ಅಭಿಮಾನಿಗಳು ಗಲಾಟೆ ಮಾಡೋದಾದ್ರೆ ನಮ್ ತಾಯಾಣೆಗೂ ಥಿಯೇಟ್ರಿಗೆ ಬರೋಲ್ಲ
Team Udayavani, Oct 2, 2018, 11:09 AM IST
ಶಿವರಾಜಕುಮಾರ್ ಹಾಗೂ ಸುದೀಪ್ ನಟನೆಯ ದಿ ವಿಲನ್ ಚಿತ್ರ ಇದೇ 18ರಂದು ಬಿಡುಗಡೆಯಾಗುತ್ತಿದೆ. ಸುದೀಪ್ ಹಾಗೂ ಶಿವಣ್ಣ ಇಬ್ಬರು ಮೊದಲ ಬಾರಿ ನಟಿಸಿರುವುದರಿಂದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಶಿವರಾಜಕುಮಾರ್, “ಅಭಿಮಾನಿಗಳು ಸಿನಿಮಾವನ್ನು ಸಿನಿಮಾವಾಗಿ ನೋಡಬೇಕು.
ಯಾವುದೇ ಕಾರಣಕ್ಕೂ ನಾನಾ-ನೀನಾ, ಅವರಿಗೆ ಹೆಚ್ಚು ಪ್ರಾಮುಖ್ಯತೆ-ಇವರಿಗೆ ಕೊಟ್ಟಿಲ್ಲ ಎಂಬ ಲೆಕ್ಕಾಚಾರಕ್ಕೆ ಹೋಗಬಾರದು. ಯಾವ ಜಾಗದಲ್ಲಿ ಯಾವ ನಟ ಸ್ಕೋರ್ ಮಾಡಬೇಕೋ ಅವರು ಮಾಡಿರ್ತಾರೆ. ಅದು ಬಿಟ್ಟು ಅಭಿಮಾನಿಗಳು ಥಿಯೇಟರ್ಗೆ ಬಂದು ಏನಾದ್ರೂ ಗಲಾಟೆ ಮಾಡೋದಾದ್ರೆ, ನಾನು ನಮ್ಮ ತಾಯಾಣೆಗೂ ಥಿಯೇಟರ್ಗೆ ಬರೋದಿಲ್ಲ. ನಾನು ತಾಯಿ ಆಣೆ ಇಟ್ರೆ ಅದನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡ್ತೇನೆ.
ಒಂದು ವೇಳೆ ಗಲಾಟೆ ಮಾಡ್ತೀರಂತಾದ್ರೆ ಖಂಡಿತ ಬರೋದಿಲ್ಲ. ಈ ಸಿನಿಮಾವನ್ನು ಒಂದು ಕಾಂಬಿನೇಷನ್ ಸಿನಿಮಾವಾಗಿ ಎಂಜಾಯ್ ಮಾಡಿ. ಈ ಥರದ ಸಿನಿಮಾಗಳನ್ನು ಅಭಿಮಾನಿಗಳು ಪ್ರೋತ್ಸಾಹಿಸಬೇಕೇ ವಿನಾ, ಅವರೇ ವಿಲನ್ಗಳಾಗಬಾರದು. ಒಂದುವೇಳೆ ಆ ರೀತಿ ಏನಾದ್ರೂ ಅಡ್ಡಿ ಮಾಡೋದಾದ್ರೆ ಇನ್ನೊಮ್ಮೆ ಹೇಳ್ತಿದ್ದೀನಿ, ಖಂಡಿತಾ ನಾನು ಥಿಯೇಟ್ರಿಗೆ ಬರೋದಿಲ್ಲ’ ಎಂದು ಎಚ್ಚರಿಕೆ ಕೊಟ್ಟರು.
ಮುಂದೆ ಮಾತನಾಡಿದ ಶಿವಣ್ಣ, “ನನ್ನ ಅಭಿಮಾನಿಗಳಾಗಲಿ, ಸುದೀಪ್ ದಿ ವಿಲನ್ ಬಿಡುಗಡೆ ಹಿನ್ನೆಲೆಯಲ್ಲಿ ಶಿವರಾಜ್ಕುಮಾರ್ ಖಡಕ್ ನುಡಿ ಅಭಿಮಾನಿಗಳಾಗಲಿ, ಪುನೀತ್ ಅಭಿಮಾನಿಗಳಾಗಲೀ… ದರ್ಶನ್ ಅಭಿಮಾನಿಗಳಾಗಲಿ… ಯಾರದೇ ಅಭಿಮಾನಿಗಳಾಗಲಿ, ಸಿನಿಮಾವನ್ನು ಸಿನಿಮಾವಾಗೇ ನೋಡಬೇಕು. ನಾವೆಲ್ಲರೂ ಒಂದಾಗೇ ಇದ್ದೇವೆ. ಸಣ್ಣ ಪುಟ್ಟ ವಿಚಾರಗಳನ್ನು ದೊಡ್ಡದು ಮಾಡಿ ವಿವಾದಕ್ಕೆಡೆ ಮಾಡಿಕೊಡಬಾರದು’ ಎಂದರು ಶಿವಣ್ಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್