“ಬುದ್ಧಿವಂತ’ನ ಭರ್ಜರಿ ಫೈಟ್
Team Udayavani, Dec 28, 2019, 7:03 AM IST
ಉಪೇಂದ್ರ ಅಭಿನಯದ “ಬುದ್ಧಿವಂತ-2′ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಶಿವಮೊಗ್ಗದಲ್ಲಿ ಚಿತ್ರೀಕರಣ ಮುಗಿಸಿಕೊಂಡು ಬಂದ ಚಿತ್ರತಂಡ ಈಗ ಚಿಕ್ಕಬಳ್ಳಾಪುರದತ್ತ ತೆರಳಿದೆ. ಅದು ಆ್ಯಕ್ಷನ್ ಎಪಿಸೋಡ್ಗಾಗಿ. ಹೌದು, “ಬುದ್ಧಿವಂತ-2′ ಚಿತ್ರದ ಚಿತ್ರೀಕರಣ ಚಿಕ್ಕಬಳ್ಳಾಪುರದ ರಂಗಸ್ಥಳಂ ಎಂಬ ದೇವಸ್ಥಾನದಲ್ಲಿ ನಡೆಯುತ್ತಿದೆ.
ನಾಯಕ-ನಾಯಕಿಯ ಮದುವೆ ವೇಳೆ ನುಗ್ಗುವ ರೌಡಿಗಳೊಂದಿಗೆ ಉಪೇಂದ್ರ ಹೊಡೆದಾಡುತ್ತಿದ್ದಾರೆ. ಸುಮಾರು 40ಕ್ಕೂ ಹೆಚ್ಚು ರೌಡಿಗಳನ್ನು ಹೊಡೆದುರುಳಿಸುವ ದೃಶ್ಯವನ್ನು ನಿರ್ದೇಶಕ ಜಯರಾಂ ಭದ್ರಾವತಿ ಚಿತ್ರೀಕರಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕಾಗಿ ಸೆಟ್ಗಳನ್ನು ಕೂಡಾ ಹಾಕಲಾಗಿದೆ.
ಸೋನಾಲ್ ಮೊಂತೆರೋ ನಾಯಕಿಯಾಗಿರುವ ಈ ಚಿತ್ರವನ್ನು ಕ್ರಿಸ್ಟಲ್ ಪಾರ್ಕ್ ಬ್ಯಾನರ್ನಡಿ ಟಿ.ಆರ್.ಚಂದ್ರಶೇಖರ್ ನಿರ್ಮಿಸುತ್ತಿದ್ದಾರೆ. ಈ ಹಿಂದೆ “ಚಮಕ್’, “ಆಯೋಗ್ಯ’, “ಬೀರ್ಬಲ್’ ಸೇರಿದಂತೆ ಹಲವು ಚಿತ್ರಗಳನ್ನು ನಿರ್ಮಿಸಿರುವ ಚಂದ್ರಶೇಖರ್ ಈಗ ಉಪೇಂದ್ರ ಅವರ ಸಿನಿಮಾ ಮಾಡುತ್ತಿದ್ದಾರೆ.