ಸ್ಟಾರ್‌ ಸುವರ್ಣದಲ್ಲಿ ಭರ್ಜರಿ ಕಾಮಿಡಿ


Team Udayavani, Dec 20, 2017, 12:08 PM IST

Bharjari-Comedy.jpg

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಇದೇ ಡಿಸೆಂಬರ್‌ 23 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ಕ್ಕೆ ಹೊಸ ಕಾಮಿಡಿ ಶೋ ಶುರುವಾಗುತ್ತಿದೆ. ಅದಕ್ಕೆ ಇಟ್ಟಿರುವ ಹೆಸರು “ಭರ್ಜರಿ ಕಾಮಿಡಿ’. ಈಗಾಗಲೇ ಕಾಮಿಡಿ ರಾಜ, ರಾಣಿಯರು ಎಂದೆನಿಸಿರುವ ಕಾಮಿಡಿ ಕಲಾವಿದರೆಲ್ಲರೂ ಒಂದೇ ವೇದಿಕೆಯಲ್ಲಿ ಮೇಳೈಸಲಿದ್ದಾರೆ. ಈ “ಭರ್ಜರಿ ಕಾಮಿಡಿ’ಯ ವಿಶೇಷವೆಂದರೆ, ದೊಡ್ಡಣ್ಣ, ರಾಗಿಣಿ ಹಾಗೂ ಗುರುಪ್ರಸಾದ್‌ ಮುಖ್ಯ ಆಕರ್ಷಣೆ.

ಈ “ಭರ್ಜರಿ ಕಾಮಿಡಿ’ ಕಾರ್ಯಕ್ರಮದ ನಿರೂಪಣೆ ಜವಾಬ್ದಾರಿಯನ್ನು ವೈಷ್ಣವಿ ಗೌಡ ಅವರು ವಹಿಸಿಕೊಂಡಿದ್ದಾರೆ. ಇನ್ನು, ಈ “ಭರ್ಜರಿ ಕಾಮಿಡಿ’ಯಲ್ಲಿ ನಗಿಸೋಕೆ ಸಾಕಷ್ಟು ನಟ-ನಟಿಯರಿದ್ದಾರೆ. ಮಿತ್ರ, ಪವನ್‌, ಶಾಲಿನಿ, ಸಂಜನಾ, ಸಿದ್ದು, ಅನುಪಮಾ, ಮಾಸ್ಟರ್‌ ಆನಂದ್‌ ಪುತ್ರ ಮಾಸ್ಟರ್‌ ವೀರೇನ್‌, ಮಧುಸೂದನ್‌, ನಮ್ರತಾ, ಶ್ರೇಯಾ, ದೀಕ್ಷಾ ರೈ ಇವರೆಲ್ಲರೂ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಒಬ್ಬೊಬ್ಬ ನಟ-ನಟಿ ಒಬ್ಬೊಬ್ಬ ಕಾಮಿಡಿ ಹುಡುಗರ ಜತೆ ವೇದಿಕೆಗೆ ಬರಲಿದ್ದಾರೆ. “ಎಲ್ಲರಿಗೂ ಒಂದಷ್ಟು ಕಷ್ಟಗಳು, ಸಮಸ್ಯೆಗಳು ಎದುರಾಗುತ್ತವೆ. ದಿನ ನಿತ್ಯ ಜಂಜಾಟದಲ್ಲೇ ಬದುಕು ಸವೆಸುವ ಜನರು ಒಂಚೂರು ನಕ್ಕರೆ ಅದೇ ನೆಮ್ಮದಿ. ಅಂತಹ ಜನರಿಗಾಗಿ “ಭರ್ಜರಿ ಕಾಮಿಡಿ’ ಮೂಡಿಬರುತ್ತಿದೆ. ಇದೊಂದು ಮನಸಾರೆ ನಗುವ ಕಾರ್ಯಕ್ರಮ. ಇಲ್ಲಿ ನಟ-ನಟಿಯರ ಜತೆಗೆ ಮಕ್ಕಳು ಮಾಡುವ ಕಿತಾಪತಿ, ಕೀಟಲೆಗಳು ಎಲ್ಲರನ್ನು ನಗಿಸುವಂತೆ ಮಾಡುತ್ತವೆ.

ಜನರನ್ನು ನಗಿಸುವುದು ಈ ಕಾರ್ಯಕ್ರಮದ ಉದ್ದೇಶ. ಉತ್ಸಾಹಿಗಳಿಗೆ ಪ್ರೋತ್ಸಾಹಿಸುವ ಸಲುವಾಗಿ ನಾನು ಈ ಕಾರ್ಯಕ್ರಮ ನಡೆಸಿಕೊಡಲು ಒಪ್ಪಿದ್ದೇನೆ. ಇಲ್ಲಿ ಹಾಸ್ಯವಿದೆಯಾದರೂ, ಎಲ್ಲೂ ದ್ವಂದಾರ್ಥ ಇರುವುದಿಲ್ಲ. ನೋಡುಗರಿಗೆ ಅಸಹ್ಯ ತರುವಂತಹ ಸನ್ನಿವೇಶಗಳೂ ಬರುವುದಿಲ್ಲ. ಯಾರ ಮನಸ್ಸಿಗೂ ನೋವುಂಟು ಮಾಡುವ ಸಂದರ್ಭಗಳು ಇರುವುದಿಲ್ಲ’ ಎಂಬ ಗ್ಯಾರಂಟಿ ಕೊಡುತ್ತಾರೆ ದೊಡ್ಡಣ್ಣ.

ರಾಗಿಣಿ ಇದೇ ಮೊದಲ ಬಾರಿಗೆ ಕಿರುತೆರೆಗೆ ಎಂಟ್ರಿಯಾಗಿದ್ದಾರೆ. ಅವರು ಈ ಕಾರ್ಯಕ್ರಮ ನಡೆಸಿಕೊಡಲು ಒಪ್ಪಿದ್ದು, ಕಾಮಿಡಿ ಹೀರೋಗಳು ಒಂದೆಡೆ ಇರುವುದಕ್ಕಂತೆ. “ನಾನಿಲ್ಲಿ ಮಾರ್ಕ್ಸ್ ಕೊಡುವುದಾಗಲಿ, ತೀರ್ಪು ನೀಡುವುದಾಗಲಿ ಮಾಡುವುದಿಲ್ಲ. ಇಲ್ಲಿ ಅಂತಹ ಯಾವುದೇ ಕೆಲಸ ಕೊಟ್ಟಿಲ್ಲ. ಆದರೆ, ವೇದಿಕೆ ಮೇಲಿನ ಹಾಸ್ಯ ನಟರನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದೇನೆ.

ಈ ಮೂಲಕ ನಾನು ದೊಡ್ಡಣ್ಣ ಹಾಗು ಗುರುಪ್ರಸಾದ್‌ ಅವರೊಂದಿಗೆ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಇದೊಂದು ಹೊಸ ಅನುಭವ’ ಎನ್ನುತ್ತಾರೆ ರಾಗಿಣಿ. ಗುರುಪ್ರಸಾದ್‌ ಅವರಿಗೆ ಕಿರುತೆರೆಯಲ್ಲಿ ಇದು ಏಳನೇ ಕಾರ್ಯಕ್ರಮ. ಈಗಾಗಲೇ ಅವರು ನಿರೂಪಕರಾಗಿ, ತೀರ್ಪುಗಾರರಾಗಿ ಕೆಲಸ ಮಾಡಿದ್ದಾರೆ. “ಇಲ್ಲಿ “ಭರ್ಜರಿ ಕಾಮಿಡಿ’ ಕಾರ್ಯಕ್ರಮದಡಿ, ಹೊಸ ಪ್ರತಿಭೆಗಳನ್ನು ನೋಡುವ ಅವಕಾಶ ಸಿಕ್ಕಿದೆ.

ಸಿನಿಮಾ ಹಾಸ್ಯವೇ ಬೇರೆ, ಕಿರುತೆರೆಯಲ್ಲಿ ಕಾರ್ಯಕ್ರಮ ಮೂಲಕ ಪ್ರಸಾರವಾಗುವ ಹಾಸ್ಯವೇ ಬೇರೆ. ಮನೆ ಮನೆಗೂ ತಲುಪುವ ಕಾರ್ಯಕ್ರಮ ಇದಾಗಿರುವುದರಿಂದ ಇಲ್ಲಿ, ಎಲ್ಲೂ ಡಬ್ಬಲ್‌ ಮೀನಿಂಗ್‌ ಡೈಲಾಗ್‌ಗಳಿಗೆ ಅವಕಾಶವಿಲ್ಲ. ಎಲ್ಲವೂ ಹೊಸ ಶೈಲಿಯಲ್ಲಿ ಕಾಣಸಿಗಲಿದೆ. ಎಲ್ಲರೂ ಇಲ್ಲಿ ನಗಿಸೋ ಕೆಲಸಕ್ಕೆ ನಿಂತಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕೆಲಸ ನಮ್ಮದ್ದಷ್ಟೇ’ ಎಂಬುದು ಗುರು ಅಭಿಪ್ರಾಯ.

ಇಲ್ಲಿ ಮೈಸೂರಿನ ಸಿದ್ದು, ರಾಮನಾಥ್‌, ದಕ್ಷಿಣಾಮೂರ್ತಿ ಅವರು ಬರವಣಿಗೆಯ ಹಿಂದೆ ನಿಂತಿದ್ದಾರೆ. ಸುವರ್ಣ ವಾಹಿನಿಯ ನಾನ್‌ ಫಿಕ್ಷನ್‌ ಹೆಡ್‌ ತ್ಯಾಗರಾಜ್‌ ಕೂಡ ಹೊಸ ಆಯಾಮದೊಂದಿಗೆ ಈ ಕಾರ್ಯಕ್ರಮ ನಡೆಸಿಕೊಡುವ ಭರವಸೆ ಕೊಡುತ್ತಾರೆ.

ಟಾಪ್ ನ್ಯೂಸ್

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?

ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು

sanju weds geetha 2 song shooting

Sanju Weds Geetha 2; ಕಲರ್’ಫುಟ್ ಸೆಟ್ ನಲ್ಲಿ ಸಂಜು ಹಾಡು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.