ಸವರ್ಣದೀರ್ಘ ಸಂಧಿ: ಮನೋಮೂರ್ತಿ ಸೃಷ್ಟಿಸಿದ ಮನಮೋಹಕ ಹಾಡುಗಳು!
Team Udayavani, Oct 15, 2019, 8:00 AM IST
ಸಂಗೀತ ನಿರ್ದೇಶಕ ಮನೋಮೂರ್ತಿ ಎಂಬ ಹೆಸರು ಕೇಳುತ್ತಿದ್ದಂತೆಯೇ ಪ್ರತೀ ಮನಸುಗಳಲ್ಲಿಯೂ ಮುಂಗಾರುಮಳೆ ಹನಿಯಲಾರಂಭಿಸುತ್ತದೆ. ಮುಂಗಾರುಮಳೆ ಚಿತ್ರದ ಹಾಡುಗಳ ಮೂಲಕ ಮನೋಮೂರ್ತಿ ಪ್ರೇಕ್ಷಕರನ್ನು ಸೋಕಿದ ರೀತಿ ಇಂದಿಗೂ ಕಾಡುತ್ತಲೇ ಇದೆ. ಆ ನಂತರದಲ್ಲಿ ಅವರು ಯಾವ ಚಿತ್ರವನ್ನೇ ಒಪ್ಪಿಕೊಂಡಾಗಲೂ ಜನ ಮುಂಗಾರುಮಳೆಯಂಥಾ ಹಾಡುಗಳಿಗಾಗಿ ಹಂಬಲಿಸುತ್ತಾರೆ. ಮನೋಮೂರ್ತಿ ಕಡೆಯಿಂದ ಮುಂಗಾರು ಮಳೆಯಂಥಾ ಕಮಾಲ್ ಮತ್ತೊಮ್ಮೆ ಸೃಷ್ಟಿಯಾಗಲೆಂದು ಆಶಿಸುತ್ತಾರೆ. ಅದು ಸವರ್ಣದೀರ್ಘ ಸಂಧಿ ಚಿತ್ರದ ಮೂಲಕ ಕೈಗೂಡಿದೆ.
ವೀರೇಂದ್ರ ಶೆಟ್ಟಿ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಚಿತ್ರ ಸವರ್ಣದೀರ್ಘ ಸಂಧಿ. ಲೂಷಿಂಗ್ಟನ್ ಥಾಮಸ್, ಪಿವಿಆರ್ ಹೇಮಂತ್ ಕುಮಾರ್, ಮನೋಮೂರ್ತಿ ಮತ್ತು ವೀರೇಂದ್ರ ಶೆಟ್ಟಿ ಸೇರಿಕೊಂಡು ಈ ಸಿನಿಮಾವನ್ನು ನಿರ್ಮಾಣ ಮಾಡಿರುವ ಈ ಸಿನಿಮಾದ ಸಂಗೀತ ನಿರ್ದೇಶನದೊಂದಿಗೆ ನಿರ್ಮಾಣದಲ್ಲಿಯೂ ಮನೋಮೂರ್ತಿ ಪಾಲುದಾರರಾಗಿದ್ದಾರೆ. ಈ ಚಿತ್ರ ಹಾಡುಗಳು ಇತ್ತೀಚೆಗಷ್ಟೇ ಬಿಡುಗಡೆಯಾಗಿವೆ. ಅದಕ್ಕೆ ಕೇಳಿ ಬರುತ್ತಿರೋ ವ್ಯಾಪಕ ಮೆಚ್ಚುಗೆಗಳೇ ಮಹಾ ಗೆಲುವಿನ ಮುನ್ಸೂಚನೆಯಂತಿದೆ.
ವೀರೇಂದ್ರ ಶೆಟ್ಟಿಯವರೇ ಬರೆದಿರುವ ಕೊಳಲಾದೆನಾ ಕೃಷ್ಣಾ ನಿನ್ನ ಕೈಯಲ್ಲಿ ಎಂಬ ಹಾಡಂತೂ ಟ್ರೆಂಡ್ ಸೆಟ್ ಮಾಡಿದೆ. ಮಾಧುರ್ಯವೇ ತುಂಬಿದಂತಿರೋ ಈ ಹಾಡು ಶ್ರೇಯಾ ಘೋಶಾಲ್ ಧ್ವನಿಯಲ್ಲಿ ಮೂಡಿ ಬಂದಿದೆ. ಇನ್ನುಳಿದ ಹಾಡುಗಳೂ ಕೂಡಾ ಇದರಂತೆಯೇ ಕೇಳುಗರಿಗೆ ಇಷ್ಟವಾಗಿವೆ. ಈ ಮೂಲಕ ಮನೋಮೂರ್ತಿ ಮ್ಯಾಜಿಕ್ಕು ಮತ್ತೊಮ್ಮೆ ಸಂಭವಿಸಿದೆ. ಅವರು ಮುಂಗಾರು ಮಳೆ ಚಿತ್ರದಲ್ಲಿಯೂ ಹಾಡುಗಳ ವಿಚಾರದಲ್ಲಿ ಇಂಥಾದ್ದೇ ಮೋಡಿ ಮಾಡಿದ್ದರು. ಆ ಸಿನಿಮಾ ಕೂಡಾ ಸೂಪರ್ ಹಿಟ್ ಆಗಿತ್ತು. ಅದು ಸವರ್ಣದೀರ್ಘ ಸಂಧಿ ವಿಚಾರದಲ್ಲಿಯೂ ನಿಜವಾಗೋ ಲಕ್ಷಣಗಳಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2006ರ ನಕಲಿ ಎನ್ಕೌಂಟರ್ ಪ್ರಕರಣ: ಮುಂಬೈನ ಮಾಜಿ ಪೊಲೀಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ
Sparrows ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳು..ಆದರೆ ಇಲ್ಲಿವೆ ನೂರಾರು ಚಿಂವ್..ಚಿಂವ್ ಗಳು..
ಉದ್ಯಾವರ-ಮರ್ಣೆ-ಬೆಳ್ಳೆ ರಸ್ತೆ ಅಭಿವೃದ್ಧಿ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ