ಹೊಸಬರ ಥ್ರಿಲ್ಲರ್
Team Udayavani, Dec 28, 2017, 11:39 AM IST
ಗಾಂಧಿನಗರಕ್ಕೆ ಹೊಸದಾಗಿ ಬರುವವರ ಫೆವರೇಟ್ ಜಾನರ್ ಅಂದರೆ ಅದು ಹಾರರ್-ಥ್ರಿಲ್ಲರ್ ಎಂದರೆ ತಪ್ಪಲ್ಲ. ಆ ಜಾನರ್ನಲ್ಲೇ ಕಥೆ ಮಾಡಿಕೊಂಡು ಬರುತ್ತಾರೆ. ಈ ಆ ಸಾಲಿಗೆ ಮತ್ತೊಂದು ತಂಡ ಕೂಡಾ ಸೇರಿಕೊಂಡಿದೆ. ಹೊಸಬರೇ ಸೇರಿಕೊಂಡು ಮಾಡುತ್ತಿರುವ ಈ ಸಿನಿಮಾಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ, ಇತ್ತೀಚೆಗೆ ಮುಹೂರ್ತ ವಾಗಿದೆ. ವಿಕ್ರಮ್ ಎನ್ನುವವರು ಈ ಚಿತ್ರದ ನಿರ್ದೇಶಕರು.
ಸಿ.ಎಸ್.ಚಂದ್ರಶೇಖರ್ ನಿರ್ಮಾಣದ ಈ ಚಿತ್ರದಲ್ಲಿ ಸಂಪೂರ್ಣ ಹೊಸಬರೇ ನಟಿಸುತ್ತಿದ್ದಾರೆ. ನಿರ್ದೇಶಕ ವಿಕ್ರಮ್ ಹೇಳುವಂತೆ, ಚಿತ್ರ ಥ್ರಿಲ್ಲರ್ ಹಿನ್ನೆಲೆಯಲ್ಲಿ ಕೂಡಿದ್ದು, ಕಥೆ ಕೂಡಾ ಹೊಸತನ ದಿಂದ ಕೂಡಿದೆ. ಇಂದಿನ ಟ್ರೆಂಡ್ಗೆ ತಕ್ಕಂತೆ ಕಥೆ ಮಾಡಿರುವುದರಿಂದ ಜನ ಸಿನಿಮಾವನ್ನು
ಇಷ್ಟಪಡುತ್ತಾರೆಂಬ ವಿಶ್ವಾಸ ಅವರಿಗಿದೆ.
ಚಿತ್ರದಲ್ಲಿ ಅಂಜನ್ (ವಾಸುದೇವ್), ಹರೀಶ್ ರಾಜ್, ಅಭಿಷೇಕ್, ರಾಘವ್ ಚಂದ್ರ, ಅಭಿ, ಮನು, ಶಶಿಕಲಾ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ರವಿ ಮಂಜು ಅವರ ಕಥೆ, ಚಿತ್ರಕಥೆ, ಸಂಭಾಷಣೆ ಇದೆ. ಚಿತ್ರದ ಚಿತ್ರೀಕರಣ ಜನವರಿ ಮೂರನೇ ವಾರದಿಂದ ಆರಂಭವಾಗಲಿದ್ದು, ಬೆಂಗಳೂರು, ದಾಂಡೇಲಿ ಸುತ್ತಮುತ್ತ ನಡೆಯಲಿದೆ. ಚಿತ್ರದ ಟೈಟಲ್ ಇನ್ನಷ್ಟೇ ಆಗಬೇಕಿದ್ದು, ಆ್ಯಕ್ಷನ್ ಹಿನ್ನೆಲೆಯ ಟೈಟಲ್ ಇರುತ್ತದೆ ಎನ್ನುವುದು ವಿಕ್ರಮ್ ಮಾತು. ಚಿತ್ರಕ್ಕೆ ವಿನಯ್ ಶರ್ಮಾ ಸಂಗೀತ, ಸುರೇಶ್ ಮುತ್ತು ಛಾಯಾಗ್ರಹಣವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್ ಬೈಕ್ನಲ್ಲಿ 64ರ ಹಿರಿಯರ ಸಾಹಸ ಯಾನ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು