ಪ್ರೇಕ್ಷಕರು ಬುದ್ಧಿವಂತರು ಎಲ್ಲವನ್ನು ಬಿಡಿಸಿ ಹೇಳಬೇಕಿಲ್ಲ

ಕವಲುದಾರಿ ಬಗ್ಗೆ ಹೇಮಂತ್‌ ಮಾತು

Team Udayavani, Apr 21, 2019, 3:00 AM IST

Kavaludaari

ನಿರ್ದೇಶಕ ಹೇಮಂತ್‌ ರಾವ್‌ ಖುಷಿಯಾಗಿದ್ದಾರೆ. ಅದಕ್ಕೆ ಕಾರಣ, “ಕವಲುದಾರಿ’ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ. ಪುನೀತ್‌ರಾಜಕುಮಾರ್‌ ನಿರ್ಮಾಣದ ಮೊದಲ ಚಿತ್ರ “ಕವಲುದಾರಿ’ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮೂಲಕ ಇಡೀ ಚಿತ್ರತಂಡ ಖುಷಿಯಾಗಿದೆ. ಅದರಲ್ಲೂ ನಿರ್ದೇಶಕ ಹೇಮಂತ್‌ ಕೊಂಚ ಹೆಚ್ಚೇ ಖುಷಿಯಾಗಿದ್ದಾರೆ.

“ಸಿನಿಮಾ ನೋಡಿದವರೆಲ್ಲರೂ ಚೆನ್ನಾಗಿದೆ ಅಂತಾರೆ. 80-85 ಪರ್ಸೆಂಟ್‌ ಜನ ಇಷ್ಟಪಟ್ಟರೆ, ಇನ್ನು 10-15 ಪರ್ಸೆಂಟ್‌ ಓಕೆ ಓಕೆ ಅಂತಿದ್ದಾರೆ. ಬಿಡುಗಡೆಯಾದ ಎಲ್ಲಾ ಕಡೆಗಳಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಿಂಗಲ್‌ ಸ್ಕ್ರೀನ್‌ನಲ್ಲೂ ಜನ ಇಷ್ಟಪಡುತ್ತಿದ್ದಾರೆ. ಸಿನಿಮಾ ನೋಡಿದ ನಂತರ ಕನೆಕ್ಟ್ ಮಾಡಿಕೊಳ್ಳುತ್ತಿದ್ದಾರೆ. ಅವರವರೇ ಚರ್ಚೆ ಮಾಡಿಕೊಳ್ಳುತ್ತಿದ್ದಾರೆ.

ಇದು ತುಂಬಾ ಖುಷಿ ಕೊಡುತ್ತೆ. ಸಿನಿಮಾವನ್ನು ತುಂಬಾ ಬಿಡಿಸಿ ಹೇಳಿದಾಗ, ನಾನು ಅಷ್ಟೊಂದು ಪೆದ್ದ ಅಲ್ಲಪ್ಪ ಅನ್ನೋ ಫೀಲಿಂಗ್‌ ಪ್ರೇಕ್ಷಕರಿಗೆ ಬರುತ್ತದೆ. ಅದನ್ನು ನಾನು ಈ ಸಿನಿಮಾದಲ್ಲಿ ಮಾಡಿಲ್ಲ. ಆಡಿಯನ್ಸ್‌ ಮೈಂಡ್‌ಗೆ ಕೆಲಸ ಕೊಟ್ಟಿದ್ದೇನೆ’ ಎಂದು ಸಿನಿಮಾ ಬಗ್ಗೆ ಹೇಳುತ್ತಾರೆ. ಕನ್ನಡ ಪ್ರೇಕ್ಷಕರು ಬುದ್ಧಿವಂತರು.

ಅವರಿಗೆ ಎಲ್ಲವನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ ಎಂಬುದು ಹೇಮಂತ್‌ ರಾವ್‌ ಕಂಡುಕೊಂಡ ಸತ್ಯ. “ನಮ್ಮ ಜನರಿಗೆ ಏನೂ ಅರ್ಥ ಆಗಲ್ಲ ಎಂಬ ಭಾವನೆ ಗಾಂಧಿನಗರದ ಅನೇಕರಿಗಿದೆ. ಆದರೆ, ನಾನು, ನಮ್ಮ ಜನ ನಮಗಿಂತ ಬುದ್ಧಿವಂತರು ಎಂಬುದನ್ನು ಮೈಂಡ್‌ನ‌ಲ್ಲಿಟ್ಟುಕೊಂಡು ಕತೆ ಬರೆದಿರೋದು. ಸಿನಿಮಾ ಮಾಡುವಾಗಲೂ ಸ್ಪೂನ್‌ ಸ್ಪೀಡಿಂಗ್‌ ಮಾಡಲಿಲ್ಲ.

ಜನರಿಗೆ ಅರ್ಥ ಮಾಡಿಕೊಳ್ಳುವ ಶಕ್ತಿ ಇದೆ. ಅದರಂತೆ ಇವತ್ತು ಜನಾನೇ ಸಿನಿಮಾವನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ’ ಎನ್ನುತ್ತಾರೆ ಹೇಮಂತ್‌. “ಕವಲುದಾರಿ’ ಚಿತ್ರದ ಬಗ್ಗೆ ಕೇಳಿಬಂದ ಮತ್ತೂಂದು ಕಾಮೆಂಟ್‌ ಎಂದರೆ ಸಿನಿಮಾ ಸ್ವಲ್ಪ ನಿಧಾನವಿದೆ. ನಿರೂಪಣೆ ಇನ್ನಷ್ಟೇ ವೇಗವಿರಬೇಕಿತ್ತೆಂಬುದು. ಈ ಬಗ್ಗೆಯೂ ತಂಡದೊಂದಿಗೆ ಹೇಮಂತ್‌ ಚರ್ಚೆ ಮಾಡಿದ್ದರಂತೆ.

“ಭಾವನೆಗಳನ್ನು ತುಂಬಾ ಬೇಗ ಬೇಗ ಕಟ್ಟಿಕೊಟ್ಟರೆ ಅದು ಜನರಿಗೆ ರಿಜಿಸ್ಟರ್‌ ಆಗಲ್ಲ. ನನ್ನ “ಗೋಧಿ ಬಣ್ಣ’ದಲ್ಲೂ ಇದೇ ರೀತಿಯ ಮಾತು ಕೇಳಿಬಂದಿತ್ತು. ಸಿನಿಮಾ ಹತ್ತು ನಿಮಿಷ ಜಾಸ್ತಿ ಇದೆ ಅನ್ನೋದನ್ನು ಕೇಳ್ಳೋದು ಓಕೆ. ಅದರ ಬದಲು ಸಿನಿಮಾ ಅವಧಿ ಕಡಿಮೆ ಇದೆ, ಸಿನಿಮಾ ಅರ್ಥ ಆಗಿಲ್ಲ.

ಬೇಗನೇ ಮುಗಿಸಿಬಿಟ್ಟರೂ ಅನ್ನೋದಕ್ಕಿಂತ, ಜನ ಹತ್ತು ನಿಮಿಷ ಹೆಚ್ಚಿದೆ ಎಂದು ಹೇಳುವುದನ್ನು ಕೇಳುವುದು ವಾಸಿ. ಕಥೆಯನ್ನು ಅರ್ಧಕ್ಕೆ ಮುಗಿಸಿದರೆ ಅರ್ಧಂಬರ್ಧ ಊಟ ಮಾಡಿದ ಫೀಲ್‌ ಬರುತ್ತೆ. ಇದು ಕಾದಂಬರಿ ಶೈಲಿಯ ಕಥೆ. ತುಂಬಾ ಫಾಸ್ಟ್‌ ಸಿನಿಮಾ ನೋಡಿ ಈ ತರಹದ ಫೀಲ್‌ ಬರೋದು ಸಹಜ’ ಎನ್ನುವುದು ಹೇಮಂತ್‌ ಮಾತು.

ನಟ ಪುನೀತ್‌ರಾಜಕುಮಾರ್‌ ಕೂಡಾ ಸಿನಿಮಾಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಖುಷಿಯಾಗಿದ್ದಾರಂತೆ. ಈಗಾಗಲೇ ವಿದೇಶಗಳಲ್ಲೂ ತೆರೆಕಂಡಿದ್ದು, ಅಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ರಿಷಿ, ಅನಂತ್‌ನಾಗ್‌, ರೋಶನಿ, ಸಂಪತ್‌, ಅಚ್ಯುತ್‌ ಸೇರಿದಂತೆ ಅನೇಕರು ಪ್ರಮುಖ ಪಾತ್ರ ಮಾಡಿದ್ದಾರೆ.

ಟಾಪ್ ನ್ಯೂಸ್

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

marigold

Marigold; ನಿರ್ಮಾಪಕರ ಮೊಗದಲ್ಲಿ ಮಾರಿಗೋಲ್ಡ್‌ ನಗು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Udupi; ಚೆಕ್‌ ಅಮಾನ್ಯ ಪ್ರಕರಣ: ಆರೋಪಿಗೆ ಶಿಕ್ಷೆ

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Belthangady ಶಾಲಾ ಬಸ್‌ ಚಾಲಕ ಹೃದಯಾಘಾತದಿಂದ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Mangaluru ವೈದ್ಯಕೀಯ ಪದವೀಧರೆ ಪಿಜಿಯಲ್ಲಿ ಸಾವು

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Heavy Rain: ಹಿಮಾಚಲದಲ್ಲಿ ಭಾರೀ ಮಳೆ… 112 ರಸ್ತೆಗಳು ಬಂದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.