ಶಿವರಾಜ್ ಕುಮಾರ್ ಶಬರಿಮಲೆ ಯಾತ್ರೆ ರದ್ದು
ಬೆಂಗಳೂರಲ್ಲೇ ಮಾಲೆ ತೆಗೆದ ಹ್ಯಾಟ್ರಿಕ್ ಹೀರೊ
Team Udayavani, Mar 17, 2020, 7:04 AM IST
ನಟ ಶಿವರಾಜ ಕುಮಾರ್ ಪ್ರತಿ ವರ್ಷ ಶಬರಿ ಮಲೆಗೆ ಮಾಲೆ ಹಾಕುತ್ತಾರೆ. ತಮ್ಮ ಸ್ನೇಹಿತರ ಜೊತೆ ಶಬರಿಮಲೆ ದರ್ಶನ ಮಾಡುತ್ತಾರೆ. ಅದರಂತೆ ಈ ವರ್ಷ ಕೂಡಾ ಶಿವರಾಜಕುಮಾರ್ ಶಬರಿ ಮಲೆಗೆ ಮಾಲೆ ಹಾಕಿದ್ದರು. ಶಬರಿಮಲೆಗೆ ಹೋಗಲು ತಯಾರಿ ಕೂಡಾ ನಡೆಸಿದ್ದರು.
ಆದರೆ, ಜಗತ್ತನ್ನು ಆವರಿಸಿರುವ ಕೊರೋನಾ ಎಫೆಕ್ಟ್ ನಿಂದಾಗಿ ಶಿವಣ್ಣ ಈ ವರ್ಷ ಶಬರಿಮಲೆಗೆ ಹೋಗಿಲ್ಲ. ಬದಲಾಗಿ ಇಲ್ಲಿಂದಲೇ ಅಯ್ಯಪ್ಪ ಸ್ವಾಮಿಗೆ ನಮಸ್ಕರಿಸಿ ಮಾಲೆ ತೆಗೆದಿದ್ದಾರೆ. ಭಾನುವಾರ ಜಾಲಹಳ್ಳಿ ಬಳಿಯ ಅಯ್ಯಪ್ಪ ದೇವಸ್ಥಾನದಲ್ಲಿ ಶಿವರಾಜಕುಮಾರ್ ಮಾಲೆ ತೆಗೆದಿದ್ದಾರೆ. ಇವರ ಜೊತೆ ರಘುರಾಮ್ ಸೇರಿದಂತೆ ಸ್ನೇಹಿತರು ಜೊತೆಯಾದರು.
ಸದ್ಯ ಶಿವರಾಜಕುಮಾರ್ ಅವರ “ದ್ರೋಣ’ ಚಿತ್ರ ಬಿಡುಗಡೆಯಾಗಿದೆ. ಆದರೆ, ಸದ್ಯಕ್ಕೆ ಕೊರೋನಾ ಎಫೆಕ್ಟ್ನಿಂದ ಪ್ರದರ್ಶನ ಸ್ಥಗಿತಗೊಂಡಿದೆ. ಇನ್ನು, “ಭಜರಂಗಿ-2′ ಚಿತ್ರದ ಚಿತ್ರೀಕರಣ ಕೂಡಾ ನಿಂತು ಹೋಗಿದೆ. ಈ ನಡುವೆಯೇ ಹೊಸ ಸಿನಿಮಾದ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು