ಮೊಬೈಲ್ ಇದ್ದವರು “ಮಿಸ್ಡ್ ಕಾಲ್’ ನೋಡಬೇಕು!
Team Udayavani, Jan 30, 2019, 5:56 AM IST
ಬಹುತೇಕ ಹೊಸ ಪ್ರತಿಭೆಗಳೆ ಸೇರಿಕೊಂಡು ನಿರ್ಮಿಸಿರುವ “ಮಿಸ್ಡ್ ಕಾಲ್’ ಚಿತ್ರ ಕಳೆದ ವಾರ ಸುಮಾರು ನಲವತ್ತಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ತೆರೆಗೆ ಬಂದಿದೆ. ಮೊಬೈಲ್ ಫೋನ್, ಇಂದಿನ ಆಧುನಿಕ ತಂತ್ರಜ್ಞಾನ, ಮತ್ತದರ ಅಡ್ಡ ಪರಿಣಾಮ ಮೊದಲಾದ ಸಂಗತಿಗಳ ಕುರಿತಾದ ಚಿತ್ರಕ್ಕೆ ತಿಮ್ಮಂಪಲ್ಲಿ ಚಂದ್ರ, ಕಥೆ ಚಿತ್ರಕಥೆ ಸಂಭಾಷಣೆ ನಿರ್ದೇಶನ ಮಾಡಿದ್ದಾರೆ.
ಇನ್ನು “ಮಿಸ್ಡ್ ಕಾಲ್’ ಸಿನಿಮಾವನ್ನು ನೋಡಿದ ಪ್ರೇಕ್ಷಕರು ಮತ್ತು ವಿಮರ್ಶಕರೂ ಕೂಡ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದು, ಚಿತ್ರ ನಿಧಾನವಾಗಿ ಸಿನಿಪ್ರಿಯರನ್ನು ಸೆಳೆಯುತ್ತಿದೆ. ಚಿತ್ರದ ಬಿಡುಗಡೆಯ ನಂತರದ ಬೆಳವಣಿಗೆಗಳ ಬಗ್ಗೆ ಮಾತನಾಡುವ ನಿರ್ದೇಶಕ ತಿಮ್ಮಂಪಲ್ಲಿ ಚಂದ್ರ, “ಚಿತ್ರ ಬಿಡುಗಡೆಯಾದ ಎಲ್ಲಾ ಕೇಂದ್ರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡು ಮುನ್ನಡೆಯುತ್ತಿದೆ.
ಚಿತ್ರವನ್ನು ನೋಡಿದವರು ಕೂಡ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಇದು ಇಂದಿನ ಜನರೇಷನ್ನ ಚಿತ್ರ. ಇಂದಿನ ಜಮಾನದಲ್ಲಿ ತಂತ್ರಜ್ಞಾನ ಮತ್ತದರ ದುರುಪಯೋಗ ಹೇಗೆ ನಡೆಯುತ್ತದೆ ಅನ್ನೋದನ್ನ ಹೇಳಿದ್ದೇವೆ. ಮೊಬೈಲ್ ಇರುವ ಪ್ರತಿಯೊಬ್ಬರೂ ನೋಡಲೇ ಬೇಕಾದ ಚಿತ್ರವಿದು ಎನ್ನುತ್ತಾರೆ. ಚಿತ್ರದಲ್ಲಿ ರಾಜ್ ಕಿರಣ್ ನಾಯಕನಾಗಿದ್ದು, ಅಂಜನಾ ನಕ್ಷತ್ರ, ಅರ್ಪಿತಾ, ಕಿಶೋರ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.