ಭರದಿಂದ ಸಾಗುತ್ತಿದೆ ಕಿಚ್ಚನ ಪ್ರತಿಮೆ ತಯಾರಿ
Team Udayavani, Oct 7, 2021, 3:48 PM IST
ಮಾನ್ವಿ: ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಸಂಗಪೂರ ಗ್ರಾಮದಲ್ಲಿನ ಗಾಯತ್ರಿ ಶಿಲ್ಪ ಕಲಾಕೇಂದ್ರದಲ್ಲಿ ಶಿಲ್ಪ ಕಲಾವಿದರಾದ ಸುರೇಶ ಆಚಾರ್, ಹಾಗೂ ದೇವರಾಜ್ ಆಚಾರ್ ಹಾಗೂ ಸಹೋದರರ ಕೈಯಲ್ಲಿ ಚಲನಚಿತ್ರ ನಟ ಕಿಚ್ಚಸುದೀಪ ರವರ ಪ್ರತಿಮೆ ತಯಾರಾಗುತ್ತಿದ್ದು ಎಲ್ಲರನ್ನು ಆಕರ್ಷಿಸುತ್ತಿದೆ.
ತಾಲ್ಲೂಕಿನ ಕುರುಕುಂದಿ ಗ್ರಾಮದಲ್ಲಿ ಕಿಚ್ಚ ಸುದೀಪ ಅಭಿಮಾನಿಗಳಿಂದ ಚಲನಚಿತ್ರ ನಟ ಕಿಚ್ಚ ಸುದೀಪರವರಿಗೆ ಅವರ ಅಭಿಮಾನಿಗಳಿಂದ ದೇವಸ್ಥಾನ ನಿರ್ಮಾಣವಾಗುತ್ತಿದ್ದು ದೇವಸ್ಥಾನದಲ್ಲಿ ಪ್ರತಿಷ್ಟಾಪಿಸಲು ಇಲ್ಲಿನ ಶಿಲ್ಪಿಗಳು ಸುಂದರವಾದ ಮೂರ್ತಿಯನ್ನು ತಯಾರಿಸುವುದರಲ್ಲಿ ನಿರತರಾಗಿದ್ದಾರೆ.
ಅ.13ರಂದು ಸುದೀಪ ಅಭಿನಯದ ಕೋಟಿಗೊಬ್ಬ 3 ಬಿಡುಗಡೆಯಾಗಲ್ಲಿದ್ದು ನಂತರದ ದಿನಗಳಲ್ಲಿ ಕಿಚ್ಚ ಸುದೀಪರವರ ಪ್ರತಿಮೆ ಅನಾವರಣ ಸೇರಿದಂತೆ ವಾಲ್ಮೀಕಿ ಮಹರ್ಷಿಗಳ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ಗ್ರಾಮಸ್ಥರು ಮುಂದಾಗಿದ್ದಾರೆ .
ಇದನ್ನೂ ಓದಿ:ಆರ್ ಎಸ್ಎಸ್ ಇರದಿದ್ದರೆ ಭಾರತ ಮೂರ್ನಾಲ್ಕು ಪಾಕಿಸ್ಥಾನವಾಗುತ್ತಿತ್ತು: ಶೆಟ್ಟರ್
ಸುದೀಪ ಅಭಿಮಾನಿ ಬಳಗದ ದೇವರಾಜ ನಾಯಕ ಮಾತನಾಡಿ ಸುದೀಪ್ ರವರು ಸಾಮಾಜಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ರಾಜ್ಯದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಈ ಭಾಗದ ರೈತರೊಬ್ಬರು ಈ ಭಾಗದಲ್ಲಿ ನೀರಾವರಿ ಯೋಜನೆಗಳನ್ನು ತಂದಂತಹ ಮಾಜಿ ಪ್ರಧಾನಿ ದೇವೆಗೌಡರವರ ಮೂರ್ತಿಯನ್ನು ಸ್ಥಾಪಿಸಿದ್ದು ಅವರ ಸ್ಪೂರ್ತಿಯಂತೆ ನಾವು ಕೂಡ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸುದೀಪ್ ರವರ ಅಭಿಮಾನಿಗಳಿದ್ದು ಗ್ರಾಮದ ಶರಣಬಸವ ನಾಯಕ ಪ್ರತಿಮೆ ಸ್ಥಾಪನೆಗಾಗಿ ಉಚಿತವಾಗಿ ನಿವೇಶನ ನೀಡಿದ್ದು, ಅರುಣ ಕುಮಾರ ಬಲ್ಲಟ್ಟಗಿ ಸಹಕಾರ ನೀಡುತ್ತಿದ್ದಾರೆ.
ವಾಲ್ಮೀಕಿ ಪೀಠದ ಪ್ರಸನ್ನನಂದಪುರಿ ಸ್ವಾಮಿಗಳು ಹಾಗೂ ಸುದೀಪರವರ ಆಪ್ತಕಾರ್ಯದರ್ಶಿಗಳನ್ನು ಸಂಪರ್ಕೀಸಲಾಗಿದ್ದು, ಅವರು ಈ ಭಾಗದಲ್ಲಿ ಕೋಟಿಗೊಬ್ಬ ಚಲನಚಿತ್ರದ ಪ್ರಚಾರ ಹಾಗೂ ಮೂರ್ತಿ ಅನಾವರಣಕ್ಕೆ ಅನುಕೂಲವಾಗುವಂತೆ ದಿನಾಂಕವನ್ನು ನೀಡುವುದಾಗಿ ತಿಳಿಸಿದ್ದಾರೆ. ಗ್ರಾಮದ ಸುದೀಪ್ ಅಭಿಮಾನಿಗಳು ಸುದೀಪ್ರನ್ನು ಪ್ರತ್ಯಕ್ಷವಾಗಿ ನೋಡಲು ಕಾತರರಾಗಿದ್ದಾರೆ,
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ