ಬೆಂಕಿ ಜೊತೆಗೆ “ಪಡ್ಡೆಹುಲಿ’ ಸರಸ
Team Udayavani, Feb 25, 2018, 10:41 AM IST
ಕೆ. ಮಂಜು ತಮ್ಮ ಮಗ ಶ್ರೇಯಸ್ನನ್ನು “ಪಡ್ಡೆ ಹುಲಿ’ ಮೂಲಕ ಹೀರೋ ಮಾಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರವನ್ನು “ರಾಜಾ ಹುಲಿ’, “ಸಂಹಾರ’ ಮುಂತಾದ ಚಿತ್ರಗಳನ್ನು ನಿರ್ದೇಶಿಸಿರುವ ಗುರು ದೇಶಪಾಂಡೆ ನಿರ್ದೇಶಿಸುತ್ತಿದ್ದಾರೆ. ಆ ಚಿತ್ರದ ಚಿತ್ರೀಕರಣ ಮಾರ್ಚ್ 5ರಿಂದ ಪ್ರಾರಂಭವಾಗಲಿದ್ದು, ಈ ಮಧ್ಯೆ ಒಂದು ಪ್ರೋಮೋ ಹಾಡನ್ನು ಚಿತ್ರೀಕರಿಸಲಾಗುತ್ತಿದೆ.
ಮಿನರ್ವ ಮಿಲ್ ಮತ್ತು ಟೊರಿನೋ ಫ್ಯಾಕ್ಟರಿಯಲ್ಲಿ ಹಾಡಿಗಾಗಿ ಸೆಟ್ ಹಾಕಲಾಗಿದ್ದು, ಅದಲ್ಲಿ ಕೆಲವು ದಿನಗಳಿಂದ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಬೆಂಕಿ, ನೀರು ಮತ್ತು ಗಾಳಿಯನ್ನು ಪ್ರಮುಖವಾಗಿಟ್ಟುಕೊಂಡು ಹಾಡನ್ನು ಚಿತ್ರೀಕರಣ ಮಾಡಲಾಗುತ್ತಿದೆ. ಈ ಹಾಡಿನಲ್ಲಿ ನಾಯಕ ಬೆಂಕಿಯನ್ನು ಬೇಧಿಸುವ ದೃಶ್ಯಗಳನ್ನು ಸೆರೆಹಿಡಿಯಲಾಗಿದ್ದು, ಶ್ರೇಯಸ್ ಧೈರ್ಯವಾಗಿ ಮೈಯೆಲ್ಲಾ ಬೆಂಕಿ ಹಚ್ಚಿಕೊಂಡಿರುವ ಹಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ.
“ಪಡ್ಡ ಹುಲಿ’ ಚಿತ್ರದಲ್ಲಿ ಶ್ರೇಯಸ್ ಎದುರು ಹೊಸ ನಾಯಕಿಯನ್ನು ಪರಿಚಯಿಸಲಾಗುತ್ತಿದೆ. ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದ್ದು, ಚಿತ್ರಕ್ಕೆ ಅಜನೀಶ್ ಲೋಕನಾಥ್ ಅವರ ಸಂಗೀತ ಮತ್ತು ಕೆ.ಎಸ್. ಚಂದ್ರಶೇಖರ್ ಅವರ ಛಾಯಾಗ್ರಹಣ ಇರಲಿದೆ. ಚಿತ್ರವನ್ನು ನಿರ್ಮಾಪಕ ರಮೇಶ್ ರೆಡ್ಡಿ ಮೂವರಲ್ಲಿ ಒಬ್ಬರು ನಿರ್ಮಿಸುತ್ತಿದ್ದು, ಸದ್ಯದಲ್ಲೇ ಚಿತ್ರವನ್ನು ಪ್ರೋಮೋ ಹಾಡಿನ ಮೂಲಕ ಭರ್ಜರಿಯಾಗಿ ಲಾಂಚ್ ಮಾಡಲಾಗುತ್ತಿದೆ.