ವಿನೋದ್ ಪ್ರಭಾಕರ್ ನೂತನ ಚಿತ್ರ
Team Udayavani, Jun 16, 2018, 5:10 PM IST
ವಿನೋದ್ ಪ್ರಭಾಕರ್ ಈಗ ಮತ್ತೂಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಅವರ ಹೊಸ ಚಿತ್ರ ಮುಹೂರ್ತ ಕಂಡಿತ್ತು. ಆ ಸಿನಿಮಾ ಚಿತ್ರೀಕರಣ ನಡೆಯುತ್ತಿರುವ ಬೆನ್ನಲ್ಲೇ, ಅವರೀಗ ಪಕ್ಕಾ ಆ್ಯಕ್ಷನ್, ಲವ್ ಮತ್ತು ಫ್ಯಾಮಿಲಿ ಕಥೆ ಇರುವ ಚಿತ್ರಕ್ಕೆ ಗ್ರೀನ್ಸಿಗ್ನಲ್ ಕೊಟ್ಟಿದ್ದಾರೆ. ಈ ಚಿತ್ರವನ್ನು ನೂತನ್ ಉಮೇಶ್ ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ “ಕೃಷ್ಣನ್ ಮ್ಯಾರೇಜ್ ಸ್ಟೋರಿ’ಯಂತಹ ಫ್ಯಾಮಿಲಿ ಚಿತ್ರ ನಿರ್ದೇಶಿಸಿದ್ದ ನೂತನ್ ಉಮೇಶ್ ಇದೀಗ ಪಕ್ಕಾ ಆ್ಯಕ್ಷನ್ ಕಥೆ ಹೆಣೆದು ನಿರ್ದೇಶನಕ್ಕೆ ಅಣಿಯಾಗಿದ್ದಾರೆ.
ಚಿತ್ರಕ್ಕಿನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಈ ಚಿತ್ರವನ್ನು ಆಕಾಶ್ ಎಂಟರ್ಪ್ರೈಸಸ್ ಬ್ಯಾನರ್ನಲ್ಲಿ ಕಟಿಗೇನಹಳ್ಳಿ ಸೋಮಶೇಖರ್ ನಿರ್ಮಾಣ ಮಾಡತ್ತಿದ್ದಾರೆ. ಅವರಿಗೆ ಇದು ಮೊದಲ ನಿರ್ಮಾಣದ ಚಿತ್ರ. ಸದ್ಯಕ್ಕೆ ವಿನೋದ್ ಪ್ರಭಾಕರ್ ಹೀರೋ ಅನ್ನುವುದು ಬಿಟ್ಟರೆ, ಉಳಿದಂತೆ ನಾಯಕಿ ಹಾಗೂ ಇತರೆ ಕಲಾವಿದರು, ತಂತ್ರಜ್ಞರ ಆಯ್ಕೆ ಆಗಬೇಕಿದೆ. “ಇದೊಂದು ಮಾಸ್ ಫೀಲ್ ಇರುವ ಚಿತ್ರ’ ಎಂದು ವಿವರ ಕೊಡುವ ನಿರ್ದೇಶಕ ನೂತನ್ ಉಮೇಶ್, “ರೆಗ್ಯುಲರ್ ಆ್ಯಕ್ಷನ್ ಚಿತ್ರಗಳಿಗಿಂತ ಕೊಂಚ ವಿಭಿನ್ನವಾದಂತಹ ಸ್ಟಂಟ್ಸ್ ಈ ಚಿತ್ರದಲ್ಲಿರಲಿವೆ.
ವಿನೋದ್ ಪ್ರಭಾಕರ್ ಅವರ ಆ್ಯಕ್ಷನ್ ನೋಡಿದವರಿಗೆ, ಈ ಚಿತ್ರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಿಸ್ಕೀ ಸ್ಟಂಟ್ಸ್ ಇರುವಂತಹ ದೃಶ್ಯಗಳನ್ನು ನೋಡಬಹುದು. ಆ ಮಟ್ಟಕ್ಕೆ ಆ್ಯಕ್ಷನ್ ಸಿನಿಮಾ ಆಗಿ ಮೂಡಿಬರಲಿದೆ. ಇನ್ನು, ಇಲ್ಲಿ ಸಿನಿಮಾದ ನೋಟ ಕೂಡ ಹೊಸದಾಗಿರಲಿದೆ. ಜಬರ್ದಸ್ತ್ ಆ್ಯಕ್ಷನ್ನೊಂದಿಗೆ ಪ್ರೀತಿ, ಸೆಂಟಿಮೆಂಟ್ ಸಮ್ಮಿಶ್ರಣ ಇಲ್ಲಿದೆ. ಒಂದು ಔಟ್ ಅಂಡ್ ಔಟ್ ಮಾಸ್ ಚಿತ್ರದಲ್ಲಿ ಏನೆಲ್ಲಾ ಇರಬೇಕೋ ಅದೆಲ್ಲದರ ಜೊತೆಗೆ ವಿಶೇಷ ಪ್ಯಾಕೇಜ್ ಚಿತ್ರ ಎನಿಸುವಷ್ಟರ ಮಟ್ಟಿಗೆ ಚಿತ್ರವನ್ನು ಕಟ್ಟಿಕೊಡಲಾಗುತ್ತದೆ.
ಇಲ್ಲಿ ವಿನೋದ್ ಪ್ರಭಾಕರ್ ಅಭಿಮಾನಿಗಳಿಗಷ್ಟೇ ಅಲ್ಲ, ಎಲ್ಲಾ ವರ್ಗದವರಿಗೂ ಇಷ್ಟವಾಗುವಂತಹ ಅಂಶಗಳು ಇರಲಿವೆ. ಮನರಂಜನೆಯೊಂದಿಗೆ ಒಂದಷ್ಟು ಈಗಿನ ವ್ಯವಸ್ಥೆಯ ಅಂಶಗಳು ಕಾಣಿಸಿಕೊಳ್ಳಲಿವೆ. ಒಟ್ಟಾರೆ, ವಿನೋದ್ ಪ್ರಭಾಕರ್ ಅವರಿಲ್ಲಿ ಈವರೆಗೆ ಮಾಡದೇ ಇರುವಂತಹ ಪಾತ್ರವನ್ನು ಮಾಡುತ್ತಿದ್ದು, ಅವರನ್ನು ಇಲ್ಲಿ ಹೊಸ ಆ್ಯಂಗಲ್ನಲ್ಲಿ ನೋಡಬಹುದು’ ಎಂಬ ಗ್ಯಾರಂಟಿ ಕೊಡುತ್ತಾರೆ ನೂತನ್ ಉಮೇಶ್.
ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ಹೊತ್ತಿರುವ ನೂತನ್ ಉಮೇಶ್, ಒಂದು ಗ್ಯಾಪ್ ಬಳಿಕ ಕೈಗೆತ್ತಿಕೊಂಡಿರುವ ಚಿತ್ರವಾದ್ದರಿಂದ, ಎಲ್ಲವೂ ಹೊಸದಾಗಿರಬೇಕು ಎಂಬ ಕಾರಣಕ್ಕೆ, ಈ ಬಾರಿ ಹೊಸ ತರಹದ ಕಥೆ ಹೆಣೆದು, ಒಂದೊಳ್ಳೆಯ ಚಿತ್ರ ಕೊಡುವ ವಿಶ್ವಾಸದಲ್ಲಿದ್ದಾರೆ. ಅಂದಹಾಗೆ, ಜುಲೈನಲ್ಲಿ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಅದಾದ ಬಳಿಕ ಚಿತ್ರೀಕರಣ ಶುರುವಾಗಲಿದೆ. ಬಹುತೇಕ ಬೆಂಗಳೂರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ ಎಂಬ ವಿವರ ಕೊಡುತ್ತಾರೆ ನಿರ್ದೇಶಕ ನೂತನ್ ಉಮೇಶ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?