ಕಳೆದೋದ ಕಾಳಿದಾಸ ಬಂದ್ ಬಿಟ್ಟ!
ಕಾಣದಂತೆ ಮಾಯವಾದವರ ಕಥೆಯಿದು ...
Team Udayavani, Sep 25, 2019, 3:00 AM IST
ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಗೆ ಸಿದ್ಧವಾಗಿರುವ ಒಂದಷ್ಟು ಚಿತ್ರಗಳು ನಿರೀಕ್ಷೆ ಹುಟ್ಟುಹಾಕಿರೋದು ಸುಳ್ಳಲ್ಲ. ಹೀಗೆ ರೆಗ್ಯುಲರ್ ಜಾನರ್ ಬಿಟ್ಟ ಸಿನಿಮಾಗಳ ಸಾಲಿನಲ್ಲಿ ಸಾಕಷ್ಟು ಸಿನಿಮಾಗಳು ಕಾಣಸಿಗುತ್ತವೆ. ಅದರಲ್ಲಿ “ಕಾಣದಂತೆ ಮಾಯವಾದನು’ ಚಿತ್ರ ಕೂಡಾ ಒಂದು. ಈ ಹಿಂದೆ “ಜಯಮ್ಮನ ಮಗ’ ಚಿತ್ರ ನಿರ್ದೇಶಿಸಿದ್ದ ವಿಕಾಸ್ ಹೀರೋ ಆಗಿ ನಟಿಸುತ್ತಿರುವ ಸಿನಿಮಾವಿದು.
ಈಗಾಗಲೇ ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಇತ್ತೀಚೆಗಷ್ಟೇ ಚಿತ್ರತಂಡ ಆಯೋಜಿಸಿದ್ದ ಟ್ಯಾಗ್ಲೈನ್ ಸ್ಪರ್ಧೆಯಲ್ಲಿ ಚಿತ್ರಕ್ಕೆ “ಗೋರಿ ಆದ್ಮೇಲೆ ಹುಟ್ಟಿದ್ ಸ್ಟೋರಿ’ ಎಂಬ ಟ್ಯಾಗ್ಲೈನ್ ಸಿಕ್ಕಿದೆ. ಈಗ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರದ ಹಾಡೊಂದು ಬಿಡುಗಡೆಯಾಗಿದೆ. ಅದು ಪುನೀತ್ರಾಜ್ಕುಮಾರ್ ಹಾಡಿರುವ ಹಾಡು.
ಈ ಹಿಂದೆ ಚಿತ್ರದ ಟ್ರೇಲರ್ ನೋಡಿ ಮೆಚ್ಚಿಕೊಂಡಿದ್ದ ಪುನೀತ್ ರಾಜ್ಕುಮಾರ್ ಈಗ “ಕಾಣದಂತೆ ಮಾಯವಾದನು’ ಚಿತ್ರಕ್ಕೊಂದು ಹಾಡು ಹಾಡಿದ್ದಾರೆ. “ಕಳೆದೋದ ಕಾಳಿದಾಸ’ ಎಂಬ ಹಾಡನ್ನು ಪುನೀತ್ರಾಜ್ಕುಮಾರ್ ಹಾಡಿದ್ದಾರೆ. ಈ ಹಾಡು ಆನಂದ್ ಆಡಿಯೋದಲ್ಲಿ ಮಂಗಳವಾರ ಬಿಡುಗಡೆಯಾಗಿದೆ. ಈ ಚಿತ್ರವನ್ನು ರಾಜ್ ಪತ್ತಿಪಾಟಿ ನಿರ್ದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್