ಹಾಸ್ಯ ನಟರ ಮನೆ ನೋಡಿ ಇಷ್ಟಪಟ್ಟ ಸುದೀಪ್
ಮನೆ ಮಾರಾಟಕ್ಕಿದೆ ಚಿತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ
Team Udayavani, Nov 28, 2019, 6:04 AM IST
ಸುದೀಪ್ ಇತ್ತೀಚೆಗೆ “ಮನೆ’ ನೋಡಿ ಖುಷಿಗೊಂಡಿದ್ದಾರೆ. ಆ ಮನೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ… ಹೀಗೆಂದಾಕ್ಷಣ, ಸುದೀಪ್ ನೋಡಿದ ಆ ಹೊಸ ಮನೆ ಯಾವುದು ಎಂಬ ಪ್ರಶ್ನೆ ಎದುರಾಗಬಹುದು. ಅವರು ನೋಡಿದ್ದು, “ಮನೆ ಮಾರಾಟಕ್ಕಿದೆ’ ಚಿತ್ರ. ಹೌದು, ಇತ್ತೀಚೆಗೆ ಅವರು ತಮ್ಮ ಮನೆಯಲ್ಲೇ ಚಿತ್ರ ವೀಕ್ಷಿಸಿದ್ದಾರೆ. ನಿರ್ದೇಶಕ ಮಂಜುಸ್ವರಾಜ್, ಸಂಗೀತ ನಿರ್ದೇಶಕ ಅಭಿಮನ್ ರಾಯ್, ನಟರಾದ ರವಿಶಂಕರ್ಗೌಡ, ರಾಜೇಶ್ “ನಟರಂಗ’, ಕಾರುಣ್ಯರಾಮ್, ಛಾಯಾಗ್ರಾಹಕ ಸುರೇಶ್ ಬಾಬು ಕೂಡ ಸುದೀಪ್ ಸಿನಿಮಾ ನೋಡುವ ಸಂದರ್ಭದಲ್ಲಿ ಜೊತೆ ಇದ್ದರು.
“ಮನೆ ಮಾರಾಟಕ್ಕಿದೆ’ ಚಿತ್ರ ವೀಕ್ಷಿಸಿದ ನಂತರ, ಸುದೀಪ್ ತಮ್ಮ ಟ್ವಿಟ್ಟರ್ನಲ್ಲಿ “ಚಿತ್ರದ ಕಾನ್ಸೆಪ್ಟ್ ಇಷ್ಟ ಆಯ್ತು. ಹೆಸರಿಸುವ ಕೆಲ ಅಂಶಗಳು ಹೊಸ ಐಡಿಯಾದಲ್ಲಿ ಮಾಡಲಾಗಿದೆ. ಸಾಧು, ಚಿಕ್ಕಣ್ಣ, ರವಿ ಮತ್ತು ಪ್ರತಾಪ್ ಅವರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಹಾಗೆಯೇ ಶ್ರುತಿಹರಿಹರನ್ ಅವರನ್ನು ಕೂಡ ತೆರೆ ಮೇಲೆ ನೋಡಲು ಖುಷಿಯಾಗುತ್ತದೆ. ಅವರು ಪರದೆ ಮೇಲೆ ಚೆನ್ನಾಗಿ ಕಾಣುತ್ತಾರೆ. ಚಿತ್ರ ವೀಕ್ಷಿಸಲು ವಿಶೇಷ ವ್ಯವಸ್ಥೆ ಕಲ್ಪಿಸಿದ್ದಕ್ಕೆ ಥ್ಯಾಂಕ್ಸ್. ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ಸಿನಿಮಾ ವೀಕ್ಷಣೆ ಬಳಿಕ, ನಿರ್ದೇಶಕ ಮಂಜು ಸ್ವರಾಜ್ ಅವರ ನಿರ್ದೇಶನ, ಸಂಗೀತ ನಿರ್ದೇಶಕ ಅಭಿಮನ್ರಾಯ್ ಅವರ ಹಿನ್ನೆಲೆ ಸಂಗೀತದ ಕೆಲಸ ಹಾಗು ಛಾಯಾಗ್ರಾಹಕ ಸುರೇಶ್ಬಾಬು ಅವರ ಲೈಟಿಂಗ್ ಪ್ಯಾಟ್ರನ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ, “ಸಿನಿಮಾವನ್ನು ತುಂಬ ಎಂಜಾಯ್ ಮಾಡಿಕೊಂಡೇ ಸಿನಿಮಾ ನೋಡಿದ್ದೇನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಜು ಸ್ವರಾಜ್ ನಿರ್ದೇಶನದ ಈ ಚಿತ್ರವನ್ನು ಎಸ್.ವಿ.ಬಾಬು ನಿರ್ಮಾಣ ಮಾಡಿದ್ದಾರೆ. ಚಿತ್ರ ನೋಡಿದ ಜನರಿಂದ ಒಳ್ಳೆಯ ಮೆಚ್ಚುಗೆಯೂ ಸಿಕ್ಕಿದೆ.
ಚಿತ್ರದಲ್ಲಿ ಪ್ರತಿಯೊಂದನ್ನೂ ಇಷ್ಟಪಟ್ಟಿರುವ ಜನರು, ಹಾಡು, ಅಭಿಮನ್ರಾಯ್ ಅವರ ಹಿನ್ನೆಲೆ ಸಂಗೀತ ಹಾಗು ಸುರೇಶ್ಬಾಬು ಅವರ ಛಾಯಾಗ್ರಹಣದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರಲ್ಲೂ ತೆರೆ ಮೇಲೆ ನಗುವಿನ ಅಲೆ ಎಬ್ಬಿಸಿರುವ ಸಾಧುಕೋಕಿಲ, ಚಿಕ್ಕಣ್ಣ, ರವಿಶಂಕರ್ಗೌಡ ಹಾಗು ಪ್ರತಾಪ್ ಅವರ ನಟನೆಯನ್ನು ಕೊಂಡಾಡಿದ್ದಾರೆ. ಸದ್ಯಕ್ಕೆ ಉತ್ತಮ ಪ್ರದರ್ಶನ ಕಾಣುತ್ತಿರುವ “ಮನೆ ಮಾರಾಟಕ್ಕಿದೆ’ ಚಿತ್ರ ಸಹಜವಾಗಿಯೇ ತಂಡಕ್ಕೆ ಖುಷಿಯನ್ನು ಹೆಚ್ಚಿಸಿದೆ. ಇದೊಂದು ಕಾಮಿಡಿ ಹಾರರ್ ಜಾನರ್ ಸಿನಿಮಾ ಆಗಿದ್ದು, ನಾಲ್ವರು ಹಾಸ್ಯ ನಟರು ಇಲ್ಲಿ ಮುಖ್ಯ ಆಕರ್ಷಣೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ ಟಿಕೆಟ್ ಡೌಟ್
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ