ಬಿಡುಗಡೆಯಾಗದ “ಒಡೆಯ’ನ ಮೋಶನ್ ಪೋಸ್ಟರ್
ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ಗೆ ಕ್ಷಮೆ ಕೇಳಿದ ನಿರ್ಮಾಪಕ ಸಂದೇಶ್
Team Udayavani, Oct 10, 2019, 3:02 AM IST
ಇತ್ತೀಚೆಗಷ್ಟೆ “ಕುರುಕ್ಷೇತ್ರ’ ಚಿತ್ರದ ಯಶಸ್ವಿ ಐವತ್ತು ದಿನಗಳ ಸಂಭ್ರವನ್ನು ಭರ್ಜರಿಯಾಗಿ ಆಚರಿಕೊಂಡಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಚಿತ್ತ ಈಗ ದರ್ಶನ್ ಅಭಿನಯದ ಮುಂಬರುವ ಚಿತ್ರ “ಒಡೆಯ’ನತ್ತ ನೆಟ್ಟಿದೆ. ಅದಕ್ಕೆ ಕಾರಣ ಈ ಹಿಂದೆಯೇ, ದರ್ಶನ್ ಅವರ ಮುಂಬರುವ ಚಿತ್ರ “ಒಡೆಯ’ ಎಂದು ಘೋಷಿಸಿದ್ದ ಚಿತ್ರತಂಡ, ಇದೇ ವಿಜಯದಶಮಿಯಂದು “ಒಡೆಯ’ನ ಮೋಶನ್ ಪೋಸ್ಟರ್ ಬಿಡುಗಡೆಯಾಗಲಿದೆ.
ನವೆಂಬರ್ ವೇಳೆಗೆ ಚಿತ್ರ ತೆರೆಗೆ ಬರಲಿದೆ ಎಂದು ಪ್ರಕಟಿಸಿತ್ತು. ಅದರಂತೆ ಈ ವಿಜಯದಶಮಿಯ ವೇಳೆ “ಒಡೆಯ’ನ ಮೋಶನ್ ಪೋಸ್ಟರ್ಗಾಗಿ ಎದುರು ನೋಡುತ್ತಿದ್ದ ಅಭಿಮಾನಿಗಳ ಮುಂದೆ ತಾಂತ್ರಿಕ ಕಾರಣಗಳಿಂದ “ಒಡೆಯ’ನ ದರ್ಶನ ಸಾಧ್ಯವಾಗಲಿಲ್ಲ. ಇದು ಸಹಜವಾಗಿ ದರ್ಶನ್ ಅಭಿಮಾನಿಗಳ ನಿರಾಸೆಗೆ ಕಾರಣವಾದಂತಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ಕೂಡ ಅಭಿಮಾನಿಗಳು ತಮ್ಮ ಬೇಸರ, ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.
ಇದನ್ನು ಗಮನಿಸಿದ ಚಿತ್ರತಂಡ “ಒಡೆಯ’ನ ಮೋಶನ್ ಪೋಸ್ಟರ್ ನಿಗದಿತ ಸಮಯಕ್ಕೆ ಬಿಡುಗಡೆ ಮಾಡಲು ಸಾಧ್ಯವಾಗದಿರುವುದಕ್ಕೆ ದರ್ಶನ್ ಅಭಿಮಾನಿಗಳ ಬಳಿ ಕ್ಷಮೆ ಯಾಚಿಸಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೇ ಪ್ರತಿಕ್ರಿಯಿಸಿರುವ “ಒಡೆಯ’ ಚಿತ್ರದ ನಿರ್ಮಾಪಕ ಸಂದೇಶ್, “ವಿಜಯದಶಮಿ ಪ್ರಯುಕ್ತ ಬಿಡುಗಡೆಯಾಗಬೇಕಿದ್ದ ನಮ್ಮ ಡಿ ಬಾಸ್ರವರ “ಒಡೆಯ’ ಚಿತ್ರದ ಮೋಶನ್ ಪೋಸ್ಟರ್ ಅನ್ನು ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಮುಂದೂಡಲಾಗಿದೆ.
ಇಷ್ಟರಲ್ಲೇ ನಿಮಗೆ ಬಿಡುಗಡೆಯ ದಿನಾಂಕವನ್ನು ತಿಳಿಸಲಾಗುವುದು ಕ್ಷಮೆ ಇರಲಿ’ ಎಂದಿದ್ದಾರೆ. ಇನ್ನು ಅಣ್ಣ-ತಮ್ಮಂದಿರ ಸೆಂಟಿಮೆಂಟ್ ಕಥಾಹಂದರ ಹೊಂದಿರುವ “ಒಡೆಯ’ ಚಿತ್ರದಲ್ಲಿ ನಟ ದರ್ಶನ್ ಗಜೇಂದ್ರ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಎಂ.ಡಿ ಶ್ರೀಧರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ರಾಘವಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ದೇವರಾಜ್, ಸಾಧುಕೋಕಿಲ, ಚಿಕ್ಕಣ್ಣ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಸದ್ಯ ತನ್ನ ಟೈಟಲ್ ಮತ್ತು ಫಸ್ಟ್ಲುಕ್ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ “ಒಡೆಯ’ ಚಿತ್ರರಂಗದ ಮೂಲಗಳ ಪ್ರಕಾರ, ಇದೇ ನವೆಂಬರ್ ವೇಳೆಗೆ ಅದ್ದೂರಿಯಾಗಿ ತೆರೆ ಮೇಲೆ ತರಲು ಪ್ಲಾನ್ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ
ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ