ಸ್ಟಾರ್‌ಗಿರಿ ತಪ್ಪಿಸೋಕೆ ಹಫ್ತಾ ಕೊಡೋ ಜನರಿದ್ದಾರೆ!

ಪೈರಸಿ ವಿರುದ್ಧ ಜಗ್ಗೇಶ್‌ ಕಿಡಿ

Team Udayavani, Sep 24, 2019, 3:04 AM IST

jaggesh

“ದೊಡ್ಡ ಸ್ಟಾರ್‌ಗಿರಿ ತಪ್ಪಿಸಲು ಇವನಿಗೆ ಹಫ್ತಾ ನೀಡಿದರೆ ಸಾಕು ಮಾಡಿ ಮುಗಿಸುತ್ತಾನೆ…’ ಇದು ನಟ ಜಗ್ಗೇಶ್‌ ಅವರ ಹೇಳಿಕೆ. ಅಷ್ಟಕ್ಕೂ ಜಗ್ಗೇಶ್‌ ಅವರು ಯಾವ ವಿಷಯಕ್ಕೆ, ಯಾರ ಕುರಿತಾಗಿ ಈ ಮಾತನ್ನು ಹೇಳಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಜೋರಾಗಿ ಚರ್ಚೆಯಾಗುತ್ತಿರುವ ವಿಷಯವೆಂದರೆ ಅದು ಪೈರಸಿ. ಇದು ಹೊಸದೇನಲ್ಲ. ದುಡ್ಡಿನ ಆಸೆಗಾಗಿ ಕೆಲವರು ಚಿತ್ರಮಂದಿರದಲ್ಲಿ ಕುಳಿತು ಪೈರಸಿ ಮಾಡುತ್ತಿದ್ದರು. ಇದೀಗ ದೊಡ್ಡ ದಂಧೆಯಾಗಿಯೂ ಮಾರ್ಪಟ್ಟಿದೆ. ಇತ್ತೀಚೆಗೆ “ಪೈಲ್ವಾನ’ ಚಿತ್ರ ಪೈರಸಿಯಾಗಿರುವ ಬಗ್ಗೆಯೂ ಸಾಕಷ್ಟು ಆರೋಪಗಳು, ಪ್ರತಿಕ್ರಿಯೆಗಳು ಬಂದಿದ್ದವು. ಈಗ ಜಗ್ಗೇಶ್‌ ಕೂಡ ಅದಕ್ಕೆ ಧ್ವನಿಗೂಡಿಸಿ ಟ್ವೀಟ್‌ ಮಾಡಿದ್ದಾರೆ.

“ಉದ್ದೇಶಪೂರ್ವಕವಾಗಿ, ಇದೇ ಚಿತ್ರವನ್ನ, ಈ ನಟನ ಚಿತ್ರವನ್ನ ಪೈರಸಿ ಮಾಡುವುದು, ಆ ನಟನ ಸ್ಟಾರ್‌ಗಿರಿ ಬೀಳಿಸುವುದು ಎಲ್ಲವೂ ಬಿಸಿನೆಸ್‌ ರೀತಿ ನಡೆಯುತ್ತಿದೆ. ಒಬ್ಬ ಸಾಮಾನ್ಯ ತಮಿಳುನಾಡಿನ ಯುವಕ ಸಣ್ಣದ್ದಾಗಿ ಈ ಕೆಲಸ ಶುರುಮಾಡಿ, ಮಲೇಶಿಯಾಗೆ ಶಿಫ್ಟ್ ಆಗಿ ಇಂದು ವಿಶ್ವ ಸಿನಿಮಾರಂಗಕ್ಕೆ ತಲೆನೋವಾಗಿದ್ದಾನೆ! ದೊಡ್ಡ ಸ್ಟಾರ್‌ಗಿರಿ ತಪ್ಪಿಸಲು ಇವನಿಗೆ ಹಫ್ತಾ ನೀಡಿದರೆ ಸಾಕು ಮಾಡಿ ಮುಗಿಸುತ್ತಾನೆ. ಇವನನ್ನು ಸೇಡಿಗೆ ಬಳಸಿಕೊಂಡವರೆ, ಇವನಿಂದ ಸಂಕಷ್ಟಕ್ಕೆ ಈಡಾಗಿ ಇವನಿಗೆ ಲಂಚಕೊಟ್ಟು ತೊಂದರೆ ಕೊಡದಂತೆ ಕಾಲಿಗೆ ಬೀಳುತ್ತಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ಅದೇನೆ ಇರಲಿ, ಪೈರಸಿ ಅನ್ನುವುದು ಹಿಂದಿನಿಂದಲೂ ಇದೆ. ಸಾಕಷ್ಟು ಇದರ ವಿರುದ್ಧ ಹೋರಾಟ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಈ ದಂಧೆ ನಡೆಸುವವರ ಬಗ್ಗೆ ಕಟ್ಟೆಚ್ಚರ ವಹಿಸಿ, ಯಾರೆಲ್ಲಾ ಇದರಲ್ಲಿದ್ದಾರೆ, ಎಲ್ಲೆಲ್ಲಿ ಪೈರಸಿ ಆಗುತ್ತದೆ ಎಂಬುದನ್ನು ಕಂಡು ಹಿಡಿಯಲೆಂದೇ ಒಂದು ತಂಡ ಕೂಡ ಚಿತ್ರರಂಗದಿಂದ ರಚನೆಯಾಗಿತ್ತು. ಆದರೆ, ಯಾವುದೇ ಸಮಸ್ಯೆ ಬಗೆಹರಿದಿಲ್ಲ. ಆದರೂ, ಜಗ್ಗೇಶ್‌ ಅವರು ಮಾಡಿರುವ ಟ್ವೀಟ್‌ ಗಮನಿಸಿದರೆ, ಪೈರಸಿ ಎಂಬ ಭೂತ ಅಷ್ಟೊಂದು ಪವರ್‌ಫ‌ುಲ್‌ ಆಗಿದೆಯಾ ಎಂಬ ಪ್ರಶ್ನೆ ಕಾಡುವುದು ಸುಳ್ಳಲ್ಲ.

ಇದೊಂದು ದೊಡ್ಡ ಮಾಫಿಯಾ ಆಗಿದ್ದು, ಸಿನಿಮಾ ರಂಗದಲ್ಲಿರುವ ಜನರಿಗಷ್ಟೇ ಪೈರಸಿಯ ಪ್ರಭಾವ ಎಂಥದ್ದು, ಅದರಿಂದ ಎಷ್ಟೆಲ್ಲಾ ಸಮಸ್ಯೆಗಳುಂಟಾಗುತ್ತವೆ ಅನ್ನುವುದು ಗೊತ್ತು. ಸಾಮಾನ್ಯರಿಗೆ ಇದರ ಹಿಂದಿನ ರಹಸ್ಯ ಗೊತ್ತಿಲ್ಲ. ಈಗ ಜಗ್ಗೇಶ್‌ ಅವರು ಅಂಥದ್ದೊಂದು ರಹಸ್ಯ ಬಿಚ್ಚಿಟ್ಟಿದ್ದಾರೆ. ನಿಜವಾಗಿಯೂ ಇದರಿಂದ ಅದೆಷ್ಟೋ ಮಂದಿಗೆ ಕಂಟಕವಾಗುತ್ತಿದೆ. ಇನ್ನಾದರೂ, ಸಂಬಂಧಿಸಿದವರು ಈ ಪೈರಸಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಮುಂದಾಗಬೇಕಿದೆ. ಈಗ ಕನ್ನಡ ಚಿತ್ರಂಗದ ಬೆಳವಣಿಗೆ ಜೋರಾಗಿಯೇ ಇದೆ, ಇಂತಹ ಸಂದರ್ಭದಲ್ಲಿ ಪೈರಸಿ ಕಾಟ ಮತ್ತೆ ತಲೆಎತ್ತುತ್ತಿರುವುದು ಆತಂಕಕಾರಿ ವಿಷಯ.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Bharjari Ghandu: ಹುಯ್ಯೋ ಹುಯ್ಯೋ ಮಳೆರಾಯ…

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಗಾಡ್‌ ಪ್ರಾಮಿಸ್‌ಗೆ ಸ್ಕ್ರಿಪ್ಟ್  ಪೂಜೆ

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

Sandalwood: ಪ್ರಕೃತಿಯ ಸುತ್ತ “ಕೃಷ್ಣಾವತಾರ’

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

ʼToxicʼನಲ್ಲಿ ಯಶ್‌ ಜೊತೆ ಕರೀನಾ ನಟಿಸೋದು ಪಕ್ಕಾ ಆದರೆ ನಾಯಕಿಯಾಗಿ ಅಲ್ಲ,ಮತ್ಯಾವ ಪಾತ್ರ?

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

Kannada Cinema; ಸದ್ದು ಮಾಡುತ್ತಿದೆ ‘ಖಾಲಿ ಡಬ್ಬ’

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.