ರಿಷಭ್ ಶೆಟ್ರ ಬೆಲ್ ಬಾಟಂ-2 ಗೆ ತಾನ್ಯಾ ಹೋಪ್ ನಾಯಕಿ!
Team Udayavani, Jan 20, 2021, 8:19 AM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಯಜಮಾನ’ ಚಿತ್ರದಲ್ಲಿ “ಲಕ್ಸು ಸೋಪು ಹಾಕಿ ಜಳಕ ಮಾಡಿ ಜಸ್ಟ್ ಬಂದಿವ್ನಿ…’ ಹಾಡಿನಲ್ಲಿ ನಡು ಬಳುಕಿಸಿ ಪಡ್ಡೆಗಳ ಗಮನ ಸೆಳೆದಿದ್ದ ನಟಿ ತಾನ್ಯಾ ಹೋಪ್ ನಿಮಗೆ ಗೊತ್ತಿರಬಹುದು. ರೆಬಲ್ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ ಅಭಿನಯದ “ಅಮರ್’ ಚಿತ್ರದಲ್ಲಿ ನಾಯಕಿಯಾಗಿದ್ದ, “ಯಜಮಾನ’ದ ಹಾಡಿನಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದ ತಾನ್ಯಾ ಹೋಪ್, ಆ ನಂತರ ಕನ್ನಡ ಚಿತ್ರಗಳಲ್ಲಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ.
ಅದಾದ ಬಳಿಕ ತಾನ್ಯಾ ಹೋಪ್ ತೆಲುಗಿನ ಎರಡು-ಮೂರು ಚಿತ್ರಗಳಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಅಲ್ಲಲ್ಲಿ ಹರಿದಾಡಿದ್ದರೂ, ಆ ನಂತರ ಆ ಚಿತ್ರಗಳ ಬಗ್ಗೆ ಹೆಚ್ಚೇನು ಮಾಹಿತಿ ಹೊರಬೀಳಲಿಲ್ಲ. ಇದರ ನಡುವೆಯೇ ಕನ್ನಡದಲ್ಲಿ ಕೂಡ ತಾನ್ಯಾ ನಾಯಕಿಯಾಗಿ ಕೆಲ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಸುದ್ದಿಯಾಗಿದ್ದರೂ, ಯಾವ ಚಿತ್ರತಂಡಗಳು ಕೂಡ ತಾನ್ಯಾ ಆಯ್ಕೆಯನ್ನು ಖಚಿತಪಡಿಸಿರಲಿಲ್ಲ. ಇವೆಲ್ಲದರ ನಡುವೆ ಈಗ ತಾನ್ಯಾ ಕನ್ನಡದಲ್ಲಿ ಮತ್ತೂಂದು ಹೊಸಚಿತ್ರಕ್ಕೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಇದನ್ನೂ ಓದಿ:ನ್ಯೂ ಇಂಡಿಯಾ ಕ್ರಿಕೆಟಿಗೆ ಸ್ವಾಗತ, ಸುಸ್ವಾಗತ!
ಹೌದು, ಎರಡು ವರ್ಷಗಳ ಹಿಂದೆ ರಿಷಬ್ ಶೆಟ್ಟಿ ನಾಯಕನಟನಾಗಿ ಅಭಿನಯಿಸಿದ್ದ, ಜಯತೀರ್ಥ ನಿರ್ದೇಶದ “ಬೆಲ್ ಬಾಟಂ’ ಚಿತ್ರ ತೆರೆಗೆ ಬಂದು ಯಶಸ್ವಿಯಾಗಿತ್ತು. ಅದಾದ ಬಳಿಕ ಇದೀಗ “ಬೆಲ್ ಬಾಟಂ’ ಸೀಕ್ವೆಲ್ ಆಗಿ “ಬೆಲ್ ಬಾಟಂ-2′ ಚಿತ್ರ ತೆರೆಗೆ ಬರುತ್ತಿದ್ದು, ಈ ಚಿತ್ರದಲ್ಲೂ ರಿಷಬ್ ಶೆಟ್ಟಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಈ ಚಿತ್ರವನ್ನೂ ಜಯತೀರ್ಥ ನಿರ್ದೇಶನ ಮಾಡುತ್ತಿದ್ದು, ಚಿತ್ರದಲ್ಲಿ ನಾಯಕಿಯಾಗಿ ತಾನ್ಯಾ ಹೋಪ್ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.
ಅಂದಹಾಗೆ, “ಬೆಲ್ ಬಾಟಂ-2′ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ಜ. 29ರಂದು “ಬೆಲ್ ಬಾಟಂ-2′ ಚಿತ್ರ ಸೆಟ್ಟೇರುತ್ತಿದೆ. ರೆಟ್ರೋ ಸ್ಟೈಲ್ನಲ್ಲಿ ಮೂಡಿಬರುತ್ತಿದ್ದು, ಚಿತ್ರದ ಮುಹೂರ್ತದಂದು ನಾಯಕಿಯ ಹೆಸರು ಬಹಿರಂಗ ಪಡಿಸುವ ಸಾಧ್ಯತೆ ಇದ್ದು, ಇಲ್ಲಿಯವರೆಗೆ ಚಿತ್ರತಂಡವಾಗಲಿ, ತಾನ್ಯಾ ಹೋಪ್ ಆಗಲಿ ಈ ವಿಷಯವನ್ನು ಅಧಿಕೃತವಾಗಿ ಖಚಿತಪಡಿಸಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ