ಸುನೀಲ್ ರಾವ್ ತುರ್ತು ನಿರ್ಗಮನ
Team Udayavani, Mar 21, 2018, 11:29 AM IST
ನಟ ಸುನೀಲ್ ರಾವ್ ಒಂದು ಗ್ಯಾಪ್ನ ನಂತರ ಮತ್ತೆ ಬಂದಿದ್ದಾರೆ. ಹೊಸ ಸಿನಿಮಾವೊಂದರಲ್ಲಿ ಅವರು ನಟಿಸುತ್ತಿದ್ದು, ಈಗಾಗಲೇ ಬಹುತೇಕ ಚಿತ್ರೀಕರಣ ಕೂಡಾ ಮುಗಿದು ಹೋಗಿದೆ. ಅವರ ಚಿತ್ರದ ಹೆಸರೇ ತುಂಬಾ ವಿಭಿನ್ನವಾಗಿದೆ. ಅದು “ತುರ್ತು ನಿರ್ಗಮನ’. ಈ ಸಿನಿಮಾವನ್ನು ಹೇಮಂತ್ ಕುಮಾರ್ ನಿರ್ದೇಶಿಸುತ್ತಿದ್ದು, ಇವರಿಗೆ ಇದು ಚೊಚ್ಚಲ ಸಿನಿಮಾ. ಚಿತ್ರದಲ್ಲಿ “ಒಂದು ಮೊಟ್ಟೆಯ ಕಥೆ’ಯ ರಾಜ್ ಬಿ ಶೆಟ್ಟಿಗೂ ಪ್ರಮುಖ ಪಾತ್ರವಿದೆ.
ಇಲ್ಲಿ ಅವರು ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರಂತೆ. ನಿರ್ದೇಶಕ ಹೇಮಂತ್ ಹೇಳುವಂತೆ, ಇದೊಂದು ಫ್ಯಾಂಟಸಿ ಡ್ರಾಮಾ. ಜೀವನದಲ್ಲಿ ನಾವು ಊಹಿಸಿಕೊಳ್ಳಲಾಗದಂತಹ ಅಂಶಗಳು ನಡೆದರೆ ಏನಾಗಬಹುದೆಂಬ ವಿಷಯಗಳನ್ನಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರಂತೆ. “ನಾವು ಬೇರೆಯವರ ತರಹ ಇರಬೇಕೆಂದು ಬಯಸುತ್ತೇವೆ. ಆದರೆ, ನಮ್ಮನ್ನು ನಾವು ಕಂಡುಕೊಳ್ಳಲು ಪ್ರಯತ್ನಿಸುವುದಿಲ್ಲ.
ಈ ತರಹದ ಅಂಶಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇನೆ’ ಎನ್ನುವುದು ಹೇಮಂತ್ ಮಾತು. ಚಿತ್ರದಲ್ಲಿ ಸುನೀಲ್ ರಾವ್, ರಾಜ್ ಬಿ ಶೆಟ್ಟಿ, ಸುಧಾರಾಣಿ, ಅಚ್ಯುತ್ ಕುಮಾರ್, ಹಿತಾ ಚಂದ್ರಶೇಖರ್, ಸಂಯುಕ್ತಾ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ಧೀರೇಂದ್ರ ದಾಸ್ ಸಂಗೀತ, ಪ್ರಯಾಗ್ ಛಾಯಾಗ್ರಹಣವಿದೆ. ಭರತ್ ಕುಮಾರ್ ಜೊತೆ ಸೇರಿ ಹೇಮಂತ್ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ