ನಮ್ಮ ನಡುವೆ ಈಗಲೂ ಮಾತಿಲ್ಲ: ಪ್ರಥಮ್‌


Team Udayavani, Jun 11, 2017, 11:35 AM IST

pratham.jpg

“ಬಿಗ್‌ ಬಾಸ್‌’ ಮನೆಯಲ್ಲಿ ಸಂಜನಾ ಅವರ ಹಿಂದಿಂದೆ ಓಡಾಡಿ ಲವ್‌ ಮಾಡು ಅಂತ ಪೀಡಿಸಿದ್ದ ಪ್ರಥಮ್‌, ಈಗಲೂ ಸಂಜನಾ ಅವರನ್ನು ಅಷ್ಟೇ ಪ್ರೀತಿಸುತ್ತಾರಾ?
ಪ್ರೀತಿಸುವುದು ಬಿಡಿ, ಮಾತಾಡಿಯೇ ಬಹಳಷ್ಟು ದಿನ ಆಗಿದೆ ಎನ್ನುತ್ತಾರೆ ಪ್ರಥಮ್‌. ಹಾಗಾದರೆ, ಸಂಜನಾ ಮತ್ತು ಪ್ರಥಮ್‌ ನಡುವೆ ಏನಾದರೂ ಕಿರಕ್‌ ಆಗಿದೆಯಾ ಎಂಬ ಪ್ರಶ್ನೆ ಬರಬಹುದು.  ಈ ಮಾತಿಗೆ ಸ್ವತಃ ಪ್ರಥಮ್‌ ಹಾಗೊಂದು ಜೋರು ನಗು ಹೊರಹಾಕುತ್ತಾರೆ.

ಹಾಗಾದರೆ, ಸಂಜನಾಗೆ ಐ ಲವ್‌ ಯೂ ಅಂತ ಹೇಳಿದ್ದು ಸುಳ್ಳಾ? ಇದಕ್ಕೆ ಉತ್ತರಿಸುವ ಪ್ರಥಮ್‌, “ಬಿಗ್‌ ಬಾಸ್‌’ ಮನೆಯಲ್ಲಿ ಪ್ರಥಮ್‌ ಬರೀ ಕಿರುಚಾಡುತ್ತಾನೆ, ಮಾತು ಮಾತಿಗೂ ಖಂಡಿಸ್ತೀನಿ ಅಂತ ಬೊಬ್ಬೆ ಹಾಕುತ್ತಾನೆ, ಏರು ದನಿಯಲ್ಲೇ ಮಾತು ಹೊರಹಾಕುತ್ತಾನೆ, ಪ್ರಥಮ್‌ಗೆ ಇದಷ್ಟೇನಾ ಗೊತ್ತಿರೋದು, ಅದು ಬಿಟ್ಟರೆ ಲವ್‌ ಮಾಡೋಕೆ ಬರಲ್ವಾ? ಎಂಬ ಮಾತು ಕೇಳಿಬಂತು. ಹಾಗೆಯೇ, ಅಂಥದ್ದೊಂದು ಟಾಸ್ಕ್ ಕೂಡ ಇತ್ತು.

ಹಾಗಾಗಿಯೇ ನಾನು ಲವ್‌ ಮಾಡೋ ಟಾಸ್ಕ್ನಲ್ಲಿ ಸಂಜನಾಳ ಹಿಂದಿಂದೆ ಅಲೆದಾಡಿ, ಲವ್‌ ಮಾಡು ಅಂತ ಪೀಡಿಸಿದ್ದು. ಅದು ಬಿಟ್ಟರೆ ಬೇರೇನೂ ಇಲ್ಲ. ಅದೊಂದು ಟಾಸ್ಕ್ ಅಷ್ಟೇ. ಆದರೆ, ಅದು ಹೊರಬಂದ ಮೇಲೆ ಇಬ್ಬರ ನಡುವೆ ದೊಡ್ಡ ಗಾಸಿಪ್‌ ಹರಿದಾಡಿತು. ಅಸಲಿಗೆ ಯಾರಿಗೂ ವಿಷಯ ಗೊತ್ತಿಲ್ಲ. ಒಂದು ಸತ್ಯ ಹೇಳ್ತೀನಿ ಕೇಳಿ’ ಎನ್ನುವ ಪ್ರಥಮ್‌, ಒಂದು ನಿಜವನ್ನು ಬಾಯಿಬಿಟ್ಟರು. “ಈಗಲೂ ನಾನು ಮತ್ತು ಸಂಜನಾ ಮಾತಾಡಿಸುವುದಿಲ್ಲ.

ನಮ್ಮಿಬ್ಬರ ನಡುವೆ ಯಾವುದೇ ಮಾತಿಲ್ಲ . ನಾನಷ್ಟೇ ಅಲ್ಲ, ಭುವನ್‌ ಮತ್ತು ಸಂಜನಾ ಕೂಡ ಮಾತಾಡಿಸುವುದಿಲ್ಲ. ಆದರೂ, “ಸಂಜು ಮತ್ತು ನಾನು’ ಷೋ ಮಾಡುತ್ತಿದ್ದೇವೆ. ಅದಕ್ಕೆ ಕಾರಣ, “ಕಲರ್’. ಆ ವಾಹಿನಿ ನನ್ನಂತಹ ಸಾಮಾನ್ಯ ಹುಡುಗನನ್ನು ಗುರುತಿಸಿಕೊಳ್ಳುವಂತೆ ಮಾಡಿದೆ. ಮೊದಲು ಸಂಜನಾ, ಭುವನ್‌ ಮತ್ತು ನೀನು ಒಂದು ಷೋ ಮಾಡಬೇಕು ಅಂದಾಗ, ನಾನು ಒಪ್ಪಲಿಲ್ಲ. ನಮ್ಮ ನಡುವೆ ಮಾತೇ ಇಲ್ಲದ ಮೇಲೆ ಜತೆಯಲ್ಲಿ ನಟಿಸುವುದರೆ ಏನರ್ಥ ಇರುತ್ತೆ ಹೇಳಿ?

ಕೊನೆಗೆ ಪರಮೇಶ್ವರ್‌ ಗುಂಡ್ಕಲ್‌ ಹೇಳಿದ ಮೇಲೆ ಒಪ್ಪಿಕೊಂಡೆ. ಈಶ್ವರನ ಮೇಲಾಣೆ ಮೂವರು ಒಬ್ಬೊರನೊಬ್ಬರು ಮಾತಾಡಿಸಲ್ಲ. ಆದರೆ, ನಾನು ಭುವನ್‌ ಚೆನ್ನಾಗಿದ್ದೇವೆ. ಎಷ್ಟೋ ಜನ ಕೇಳ್ತಾರೆ, ನಿಮ್ಮ ಚಿತ್ರದಲ್ಲಿ ಸಂಜನಾ ನಾಯಕಿಯಾದರೆ ಚೆನ್ನಾಗಿರುತ್ತೆ ಅಂತ. “ಬಿಗ್‌ ಬಾಸ್‌’ ಮನೆಯಲ್ಲಿ ಆಗಿದ್ದೇ ಸಾಕು, ಹೊರಬಂದಾಗ ನಡೆದಿದ್ದೇ ಸಾಕು. ನಾನು ದುರಂಹಕಾರದಲ್ಲಿ ದುರ್ಯೋಧನನಿಗಿಂತ ಜಾಸ್ತಿ. ಹಾಗಾಗಿ ನಾನು ಸಂಜನಾಳನ್ನು ಮಾತನಾಡಿಸಲ್ಲ.

“ಸಂಜು ಮತ್ತು ನಾನು’ ಶೂಟಿಂಗ್‌ ವೇಳೆ ಜತೆಗೆ ಕೂತರೂ ಮಾತಾಡಿಸಲ್ಲ. ನನ್ನ ಪಾಡಿಗೆ ನಾನಿದ್ದರೆ, ಅವರ ಪಾಡಿಗೆ ಅವರಿರುತ್ತಾರೆ. ಕ್ಯಾಮೆರಾ ಮುಂದೆ ಮಾತ್ರ ನಟನೆ ಮಾಡ್ತೀವಿ. ಸಂಜನಾ ಒಳ್ಳೇ ಹುಡುಗಿ, ಆಕೆಗೆ ಒಳ್ಳೇದಾಗ್ಲಿ. ಹಾಗಂತ ಇಬ್ಬರೂ ಮಾತಾಡ್ತೀವಿ ಅನ್ನೋದೆಲ್ಲಾ ಸುಳ್ಳು. ಮನರಂಜನೆಗೆ ಏನು ಬೇಕೋ ಅದನ್ನು ಕ್ಯಾಮೆರಾ ಮುಂದೆ ಮಾಡ್ತೀನಷ್ಟೇ. ಷೋಗಾಗಿ ಮಾತ್ರ ನಾವು ಕ್ಯಾಮೆರಾ ಮುಂದೆ ನಿಂತು ನಟಿಸ್ತೀವಿ. ಅದು ಬಿಟ್ಟರೆ ಬೇರೇನೂ ಇಲ್ಲ’ ಎನ್ನುತ್ತಾರೆ ಪ್ರಥಮ್‌.

ಟಾಪ್ ನ್ಯೂಸ್

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್‌ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್‌ ದಾಖಲು

ramarasa kannada movie

Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್‌ ಟೀಂ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ

ಮೈಸೂರಲ್ಲಿ ‘ಬಘೀರ’ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಗಾಯ; ಆಸ್ಪತ್ರೆಗೆ ದಾಖಲು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Defense Expenditure: India to rank fourth in the world by 2023

Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Bhojshala: ASI seeks 8 weeks time for scientific survey

Bhojshala: ವೈಜ್ಞಾನಿಕ ಸಮೀಕ್ಷೆಗೆ 8 ವಾರ ಕಾಲಾವಕಾಶ ಕೋರಿದ ಎಎಸ್‌ಐ

Kollam; ಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!

Seat next to parents for children under 12 years on the plane?

DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.