ತ್ರಿಬಲ್ ರೈಡಿಂಗ್ ಶೂಟಿಂಗ್ಗೆ ಗಣೇಶ್ ರೆಡಿ
Team Udayavani, Oct 10, 2020, 1:30 PM IST
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಹೊಸಚಿತ್ರ “ತ್ರಿಬಲ್ ರೈಡಿಂಗ್’ನ ಪ್ರೀ-ಪ್ರೊಡಕ್ಷನ್ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಚಿತ್ರತಂಡ ಇದೇ ಅಕ್ಟೋಬರ್ 19ರಂದು ಮುಹೂರ್ತವನ್ನು ಆಚರಿಸಿಕೊಂಡು ಸೆಟ್ಟೇರಲಿದೆ. ಚಿತ್ರತಂಡದ ಮೂಲಗಳ ಮಾಹಿತಿಯಂತೆ, “ತ್ರಿಬಲ್ ರೈಡಿಂಗ್’ ಮೊದಲ ಹಂತದ ಚಿತ್ರೀಕರಣ ಅಕ್ಟೋಬರ್ 19ರ ಮುಹೂರ್ತ ದಿನದಿಂದಲೇ ಶುರುವಾಗಲಿದ್ದು, ಸುಮಾರು 20 ದಿನಗಳ ಕಾಲ ಮೈಸೂರು ಸುತ್ತಮುತ್ತ ಚಿತ್ರದ ಮಾತಿನ ಭಾಗದ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಹಾಕಿಕೊಂಡಿದೆ.
“ತ್ರಿಬಲ್ ರೈಡಿಂಗ್’ ಚಿತ್ರದಲ್ಲಿ ಗಣೇಶ್ ಅವರಿಗೆ ನಾಯಕಿಯಾಗಿ ಕಿರುತೆರೆಯ “ಜೊತೆ ಜೊತೆಯಲ್ಲಿ’ ಧಾರಾವಾಹಿಯ ಖ್ಯಾತಿಯ ನಟಿ ಮೇಘಾ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಸದ್ಯ ಕಿರುತೆರೆ ಪ್ರೇಕ್ಷಕರ ಮನಗೆಲ್ಲಲು ಯಶಸ್ವಿಯಾಗಿರುವ ಮೇಘಾ ಶೆಟ್ಟಿ, ಈಗ “ತ್ರಿಬಲ್ ರೈಡಿಂಗ್’ ಮೂಲಕ ಹಿರಿತೆರೆಯಲ್ಲೂ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ.
ಉಳಿದಂತೆ ಗಣೇಶ್, ಮೇಘಾ ಶೆಟ್ಟಿ ಅವರೊಂದಿಗೆ “ತ್ರಿಬಲ್ ರೈಡಿಂಗ್’ಚಿತ್ರದಲ್ಲಿ ಸಾಧುಕೋಕಿಲ,ಕುರಿಪ್ರತಾಪ್, ರವಿಶಂಕರ್ ಗೌಡ, ಮಿಮಿಕ್ರಿ ಗೋಪಿ, ಕಾಮಿಡಿ ಕಿಲಾಡಿಗಳು ಸಂತು ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ನವೆಂಬರ್2ನೇ ವಾರದೊಳಗೆ ಮೈಸೂರಿನಲ್ಲಿ “ತ್ರಿಬಲ್ ರೈಡಿಂಗ್’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣವಾಗಲಿದ್ದು, ಬಳಿಕ ಮಡಿಕೇರಿ, ಚಿಕ್ಕಮಗಳೂರು ಅಥವಾ ಊಟಿ ಸುತ್ತಮುತ್ತಲಿನ ಸುಂದರ ತಾಣಗಳಲ್ಲಿ ಎರಡನೇ ಹಂತದ ಚಿತ್ರೀಕರಣಮಾಡುವಯೋಚನೆಯಲ್ಲಿದೆಚಿತ್ರತಂಡ.ಎಲ್ಲಅಂದುಕೊಂಡತೆ ನಡೆದರೆ, ಈ ವರ್ಷದ ಕೊನೆಯೊಳಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ “ತ್ರಿಬಲ್ ರೈಡಿಂಗ್’ ಚಿತ್ರೀಕರಣ ಪೂರ್ಣಗೊಳಿಸಿ, ಮುಂದಿನ ಜೂನ್ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಪ್ಲಾನ್ನಲ್ಲಿದೆ ಚಿತ್ರತಂಡ.
ನಿರೀಕ್ಷೆ ಮೂಡಿಸಿರುವ ಗಾಳಿಪಟ 2 : ಮತ್ತೂಂದೆಡೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮತ್ತೂಂದು ಚಿತ್ರ “ಗಾಳಿಪಟ-2’ದ ಬಗ್ಗೆಯೂ ಸಿನಿಪ್ರಿಯರಲ್ಲಿ ಮತ್ತು ಗಣೇಶ್ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಮನೆ ಮಾಡಿದೆ. “ಮುಂಗಾರು ಮಳೆ’ ಮತ್ತು “ಗಾಳಿಪಟ’ ಚಿತ್ರದ ಸೂಪರ್ ಹಿಟ್ ಸಕ್ಸಸ್ಬಳಿಕ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ಭಟ್ ಕಾಂಬಿನೇಶನ್ನಲ್ಲಿ ಈ ಚಿತ್ರ ಮೂಡಿ ಬರುತ್ತಿರುವುದರಿಂದ,ಈ ಬಾರಿ ಕೂಡ ಗಣಿ ಮತ್ತುಭಟ್ಜೋಡಿ ಹ್ಯಾಟ್ರಿಕ್ ಬಾರಿಸಬಹುದು ಎಂಬ ನಿರೀಕ್ಷೆ ಚಿತ್ರರಂಗದಲ್ಲಿದೆ. ಈಗಾಗಲೇ”ಗಾಳಿಪಟ-2′ ಚಿತ್ರದ ಚಿತ್ರೀಕರಣ ಅರ್ಧದಷ್ಟು ಪೊರ್ಣಗೊಂಡಿದ್ದು, ಕೋವಿಡ್ ಲಾಕ್ಡೌನ್ನಿಂದಾಗಿ ವಿದೇಶಕ್ಕೆ ಹಾರಲು ಚಿತ್ರತಂಡ ಮಾಡಿಕೊಂಡಿದ್ದ ಪ್ಲಾನ್ಗೆ ಸದ್ಯಕ್ಕೆ ಬ್ರೇಕ್ಬಿದ್ದಿದೆ. ರಮೇಶ್ ರೆಡ್ಡಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ “ಗಾಳಿಪಟ-2′ ಚಿತ್ರದಲ್ಲಿ ಗಣೇಶ್ ಅವರೊಂದಿಗೆ ದಿಗಂತ್ ಮತ್ತು ಪವನ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!
ಧರ್ಮ ಮಾರ್ಗದಲ್ಲಿ ನಡೆದರಷ್ಟೇ ಜೀವನ ಸಾರ್ಥಕ: ಶ್ರೀ ವಿಧುಶೇಖರಶ್ರೀ
CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ
Karkala: ಕಾಂಗ್ರೆಸ್ಸಿನಿಂದ ಬೃಹತ್ ಪರಿವರ್ತನಾ ರ್ಯಾಲಿ
Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ