ಒಂದಲ್ಲ ಎರಡಲ್ಲ ಸತ್ಯ ಸಂಗತಿ


Team Udayavani, Jul 23, 2018, 11:24 AM IST

ondalla-eradalla.jpg

1) ಶಂಕರ್‌ ನಾಗ್‌ ಅವರ ಪ್ರಸಿದ್ಧ “ಮಾಲ್ಗುಡಿ ಡೇಸ್‌’ ಸರಣಿಯ ಒಟ್ಟು ಪ್ರಸಾರವಾದ ಎಪಿಸೋಡುಗಳ ಸಂಖ್ಯೆ ಎಷ್ಟು?
2) ನಾಲ್ಕು ವರ್ಷದ ಮಗುವೊಂದು ಪ್ರತಿ ದಿನ ಕೇಳುವ ಪ್ರಶ್ನೆಗಳ ಸಂಖ್ಯೆ?
3) ಭೂಮಿ ಸೂರ್ಯನ ಸುತ್ತ ಸುತ್ತುತ್ತಿರುವ ವೇಗ?
4) ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ನಡೆದಿರುವ ಎಲ್ಲಾ ಮಾದರಿಯ ಒಟ್ಟು ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳ ಸಂಖ್ಯೆ?
5) ಪ್ರತಿದಿನ ನಮ್ಮ ದೇಹದೊಳಗಿನ ರಕ್ತ ಚಲಿಸುವ ಒಟ್ಟು ದೂರ?
6) ಫೆಬ್ರವರಿ 2016ರ ವರದಿ ಪ್ರಕಾರ ಕರ್ನಾಟಕದಲ್ಲಿರುವ ಒಟ್ಟು ನೋಂದಾಯಿತ ವಾಹನಗಳ ಸಂಖ್ಯೆ?
7) ಕರ್ನಾಟಕದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗಳ ಒಟ್ಟು ಉದ್ದ?
8) 2017ರಲ್ಲಿ ಭಾರತೀಯ ಸೆನ್ಸಾರ್‌ ಬೋರ್ಡಿನಿಂದ ಅಂಗೀಕೃತವಾದ ಒಟ್ಟು ಚಲನಚಿತ್ರಗಳು?
9) ಭಾರತದಲ್ಲಿರುವ ಉತ್ಛ ನ್ಯಾಯಾಲಯಗಳ ಸಂಖ್ಯೆ?
10) 2017ರ ವರದಿ ಪ್ರಕಾರ ಜಗತ್ತಿನಲ್ಲಿರುವ ಜಾಲತಾಣಗಳ ಸಂಖ್ಯೆ?

ಈ ಪ್ರಶ್ನೆಗಳಿಗೂ ಸಿನಿಮಾಗೂ ಸಂಬಂಧವೇನು ಎಂಬ ಪ್ರಶ್ನೆ ಬರುವುದು ಸಹಜ. ಈ ಪ್ರಶ್ನೆಗಳಿಗೂ ಸಿನಿಮಾಗೂ ಸಂಬಂಧವಿಲ್ಲದಿದ್ದರೂ, “ಒಂದಲ್ಲ ಎರಡಲ್ಲ’ ಚಿತ್ರತಂಡವು ಈ ಪ್ರಶ್ನೆಗಳನ್ನಿಟ್ಟುಕೊಂಡು ಹೊಸ ತರಹದ ಪ್ರಚಾರ ಮಾಡುತ್ತಿದೆ. ಈ ಹಿಂದೆ “ರಾಮ ರಾಮಾ ರೇ’ ಚಿತ್ರವನ್ನು ನಿರ್ದೇಶಿಸಿದ್ದ ಸತ್ಯಪ್ರಕಾಶ್‌, ಇದೀಗ ಸದ್ದಿಲ್ಲದೆ “ಒಂದಲ್ಲ ಎರಡಲ್ಲ’ ಎಂಬ ಚಿತ್ರವನ್ನು ಮಾಡಿ ಮುಗಿಸಿದ್ದಾರೆ.

ಈ ಚಿತ್ರದ ಹಾಡುಗಳು ಸೋಮವಾರ ಬಿಡುಗಡೆಯಾಗಲಿದ್ದು, ಮುಂದಿನ ತಿಂಗಳು ಚಿತ್ರ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ “ಒಂದಲ್ಲ ಎರಡಲ್ಲ ಸತ್ಯ ಸಂಗತಿ’ ಎಂಬ ಹೆಸರಿನಡಿ ಚಿತ್ರವನ್ನು ಪ್ರಚಾರ ಮಾಡುತ್ತಿದ್ದಾರೆ ಸತ್ಯಪ್ರಕಾಶ್‌. ಅದರಡಿ, ಪ್ರತಿ ದಿನ ಒಂದೊಂದು ಪ್ರಶ್ನೆಯನ್ನು ಅವರು ಕೇಳುತ್ತಿದ್ದಾರೆ. ಮೇಲೆ ಹೇಳಿದ ಎಲ್ಲಾ ಪ್ರಶ್ನೆಗಳೂ ಅದೇ ಸರಣಿಯಲ್ಲಿ ಕೇಳಲಾಗಿರುವ ಪ್ರಶ್ನೆಗಳು.

ಈ ಪ್ರಶ್ನೆಗಳ ಕೆಳಗೆ ಅವರೇ ಉತ್ತರವನ್ನೂ ನೀಡಿರುತ್ತಾರೆ. ಆದರೆ, ಅದಕ್ಕೂ ಮುನ್ನ “ಒಂದಲ್ಲ ಎರಡಲ್ಲ’ ಎಂಬ ಚಿತ್ರದ ಹೆಸರು ಬಂದು, ಆ ನಂತರ ಉತ್ತರ ಬರುತ್ತದೆ. ಉದಾಹರಣೆಗೆ, ಶಂಕರ್‌ ನಾಗ್‌ ಅವರ ಪ್ರಸಿದ್ಧ “ಮಾಲ್ಗುಡಿ ಡೇಸ್‌’ ಸರಣಿಯ ಒಟ್ಟು ಪ್ರಸಾರವಾದ ಎಪಿಸೋಡುಗಳ ಸಂಖ್ಯೆ ಎಷ್ಟು ಎಂಬ ಪ್ರಶ್ನೆಯ ಕೆಳಗೇ, ಒಂದಲ್ಲ ಎರಡಲ್ಲ 54 ಎಂಬ ಉತ್ತರ ಇರುತ್ತದೆ.

ಅದೇ ತರಹ, ಪ್ರತಿದಿನ ನಮ್ಮ ದೇಹದೊಳಗಿನ ರಕ್ತ ಚಲಿಸುವ ಒಟ್ಟು ದೂರ ಎಂಬ ಪ್ರಶ್ನೆಗೆ, ಉತ್ತರವಾಗಿ ಒಂದಲ್ಲ ಎರಡಲ್ಲ 19312 ಕಿಲೋಮೀಟರ್‌ ಎಂಬ ಉತ್ತರವಿರುತ್ತದೆ. ಹೀಗೆ ಸ್ವಾರಸ್ಯಕರ ಪ್ರಶ್ನೆಗಳನ್ನಿಟ್ಟುಕೊಂಡು, ಚಿತ್ರದ ಪ್ರಚಾರ ಮಾಡುತ್ತಿದ್ದಾರೆ ನಿರ್ದೇಶಕ ಸತ್ಯಪ್ರಕಾಶ್‌. ಈ ಚಿತ್ರಕ್ಕೆ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಇನ್ನು “ಹೆಬ್ಬುಲಿ’ ನಿರ್ಮಿಸಿದ್ದ ಉಮಾಪತಿ ಗೌಡ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

Telugu version of ‘Markasthra’ titled ‘Maranayudham

ತೆಲುಗಿನಲ್ಲಿ ಮಾಲಾಶ್ರೀ ಚಿತ್ರ; ಮಾರಕಾಸ್ತ್ರ ಈಗ ಮಾರಣಾಯುಧಂ

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

Sandalwood: ಶೈನ್‌ ಶೆಟ್ಟಿ ಹೊಸ ಚಿತ್ರಕ್ಕೆ “ಜಸ್ಟ್‌ ಮ್ಯಾರೀಡ್‌” ಟೈಟಲ್

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

Ithyadi Movie: ಇತ್ಯಾದಿ ಮೇಲೆ ವಿಕ್ರಮ್‌ ಕಣ್ಣು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.