ಹರಿನಾಮದ ಹಿಂದಿನ ಸೀಕ್ರೇಟ್‌!


Team Udayavani, May 17, 2020, 5:02 AM IST

shruti-haripriya

ಕನ್ನಡದ ನಟಿಯರಲ್ಲಿ ಒಬ್ಬರಾದ ಹರಿಪ್ರಿಯಾ ತಮ್ಮ ಹೆಸರಿನ ಹಿಂದಿರುವ ಕಥೆಯನ್ನು ತೆರೆದಿಟ್ಟಿದ್ದಾರೆ. ಇತ್ತೀಚೆಗೆ ತಾವು ಪ್ರಾರಂಭಿಸಿರುವ ಬೇಬ್‌ ನೋಸ್‌ ಬ್ಲಾಗ್‌ ನಲ್ಲಿ ಹರಿಪ್ರಿಯಾ ತಮ್ಮ ಹೆಸರಿನ ಹಿಂದಿರುವ ಕಥೆಯನ್ನು  ರೆದುಕೊಂಡಿದ್ದಾರೆ. ಅನೇಕರಿಗೆ ನನ್ನ ಜನ್ಮ ಹೆಸರು ಶ್ರುತಿ ಎಂದುತಿಳಿದಿಲ್ಲ, ಆದರೆ ಹಾಗೆ ತಿಳಿದಿದ್ದವರು ನಾನೇಕೆ ಹರಿಪ್ರಿಯಾ ಎಂದು ಹೆಸರನ್ನು ಬದಲಿಸಿದೆ ಎಂದು ಕೇಳುತ್ತಾರೆ. ತುಳು ಚಿತ್ರದಲ್ಲಿ ನನಗೆ ಮೊದಲ ಬಾರಿ ಅಭಿನಯಿಸಲು ಅವಕಾಶ ಸಿಕ್ಕಾಗ ನಾನು ಪಿಯು ಮೊದಲ ವರ್ಷದಲ್ಲಿ ಕಲಿಯುತ್ತಿದ್ದೆ

. ನನ್ನ ಮೊದಲ ತುಳು ಚಲನಚಿತ್ರ ಬದಿ ಅನ್ನು ನೀವು  ನೋಡಿದರೆ, ರೋಲಿಂಗ್‌ ಕ್ರೆಡಿಟ್‌ಗಳಲ್ಲಿ ಅವರು ನನ್ನ ಹೆಸರನ್ನು ಶ್ರುತಿ ಎಂದು ತೋರಿಸಿರುವುದು ಕಾಣುತ್ತದೆ.  ಹಾಗೆ ನಾನು ತುಳು ಚಿತ್ರದಲ್ಲಿ ನಟಿಸುತ್ತಿದ್ದಾಗ ಕನ್ನಡ ಚಿತ್ರೋದ್ಯಮ ದಿಂದಲೂ ನನಗೆ ಆಫರ್‌ ಬಂದವು. ಆಗ ನಾನು ನನ್ನ ಹೆಸರನ್ನು ಬದಲಿಸಿಕೊಳುವಂತೆ ಬದಿ ಚಿತ್ರದ ನಿರ್ದೇಶಕ ಸುಧಾಕರ್‌ ಬನ್ನಂಜೆ ಸೂಚಿಸಿದ್ದರು. ಏಕೆಂದರೆ  ಕನ್ನಡದಲ್ಲಿ ಶ್ರುತಿ ಹೆಸರಿನ ಖ್ಯಾತ ನಟಿ ಅದಾಗಲೇ ಇದ್ದರು. ನಿರ್ದೇಶಕ ಬನ್ನಂಜೆ ಜ್ಯೋತಿಷ್ಯದಲ್ಲಿ ಯೂ ಪರಿಣತರಾಗಿದ್ದ ಕಾರಣ ನಾನು ಹೆಚ್‌ ಅಕ್ಷರದಿಂದ ಪ್ರಾರಂಭಿಸಿ ನನ್ನ ಹೆಸರನ್ನು ಬದಲಾಯಿಸುವಂತೆ ತನ್ನ ತಾಯಿಗೆ  ಸೂಚಿಸಿದರು.

ಹಲವಾರು ಹೆಸರುಗಳ ಆಯ್ಕೆಪಟ್ಟಿಯನ್ನು ಹುಡುಕಿದ ನಂತರ ಅಂತಿಮವಾಗಿ ಹರಿಪ್ರಿಯಾ ಎಂಬ ಹೆಸರನ್ನು ಆರಿಸಿದೆ. ನಾನು ಭಾವಿಸಿದ ಸಕಾರಾತ್ಮಕ ಅರ್ಥ ಹಾಗೂ ಸ್ವರಗಳು ಮಾತ್ರವಲ್ಲ ಹರಿಪ್ರಿಯಾ ಎಂದರೆ ಲಕ್ಷ್ಮಿ  ಎಂಬ ಕಾರಣದಿಂದ ಹರಿಪ್ರಿಯಾ ಎಂಬ ಹೆಸರನ್ನು ಇಷ್ಟಪಟ್ಟೆ- ಹರಿಪ್ರಿಯ ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದಾರೆ. ಈಗ ನಾನು ನನ್ನ ಹೆಸರ ಬಗ್ಗೆ ಯೋಚಿಸಿದಾಗ ಹರಿಪ್ರಿಯಾ 12 ವರ್ಷಗಳ ಹಿಂದೆ ಅಸ್ತಿತ್ವದಲ್ಲಿರಲಿಲ್ಲ ಎಂದು  ಬುವುದು  ಕಷ್ಟವಾಗುತ್ತದೆ. ಆದರೆ ಶ್ರುತಿ ಈಗಲೂ ಇದ್ದಾಳೆ. ಹರಿಪ್ರಿಯಾ ಎಂಬ ಹೆಸರಿನಿಂದ ಲಕ್ಷಾಂತರ ಜನರಿಂದ ನಾನು ಪ್ರೀತಿಸಲ್ಪಟ್ಟಿದ್ದೇನೆ ಮತ್ತು ಗುರುತಿಸಲ್ಪಟ್ಟಿದ್ದೇನೆ,

ಆದರೆ ನನ್ನ ತಂದೆಗೆ ಈ ಬಗ್ಗೆ ಗೊತ್ತಿಲ್ಲ ಅಥವಾ ಆ ಹೆಸರಿನಿಂದ ನನ್ನನ್ನು  ಅವರು ಕರೆದಿಲ್ಲ ಎಂದು ನನಗೆ ನೋವಿದೆ. ಅವರು ಒಮ್ಮೆಯಾದರೂ ನನ್ನನ್ನು ಹರಿಪ್ರಿಯಾ ಎಂದು ಕರೆಯಬೇಕೆಂದು ನಾನು ಬಯಸುತ್ತೇನೆ. ಹೇಗಾದರೂ, ನಾನು ನನ್ನ ಹೆಸರನ್ನು ಬದಲಾಯಿಸಿದ ನಂತರ, ನನ್ನ ಮೊದಲ ಕನ್ನಡ  ಚಲನಚಿತ್ರದಿಂದ ರೋಲಿಂಗ್‌ ಕ್ರೆಡಿಟ್‌ಗಳಲ್ಲಿ ಹರಿಪ್ರಿಯಾ ಎಂದೇ ನನ್ನನ್ನು ತೋರಿಸಲು ಪ್ರಾರಂಭಿಸಿದ್ದರು. ತಮಾಷೆಯ ಸಂಗತಿಯೆಂದರೆ, ನನ್ನ ಕುಟುಂಬವು ನನ್ನನ್ನು ಹರಿಪ್ರಿಯಾ ಎಂಬ ಹೆಸರಿನಿಂದ ಕರೆದಾಗ ನಾನು ಎಂದಿಗೂ ಪ್ರತಿಕ್ರಿಯಿಸಲಿಲ್ಲ.

ಏಕೆಂದರೆ ಅವರ ಪಾಲಿಗೆ ನಾನೆಂದಿಗೂ ಶ್ರುತಿಯಾಗಿಯೇ ಇದ್ದೆ.  ಆದ್ದರಿಂದ, ಇಲ್ಲಿಯವರೆಗೆ ನನ್ನ ತಾಯಿ, ಸಹೋದರ ಮತ್ತು ಸಂಬಂಧಿಕರು ನನ್ನನ್ನು ಶ್ರುತಿ ಎಂದು ಕರೆಯುತ್ತಾರೆ. ನನ್ನ ಎರಡೂ ಹೆಸರುಗಳು ನನಗೆ  ಬಾ ಪ್ರಿಯವಾಗಿವೆ  ಮತ್ತು ನಾನು ಯಾವುದನ್ನೂ ಬಿಡಲು ಬಯಸುವುದಿಲ್ಲ. ನನ್ನ ವೈಯಕ್ತಿಕ ಜೀವನದಲ್ಲಿ ನಾನು ಯಾವಾಗಲೂ ಶ್ರುತಿಯಾಗಿರುತ್ತೇನೆ, ಆದರೆ ಪರದೆಯ ಮೇಲೆ, ನಾನು ಯಾವಾಗಲೂ ನಿಮ್ಮ ಪ್ರಿಯ ಹರಿಪ್ರಿಯಾ  ಗಿರುತ್ತೇನೆ ಎಂದಿದ್ದಾರೆ.

ಟಾಪ್ ನ್ಯೂಸ್

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Mother Geetha hiremath statement on daughter Neha incident

Hubli; ನನ್ನ ಮಗಳು ಹೊಲಸು ಕೆಲಸ ಮಾಡಿಲ್ಲ…: ನೇಹಾ ತಾಯಿ ಗೀತಾ ಹಿರೇಮಠ ಹೇಳಿಕೆ

8

Mollywood: ಈ ದಿನ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿಗೆ ಬರುವುದು ಖಚಿತ; ಯಾವುದರಲ್ಲಿ ಸ್ಟ್ರೀಮ್?

kl rahul breaks ms dhoni record in ipl

IPL 2024; ಎಂ.ಎಸ್ ಧೋನಿ ದಾಖಲೆ ಮುರಿದ ಕೆ.ಎಲ್ ರಾಹುಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Sandalwood; ‘ಫಾರೆಸ್ಟ್‌’ನಲ್ಲಿ ಚಿಕ್ಕಣ್ಣ & ಟೀಂ

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

nalkane ayama kannada movie

Sandalwood; ‘ನಾಲ್ಕನೇ ಆಯಾಮ’ ಮೇಲೆ ಗೌತಮ್‌ ಕನಸು: ಇಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

IPL; To win the RCB Cup first….: What did Robin Uthappa say?

IPL; ಆರ್ ಸಿಬಿ ಕಪ್ ಗೆಲ್ಲಬೇಕಾದರೆ ಮೊದಲು….: ರಾಬಿನ್ ಉತ್ತಪ್ಪ ಹೇಳಿದ್ದೇನು?

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

Gadag; ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಕೊಲೆಗಡುಕರೇ ಪ್ರಥಮ ಪ್ರಜೆಗಳು: ಬಸವರಾಜ ಬೊಮ್ಮಾಯಿ

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

B. Y. Raghavendra: “ಕಾಂಗ್ರೆಸ್‌ ನಾಯಕರ ಮನಸ್ಥಿತಿಗೆ ತಕ್ಕಂತೆ “ಚೊಂಬು’ ಜಾಹೀರಾತು’

10-

Lok Sabha Election 2024: ಝಾರ್ಖಂಡ್‌, ಛತ್ತೀಸ್‌ಗಢದಲ್ಲಿ ಗೆಲುವು ಯಾರಿಗೆ?

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

ಗ್ಯಾಂಗ್‌ ಸ್ಟರ್‌ ಬಿಷ್ಣೋಯಿ ಹೆಸರಿನಿಂದ ಸಲ್ಮಾನ್‌ ಮನೆಯಿಂದ ಕ್ಯಾಬ್‌ ಬುಕ್: ಯುವಕ ಅರೆಸ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.