್ ಖಡಕ್ ಲುಕ್
Team Udayavani, Sep 10, 2021, 11:17 AM IST
ನಟ, ನಿರ್ದೇಶಕ ರಮೇಶ್ ಅರವಿಂದ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಅವರ ಹೊಸ ಚಿತ್ರವೊಂದರ ಫಸ್ಟ್ಲುಕ್ ಇಂದು ಬಿಡುಗಡೆಯಾಗುತ್ತಿದೆ.
ಅದು “ಶಿವಾಜಿ ಸುರತ್ಕಲ್-2′.2020ರಲ್ಲಿಬಿಡುಗಡೆಯಾದ ರಮೇಶ್ ಅರವಿಂದ್ನಟನೆಯಲ್ಲಿ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರವಾಗಿ”ಶಿವಾಜಿ ಸುರತ್ಕಲ್’ ಪ್ರೇಕ್ಷಕರ ಮೆಚ್ಚುಗೆ ಪಡೆದಿತ್ತು. ಈಗ ಆ ಚಿತ್ರದ ಮುಂದುವರೆದಭಾಗ ಮಾಡಲು ರಮೇಶ್ ಅರವಿಂದ್ ರೆಡಿಯಾಗಿದ್ದಾರೆ.
ಚಿತ್ರವನ್ನು ಆಕಾಶ್ ಶ್ರೀವತ್ಸನಿರ್ದೇಶನ ಮಾಡಲಿದ್ದಾರೆ. ನಿರ್ಮಾಪಕರಾದರೇಖಾಕೆ. ಎನ್. ಹಾಗು ಅನೂಪ್ ಈಚಿತ್ರವನ್ನು ನಿರ್ಮಿಸಲಿದ್ದಾರೆ.ಕ್ಟೋಬರ್ ನಲ್ಲಿಶೂಟಿಂಗ್ ಶುರುಮಾಡುವಯೋಚನೆಯಲ್ಲಿದೆ.ಶಿವಾಜಿಯಾಗಿ ರಮೇಶ್ ಅರವಿಂದ್ನಟಿಸಿದರೆ, ರಾಧಿಕಾ ನಾರಾಯಣ್, ರಘುರಾಮನಕೊಪ್ಪ ಮತ್ತು ವಿದ್ಯಾಮೂರ್ತಿಭಾಗ-2 ರಲ್ಲೂ ಮುಂದುವರಿಯಲಿದ್ದಾರೆ.ಉಳಿದ ತಾರಾಗಣದಲ್ಲಿ ಹೊಸಮುಖಗಳು ಪರಿಚಯಗೊಳ್ಳಲಿದ್ದಾರೆ.
“ಶಿವಾಜಿ ಸುರತ್ಕಲ್ಎರಡುಕಾಲಘಟ್ಟದಲ್ಲಿ ನಡೆಯುವಚಿತ್ರವಾಗಿತ್ತು ಆದರೆ ಭಾಗ-2ಬಹುಕೋನಗಳಿರುವ ಚಿತ್ರಕಥೆ ಹೊಂದಿದ್ದು, ಪತ್ತೆದಾರಿ ಕಥೆಯಾಗಿರುವುದರಿಂದ ಕೊಲೆಗಾರನ ಹುಡುಕಾಟದ ಮಾರ್ಗದಲ್ಲಿಚಲಿಸುತ್ತಿರುತ್ತದೆ’ ಎನ್ನುವುದು ನಿರ್ದೇಶಕಆಕಾಶ್ ಅವರ ಮಾತು.ಬಿಡುಗಡೆಗೆ 3 ಸಿನಿಮಾ ರೆಡಿ”ಶಿವಾಜಿ ಸುರತ್ಕಲ್-2′ ಇನ್ನಷ್ಟೇ ಆರಂಭವಾಗಬೇಕಾದ ಸಿನಿಮಾವಾದರೆ, ಈಗಾಗಲೇಚಿತ್ರೀಕರಣ ಮುಗಿಸಿರುವ ರಮೇಶ್ಅರವಿಂದ್ ಅವರಮೂರು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.
ಇದನ್ನೂ ಓದಿ:ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಕ್ರಮ: ಸುನಿಲ್ ಸೂಚನೆ
ಅದರಲ್ಲಿ ಎರಡುಅವರನಿರ್ದೇಶನದಚಿತ್ರಗಳು ಎಂಬುದು ಗಮನಾರ್ಹ. “100′, “ಬಟರ್ಫ್ಲೈ’ ಹಾಗೂ”ಭೈರಾದೇವಿ’ ಚಿತ್ರಗಳು ಬಿಡುಗಡೆಗೆರೆಡಿಯಾಗಿವೆ. ಇದರಲ್ಲಿ “100′ ಹಾಗೂ”ಬಟರ್ಫ್ಲೆ’ ಚಿತ್ರಗಳು ರಮೇಶ್ ಅರವಿಂದ್ಅವರ ನಿರ್ದೇಶನದ ಚಿತ್ರಗಳು. “100’ಹೊಸ ಜಾನರ್ಗೆ ಸೇರಿದ ಸಿನಿಮಾ.ಸೈಬರ್ಕ್ರೈಮ್ ಸುತ್ತ ನಡೆಯುವ ಕಥೆ ಇದಾಗಿದೆ. ತಮ್ಮ ಚಿತ್ರದ ಬಗ್ಗೆ ಮಾತನಾಡುವ “ಹುಡುಗಿಯರನ್ನುಹುಡುಗರು ಫಾಲೋ ಮಾಡೋದು, ತೊಂದರೆಕೊಡೋದು ಎಂಬ ಒಂದುಕಾಲವಿತ್ತು. ಈಗ ಫಾಲೋ ಮಾಡೋದು,ತೊಂದರೆಕೊಡೋದು ಎಲ್ಲವೂಸೋಶಿಯಲ್ ಮೀಡಿಯಾ ಮೂಲಕ ಆಗುತ್ತಿದೆ.
ಹೆಣ್ಣು ಮಕ್ಕಳು ಯಾರನ್ನೋ ಫ್ರೆಂಡ್ ಆಗಿ ಒಪ್ಪಿಕೊಳ್ಳುತ್ತಾರೆ. ಆ ನಂತರ ಫ್ರೆಂಡ್ಶಿಪ್ನ ಕಟ್ ಮಾಡೋಕೂ ಆಗಲ್ಲ,ಅನ್ಫ್ರೆಂಡ್ ಮಾಡೋಕೂ ಆಗಲ್ಲ. ಈತರಹ ವಿಪರೀತ ತೊಂದರೆಯಲ್ಲಿ ಕೆಲವು ಹೆಣ್ಮಕ್ಕಳು ಸಿಲುಕಿದ್ದಾರೆ. ಇದನ್ನು “ಸೈಬರ್ಸ್ಟಾಕಿಂಗ್’ ಎನ್ನುತ್ತಾರೆ.ಕಂಪ್ಯೂಟರ್,ಮೊಬೈಲ್ ಮೂಲಕ ಸತತವಾಗಿ ಹುಡುಗಿಯರ ಮೇಲೆ ಕಣ್ಣಿಟ್ಟು ಅವರಿಗೆ ತೊಂದರೆಕೊಡುವ ಒಂದಷ್ಟು ಮಂದಿಇದ್ದಾರೆ. ಆ ತರಹದ ಕಥಾ ವಸ್ತುವನ್ನಿಟ್ಟುಕೊಂಡು ಹೆಣೆದಿರುವ ಕಥೆ 100′ ಎನ್ನುವುದು ರಮೇಶ್ ಅರವಿಂದ್ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ