ಶಿವಣ್ಣ “ಆರ್ಡಿಎಕ್ಸ್’ಗೆ ಇಂದು ಮುಹೂರ್ತ
ತಮಿಳು ನಿರ್ಮಾಪಕರ ಕನ್ನಡ ಸಿನಿಮಾ
Team Udayavani, Feb 19, 2020, 7:05 AM IST
ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯದ ಮುಂಬರುವ ಚಿತ್ರ “ಆರ್ಡಿಎಕ್ಸ್’ ಸೆಟ್ಟೇರಲು ಸಿದ್ಧವಾಗಿದೆ. ಈಗಾಗಲೇ “ಆರ್ಡಿಎಕ್ಸ್’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಇಂದು (ಫೆ. 19) ಮುಹೂರ್ತ ನೆರವೇರುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ.
ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿರುವ ಮುಹೂರ್ತ ಸಮಾರಂಭದಲ್ಲಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ ರಾವ್ ಹಾಗೂ ನಟ ಪುನೀತ್ರಾಜಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಲಿದ್ದಾರೆ. ತಮಿಳಿನಲ್ಲಿ “ವಿವೇಗಂ’, “ವಿಶ್ವಾಸಂ’ ಮೊದಲಾದ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ “ಸತ್ಯ ಜ್ಯೋತಿ ಫಿಲಂಸ್’ ಬ್ಯಾನರ್ನಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ತಮಿಳು ನಿರ್ದೇಶಕ ರವಿ ಅರಸು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಅಂದಹಾಗೆ, ಚಿತ್ರರಂಗದ ಮೂಲಗಳ ಚಿತ್ರಕ್ಕೆ “ಆರ್ಡಿಎಕ್ಸ್’ ಎಂಬ ಶೀರ್ಷಿಕೆ ಇಡಲಾಗಿದೆ ಎನ್ನಲಾಗುತ್ತಿದ್ದು, ಚಿತ್ರದ ಟೈಟಲ್ ಅನ್ನು ಚಿತ್ರತಂಡ ಇದುವರೆಗೂ ಅಧಿಕೃತವಾಗಿ ಎಲ್ಲೂ ಬಹಿರಂಗಪಡಿಸಿಲ್ಲ. ಮುಹೂರ್ತದ ದಿನವೇ ಸಿನಿಮಾ ಹೆಸರು ಕೂಡ ಹೊರ ಬರಬಹುದು ಎನ್ನಲಾಗುತ್ತಿದ್ದು, ಚಿತ್ರಕ್ಕೆ “ಆರ್ಡಿಎಕ್ಸ್’ ಅನ್ನೋದೆ ಟೈಟಲ್ ಆಗಿ ಮುಂದುವರೆಯಲಿದೆಯಾ ಅಥವಾ ಬೇರೆ ಏನಾದರೂ ಹೊಸ ಟೈಟಲ್ ಇಡಲಾಗುತ್ತದೆಯಾ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.
ಫೆ.23ಕ್ಕೆ ದ್ರೋಣ ಟ್ರೇಲರ್: ಹೊಸ ವರ್ಷದಲ್ಲಿ ಶಿವರಾಜಕುಮಾರ್ ಅವರ ಯಾವ ಚಿತ್ರ ಬಿಡುಗಡೆಯಾಗುತ್ತದೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ “ದ್ರೋಣ’. ಹೌದು, ಶಿವರಾಜಕುಮಾರ್ ಅವರ “ದ್ರೋಣ’ ಚಿತ್ರ ಬಿಡುಗಡೆ ಹಂತಕ್ಕೆ ಬಂದಿದ್ದು, ಮೊದಲ ಹಂತವಾಗಿ ಚಿತ್ರದ ಟ್ರೇಲರ್ ಫೆ.23 ರಂದು ಬಿಡುಗಡೆ ಯಾಗುತ್ತಿದೆ. ಶಿಕ್ಷಣದ ಕುರಿತಾಗಿರುವ ಈ ಚಿತ್ರದಲ್ಲಿ ಶಿವಣ್ಣ ಶಾಲಾ ಶಿಕ್ಷಕರಾಗಿ ಕಾಣಿಸಿಕೊಂಡಿದ್ದಾರೆನ್ನಲಾಗಿದೆ. ಚಿತ್ರವನ್ನು ಪ್ರಮೋದ್ ಚಕ್ರವರ್ತಿ ನಿರ್ದೇಶಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ