ಅಯ್ಯಪ್ಪ ಮಾಲಾಧಾರಿಯಾದ ಶಿವಣ್ಣ
Team Udayavani, Feb 23, 2020, 7:01 AM IST
ಪ್ರತಿವರ್ಷದಂತೆ ಈ ವರ್ಷವೂ ನಟ ಶಿವರಾಜ ಕುಮಾರ್ ಅಯ್ಯಪ್ಪ ಸ್ವಾಮಿ ದರ್ಶನ ಕೈಗೊಳ್ಳಲಿದ್ದಾರೆ. ಶನಿವಾರ ಎಂ.ಎಸ್ ರಾಮಯ್ಯ ಆಸ್ಪತ್ರೆಯ ಹತ್ತಿರವಿರುವ ಅಯ್ಯಪ್ಪ ಸ್ವಾಮಿ ದೇವಾಲಯಲ್ಲಿ ಪೂಜೆ ಸಲ್ಲಿಸಿದ ಶಿವಣ್ಣ, ನಿರ್ದೇಶಕ ರಘುರಾಮ್ ಸೇರಿದಂತೆ ಹಲವರ ಜೊತೆಗೆ ಮಾಲಾಧಾರಣೆ ಮಾಡಿದರು. ಈ ವೇಳೆ ಶಿವರಾಜ ಕುಮಾರ್ ಪತ್ನಿ ಗೀತಾ ಶಿವರಾಜ ಕುಮಾರ್ ಸಹ ಹಾಜರಿದ್ದರು.
ಸದ್ಯ ಮಾಲಾಧಾರಿಯಾಗಿರುವ ಶಿವಣ್ಣ ಕೆಲದಿನ ವ್ರತ ನಿರತರಾಗಿರಲಿದ್ದು, ಮಾರ್ಚ್ 14 ರಂದು ಬೆಂಗಳೂರಿನಿಂದ ಶಬರಿಮಲೆಗೆ ಹೊರಡಲಿದ್ದಾರೆ. ಒಂದೆಡೆ “ಭಜರಂಗಿ-2′ ಚಿತ್ರೀಕರಣದಲ್ಲಿ ಶಿವಣ್ಣ ಬ್ಯುಸಿಯಾಗಿದ್ದರೆ, ಮತ್ತೂಂದೆಡೆ “ದ್ರೋಣ’ ಚಿತ್ರದ ಮೂಲಕ ಅಭಿಮಾನಿಗಳಿಗೆ ದರ್ಶನ ಕೊಡಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೆ ಶಿವಣ್ಣ ಅಭಿನಯದ ಮತ್ತೂಂದು ಬಹುನಿರೀಕ್ಷಿತ ಚಿತ್ರ “ಆರ್ಡಿಎಕ್ಸ್’ ಕೂಡ ಅದ್ಧೂರಿಯಾಗಿ ಸೆಟ್ಟೇರಿದೆ.