ಮನ್ಸೋರೆ ಚಿತ್ರಕ್ಕೆ ಶ್ರುತಿ ಹರಿಹರನ್‌


Team Udayavani, Dec 20, 2017, 12:08 PM IST

Shruthi-Hariharan.jpg

ರಾಷ್ಟ್ರಪ್ರಶಸ್ತಿ ವಿಜೇತ “ಹರಿವು’ ಚಿತ್ರವನ್ನು ನಿರ್ದೇಶಿಸಿದ್ದ ಮನ್ಸೋರೆ, ಇಷ್ಟು ದಿನ ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಇದೀಗ ಅವರ ಹೊಸದೊಂದು ಸಿನಿಮಾ ಉತ್ತರ ಕೊಟ್ಟಿದೆ. ಹೌದು, ಮನ್ಸೋರೆ ಅವರೊಂದು ಸಿನಿಮಾ ಶುರು ಮಾಡಲು ಹೊರಟಿದ್ದಾರೆ. ಆದರೆ, ಅವರ ಎರಡನೇ ಸಿನಿಮಾನೂ ಕಲಾತ್ಮಕ ಚಿತ್ರವಾಗಿರುತ್ತಾ? ಇದಕ್ಕೆ ಅವರ ಉತ್ತರ, “ಖಂಡಿತ ಇಲ್ಲ. ಇದು ಪರ್ಯಾಯ ಸಿನಿಮಾವಲ್ಲ.

ಹಾಗಂತ, ಕಲಾತ್ಮಕ ಸಿದ್ಧ ಸೂತ್ರಗಳನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿಲ್ಲ. ಇದು ಎಲ್ಲರಿಗೂ ಸಲ್ಲುವ ಚಿತ್ರವಾಗಲಿದೆ. ಸದ್ಯಕ್ಕಿನ್ನೂ ಶೀರ್ಷಿಕೆ ಇಟ್ಟಿಲ್ಲ. ಶ್ರುತಿ ಹರಿಹರನ್‌ ನಾಯಕಿಯಾದರೆ, ರಂಗಭೂಮಿ ಪ್ರತಿಭೆ ಸಂಪತ್‌ಕುಮಾರ್‌ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ವಿವರ ಕೊಡುವ ಮನ್ಸೋರೆ, ಕನ್ನಡ ಮಟ್ಟಿಗೆ ಇದೊಂದು ಹೊಸ ತರಹದ ಚಿತ್ರವಾಗಲಿದೆ ಎಂದು ಭರವಸೆ ಕೊಡುತ್ತಾರೆ.

“ಇಲ್ಲಿ ಚಿತ್ರಕಥೆಯಲ್ಲೊಂದು ಹೊಸ ಪ್ರಯೋಗವಿದೆ. ಬಿಗಿ ನಿರೂಪಣೆಯೊಂದಿಗೇ ಚಿತ್ರ ಸಾಗಲಿದೆ. ಪಕ್ಕಾ ಕಮರ್ಷಿಯಲ್‌ ಸಿನಿಮಾಗಳಲ್ಲಿರುವಂತೆ ಯಾವ ಮಸಾಲೆಯೂ ಇಲ್ಲಿರುವುದಿಲ್ಲ. ಆದರೆ, ಎಲ್ಲಾ ವರ್ಗಕ್ಕೂ ಸಲ್ಲುವಂತಹ ಚಿತ್ರ ಇದಾಗಲಿದೆ. ಒಂದು ಪಟ್ಟಣದ ಹುಡುಗಿ ಸ್ವತಂತ್ರವಾಗಿ ಓಡಾಡುತ್ತಾಳೆ, ಬದುಕುತ್ತಿದ್ದಾಳೆ ಅಂದಾಗ, ಆಕೆ ತುಂಬಾನೇ ಬೋಲ್ಡ್‌ ಆಗಿರುತ್ತಾಳೆ.

ಆದರೆ, ಅವಳಲ್ಲೂ ಒಂದಷ್ಟು ನೋವುಗಳಿರುತ್ತವೆ. ಒಂದು ಚೌಕಟ್ಟಿನಲ್ಲೇ ಎಲ್ಲವನ್ನೂ ಮಾಡುತ್ತಿರುತ್ತಾಳೆ. ಆ ಚೌಕಟ್ಟಿನೊಳಗಿನ ಸಮಸ್ಯೆಗಳನ್ನು ಎದುರಿಸುತ್ತಲೇ ಬದುಕು ಸವೆಸುತ್ತಿರುತ್ತಾಳೆ. ಅದರಿಂದ ಹೊರಗೆ ಬರೋಕೆ ಎಷ್ಟೆಲ್ಲಾ ಕಷ್ಟಪಡ್ತಾಳೆ ಅನ್ನೋದು ಕಥೆ. ಅವಳು ಆ ಸಮಸ್ಯೆಯಿಂದ ಹೊರಬರೋಕೆ ಒಂದು ಪ್ರಮುಖ ಪಾತ್ರ ಕಾರಣವಾಗುತ್ತೆ. ಆ ಪಾತ್ರ ಕೂಡ ಒಂದು ಭ್ರಮೆಯಲ್ಲೇ ಬದುಕು ಕಟ್ಟಿಕೊಂಡಿರುತ್ತೆ.

ಅದರಿಂದ ಆ ಪಾತ್ರವನ್ನು ಹೊರತರುವಲ್ಲಿ ಆ ಹುಡುಗಿ ಪ್ರಯತ್ನಪಡುತ್ತಾಳೆ. ಆ ಭ್ರಮೆ ಏನೆಂಬುದನ್ನು ಸಿನಿಮಾದಲ್ಲೇ ನೋಡಬೇಕು’ ಎನ್ನುತ್ತಾರೆ ಮನ್ಸೋರೆ.  ಇರಾನಿ ಸಿನಿಮಾ “ದಿ ಸಪರೇಷನ್‌’ ಚಿತ್ರದಂತೆಯೇ ಇಲ್ಲೂ ನಿರೂಪಣೆ ಇರುತ್ತೆದೆ ಎನ್ನುವ ಅವರು, “ಒಂದು ಹೆಣ್ಣಿನ ಸುತ್ತ ನಡೆಯೋ ಕಥೆಯಾದ್ದರಿಂದ ಸಂಧ್ಯಾರಾಣಿ ಅವರಿಂದಲೇ ಸಂಭಾಷಣೆ ಬರೆಸುತ್ತಿದ್ದು, ನಾನು ಚಿತ್ರಕಥೆ, ನಿರ್ದೇಶನದ ಜವಾಬ್ದಾರಿ ಹೊತ್ತಿದ್ದೇನೆ. ಸಂಪತ್‌ಕುಮಾರ್‌ ನನ್ನೊಂದಿಗೆ ಕಥೆ ಬಗ್ಗೆ ಚರ್ಚಿಸಿದ್ದಾರೆ.

ಯಾವ ಜಾನರ್‌ ಸಿನಿಮಾ ಅಂತ ಹೇಳ್ಳೋಕೆ ಆಗಲ್ಲ. ಆದರೆ, “ಕ್ವೀನ್‌’, “ಪೀಕು’ ಚಿತ್ರದ ಶೇಡ್‌ ಇಲ್ಲಿ ಕಾಣಲಿದೆ. ಇನ್ನು, “ಹರಿವು’ ಚಿತ್ರಕ್ಕೆ ಛಾಯಾಗ್ರಾಹಕರ ಸಹಾಯಕರಾಗಿದ್ದ ಗುರು ಇಲ್ಲಿ ಕ್ಯಾಮೆರಾ ಹಿಡಿಯುತ್ತಿದ್ದಾರೆ. ರಘುದೀಕ್ಷಿತ್‌ ಅವರಿಂದ ಸಂಗೀತ ಮಾಡಿಸುವ ಯೋಚನೆ ಇದೆ. ಆ ಬಗ್ಗೆ ಇನ್ನಷ್ಟೇ ಮಾತುಕತೆ ನಡೆಸಬೇಕು. ನಾಗೇಂದ್ರ ಅವರು ಸಂಕಲನ ಮಾಡಲಿದ್ದಾರೆ. ಉಳಿದಂತೆ ಇಲ್ಲಿ “ಜಯಮ್ಮನ ಮಗ’ ನಿರ್ದೇಶಕ ವಿಕಾಸ್‌ ಮುಖ್ಯ ಪಾತ್ರ ಮಾಡುತ್ತಿದ್ದಾರೆ’ ಎಂದು ವಿವರ ಕೊಡುತ್ತಾರೆ ಮನ್ಸೋರೆ.

ಟಾಪ್ ನ್ಯೂಸ್

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

12

ʼಭಜರಂಗಿ ಭಾಯಿಜಾನ್‌ʼ, ʼರೌಡಿ ರಾಥೋರ್ʼ ಸೀಕ್ವೆಲ್‌ ಬಗ್ಗೆ ಬಿಗ್‌ ಅಪ್ಡೇಟ್‌ ಕೊಟ್ಟ ನಿರ್ಮಾಪಕ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

Mysore; ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ದುರ್ದೈವದ ಸಂಗತಿ: ಸಿದ್ದರಾಮಯ್ಯ

1-wewqewqe

Revealed; ನೇಹಾ ಹಿರೇಮಠ ಹಂತಕ ಫಯಾಜ್‌ನ ಮತ್ತೊಂದು ಕರಾಳ ಮುಖ ಅನಾವರಣ

13-jp-hegde

Congress: ಸರ್ಕಾರದ ಯೋಜನೆಗಳು ಜನಸ್ನೇಹಿಯಾಗಿರಬೇಕು: ಕೆ.ಜಯಪ್ರಕಾಶ್ ಹೆಗ್ಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ

ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

Doordarshan; ವ್ಯಾಪಕ ಟೀಕೆಗೆ ಕಾರಣವಾದ ಡಿಡಿ ನ್ಯೂಸ್ ಹೊಸ ಲೋಗೋ

15-fusion

Black Saree: ಕಪ್ಪು ಬಣ್ಣಕ್ಕೂ ನನಗೂ ಬಿಡಿಸಲಾರದ ನಂಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.