ನಾವೇ ಇಂದು ನಮಗೊಂದು ಅವಕಾಶ ಕೊಡೋಣ: ಕಾಯ್ಕಿಣಿ ಸಾಹಿತ್ಯ, SPB ಗಾಯನ – ಎಷ್ಟು ಸುಂದರ ಸಂದೇಶ!
Team Udayavani, Mar 27, 2020, 3:45 PM IST
ಬೆಂಗಳೂರು: ಖ್ಯಾತ ಸಾಹಿತಿ ಮತ್ತು ಗೀತ ರಚನೆಕಾರರಾಗಿರುವ ಜಯಂತ್ ಕಾಯ್ಕಿಣಿ ಅವರು ತಮ್ಮ ಸುಮಧುರ ಸಾಹಿತ್ಯದಿಂದ ಸಾಹಿತ್ಯ ಪ್ರೇಮಿಗಳ ಹಾಗೂ ಚಿತ್ರ ರಸಿಕರ ಮನಸ್ಸನ್ನು ಗೆದ್ದವರು. ಇನ್ನು ಬಹುಭಾಷಾ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯ ಅವರ ಕುರಿತಾಗಿ ಏನು ಹೇಳುವುದು. ಗದ್ಯವನ್ನು ಸಹ ಪದ್ಯವಾಗಿಸುವ ಸಾಮರ್ಥ್ಯವಿರುವ ಕಂಠಸಿರಿ ಎಸ್.ಪಿ.ಬಿ. ಅವರದ್ದು.
ಇದೀಗ ಈ ಇಬ್ಬರು ಮಹಾನ್ ತಾರೆಗಳ ಕಾಂಬಿನೇಷನ್ ನಲ್ಲಿ ‘ಕೋವಿಡ್ 19 ವೈರಸ್’ ಮುಂಜಾಗರೂಕತೆಗೆ ಸಂಬಂಧಿಸಿದಂತೆ ಅದ್ಭುತವಾದ ಪದ್ಯವೊಂದು ರೂಪುಗೊಂಡಿದೆ. ಈ ಸಂಕಷ್ಟದ ಸಮಯದಲ್ಲಿ ನಾವೇನು ಮಾಡಬಾರದು ಮತ್ತು ಮಾಡಬೇಕು ಎಂಬುದನ್ನು ಜಯಂತ್ ಕಾಯ್ಕಿಣಿ ಅವರು ಅರ್ಥಪೂರ್ಣವಾಗಿ ಬರೆದಿದ್ದಾರೆ ಹಾಗೂ ಇದಕ್ಕೆ ಎಸ್.ಪಿ.ಬಿ. ಅವರು ತಮ್ಮ ಸುಮಧುರ ಧ್ವನಿಯನ್ನು ನೀಡಿದ್ದಾರೆ.
ಇನ್ನು ಹೆಚ್ಚು ಮಾತೇಕೆ, ಈ ಹಾಡು ಕೇಳುವ ತವಕ ಮನಕೆ..!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ
Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ
Bhuvanam gaganam Teaser: ಭುವನಂ ಗಗನಂ ಟೀಸರ್ ಬಂತು
Bharjari Gandu: ಟ್ರೇಲರ್ನಲ್ಲಿ ಭರ್ಜರಿ ಗಂಡು
Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್ನಲ್ಲಿ ಶೂಟಿಂಗ್!