ನಮ್ಮ ಮುಂದಿರುವ ಸವಾಲಿಗೆ ಸಮರ್ಥ ಉತ್ತರ ನೀಡುತ್ತೇವೆ

ಫಿಲಂ ಚೇಂಬರ್‌ ಪದಾಧಿಕಾರಿಗಳಿಗೆ "ಉದಯವಾಣಿ' ಅಭಿನಂದನೆ

Team Udayavani, Jul 4, 2019, 3:00 AM IST

kfcc

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಯ್ಕೆಯಾದ ನೂತನ ಅಧ್ಯಕ್ಷರು ಹಾಗು ಪದಾಧಿಕಾರಿಗಳನ್ನು ಬುಧವಾರ “ಉದಯವಾಣಿ’ ಮಣಿಪಾಲ್‌ ಮೀಡಿಯಾ ನೆಕ್‌ವರ್ಕ್‌ ಪರವಾಗಿ ಅಭಿನಂದಿಸಿತು. ಈ ವೇಳೆ “ಉದಯವಾಣಿ’ಗೆ ವಿಶೇಷ ಸಂದರ್ಶನ ನೀಡಿದ ನೂತನ ಅಧ್ಯಕ್ಷ ಜೈರಾಜ್‌ ಅವರು, ತಮ್ಮ ಯೋಜನೆಗಳು, ಆದ್ಯತೆಯ ಕೆಲಸಗಳ ಬಗ್ಗೆ ಮಾತನಾಡಿದ್ದಾರೆ.

ಚಿತ್ರಗಳ ಸಂಖ್ಯೆ ಜಾಸ್ತಿ, ಗೆಲ್ಲುವ ಚಿತ್ರ ಕಡಿಮೆ: ಕಳೆದ ವರ್ಷ 200ಕ್ಕೂ ಹೆಚ್ಚು ಚಿತ್ರಗಳು ಕನ್ನಡದಲ್ಲಿ ಬಂದಿವೆ. ಈ ವರ್ಷ ಇನ್ನೂ ಹೆಚ್ಚುವ ಸಾಧ್ಯತೆ ಇದೆ. ವರ್ಷದಿಂದ ವರ್ಷಕ್ಕೆ ಚಿತ್ರಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಚಿತ್ರರಂಗದ ಮಟ್ಟಿಗೆ ಇದು ಒಳ್ಳೆಯ ಬೆಳವಣಿಗೆ. ಆದರೆ, ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಚಿತ್ರಗಳು ಬಿಡುಗಡೆಯಾದರೂ, ಗೆಲ್ಲುವ ಚಿತ್ರಗಳ ಸಂಖ್ಯೆ ಕಡಿಮೆ ಇದೆ.

ಚಿತ್ರಗಳು ದುಡ್ಡು ಮಾಡುವುದಿರಲಿ, ಬಹುತೇಕ ಚಿತ್ರಗಳಿಗೆ ನಿರ್ಮಾಪಕರು ಹಾಕಿದ ಕನಿಷ್ಟ ಬಂಡವಾಳ ಕೂಡ ವಾಪಾಸ್‌ ಬರುತ್ತಿಲ್ಲ. ಹೀಗಾದರೆ ನಿರ್ಮಾಪಕರು ಉಳಿಯುವುದಾದರೂ ಹೇಗೆ? ಪ್ರತಿವರ್ಷ ಹೊಸ ನಿರ್ಮಾಪಕರು, ನಿರ್ದೇಶಕರು ಬರುತ್ತಿದ್ದಾರೆ. ಈ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ.

ಆದರೆ ಚಿತ್ರಗಳು ಸೋಲುತ್ತಾ ಹೋದರೆ, ಮತ್ತೆ ಯಾರು ಚಿತ್ರ ಮಾಡೋದಕ್ಕೆ ಮುಂದೆ ಬರುತ್ತಾರೆ? ಚಿತ್ರರಂಗದ ಮಟ್ಟಿಗೆ ಇದೊಂದು ಗಂಭೀರ ವಿಚಾರ. ಇದಕ್ಕೆ ಎಲ್ಲರೂ ಸೇರಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಇದು ಚಿತ್ರರಂಗದ ಅಸ್ತಿತ್ವದ ಪ್ರಶ್ನೆಯಾಗಿರುವುದರಿಂದ, ಖಂಡಿತಾ ಮುಂದಿನ ದಿನಗಳಲ್ಲಿ ವಾಣಿಜ್ಯ ಮಂಡಳಿ ಈ ನಿಟ್ಟಿನಲ್ಲಿ ಕೆಲಸ ಮಾಡಲಿದೆ.

ಮಂಡಳಿ ಮುಂದೆ ಸವಾಲುಗಳಿವೆ: ಕನ್ನಡ ಚಿತ್ರರಂಗಕ್ಕೆ ವಾಣಿಜ್ಯ ಮಂಡಳಿಯೇ ಮಾತೃ ಸಂಸ್ಥೆಯಾಗಿರುವುದರಿಂದ, ಸಹಜವಾಗಿಯೇ ಚಿತ್ರರಂಗದಲ್ಲಿ ಏನೇ ಸಮಸ್ಯೆಗಳಿದ್ದರೂ, ಅದು ಮಂಡಳಿ ಮುಂದೆ ಬರುತ್ತದೆ. ವಾಣಿಜ್ಯ ಮಂಡಳಿ ನಿರ್ಮಾಪಕರು, ವಿತರಕರು, ಪ್ರದರ್ಶಕರು ಹೀಗೆ ಇಡೀ ಚಿತ್ರರಂಗದ ಹಿತ ಕಾಯಬೇಕಾಗಿರುವುದರಿಂದ, ಎಲ್ಲದಕ್ಕೂ ಸ್ಪಂದಿಸಬೇಕಾಗುತ್ತದೆ. ಹಾಗಂತ, ಚಿತ್ರರಂಗದ ಎಲ್ಲಾ ಸಮಸ್ಯೆಗಳಿಗೂ ನಾವು ಪರಿಹಾರ ಕೊಡುತ್ತೇವೆ ಅಂತಲ್ಲ.

ನಮ್ಮ ವ್ಯಾಪ್ತಿಯಲ್ಲಿ ನಾವೇನು ಮಾಡಬಹುದೋ, ಅದನ್ನು ಖಂಡಿತಾ ಮಾಡುತ್ತೇವೆ. ಎಲ್ಲರನ್ನು ಒಟ್ಟಾಗಿ ವಿಶ್ವಾಸದಿಂದ ಕರೆದುಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಥಿಯೇಟರ್‌ ಸಮಸ್ಯೆ, ಚಿತ್ರನಗರಿ ವಿಳಂಬ, ಜಿಎಸ್‌ಟಿ ಹೀಗೆ ನಮ್ಮ ಮುಂದೆ ಹತ್ತಾರು ಸಮಸ್ಯೆಗಳು ಇವೆ ಅನ್ನೋದಕ್ಕಿಂತ, ಸವಾಲುಗಳು ಇದೆ ಅಂತ ಹೇಳಬಹುದು.

ಪರಿಹಾರ ಹುಡುಕುವ ಪ್ರಯತ್ನ ಮಾಡುತ್ತೇವೆ: ಕೆಲವೊಂದು ಸಮಸ್ಯೆಗಳು ಅನೇಕ ವರ್ಷದಿಂದ ಚಿತ್ರರಂಗದಲ್ಲಿದೆ. ಪ್ರದರ್ಶಕನಾಗಿ, ವಿತರಕನಾಗಿ ನಾನು ಕೂಡ ಅಂತಹ ಅನೇಕ ಸಮಸ್ಯೆ ಎದುರಿಸಿದ್ದೇನೆ. ಹಾಗಾಗಿ ನನಗೆ ಚಿತ್ರದಲ್ಲಿರುವ ಎಲ್ಲರ ಸಮಸ್ಯೆ, ನೋವು ಅರ್ಥವಾಗುತ್ತದೆ. ಅದರಲ್ಲೂ ಹೊಸದಾಗಿ ಚಿತ್ರ ಮಾಡಿದವರು ಥಿಯೇಟರ್‌ ಸಿಗುತ್ತಿಲ್ಲ ಎನ್ನುವ ಸಮಸ್ಯೆ ಹೇಳುತ್ತಾರೆ.

ಒಳ್ಳೆ ಚಿತ್ರ ಮಾಡಿದರೆ ಖಂಡಿತಾ ಥಿಯೇಟರ್‌ ಕೊಡಬಹುದು ಅನ್ನೋದು ಪ್ರದರ್ಶಕರ ವಾದ. ಯುಎಫ್ಓ – ಕ್ಯೂಬ್‌ ಸರಿಯಾಗಿ ವ್ಯವಹರಿಸುತ್ತಿಲ್ಲ ಎನ್ನುವ ದೂರಿದೆ. ಇನ್ನೊಂದು ಕಡೆ ಸರ್ಕಾರ ಜನತಾ ಥಿಯೇಟರ್‌ ಬಗ್ಗೆ ಹೇಳಿದರೂ, ಅದನ್ನು ಮಾಡಲು ಯಾರೂ ಮುಂದೆ ಬರುತ್ತಿಲ್ಲ. ಚಿತ್ರನಗರಿ ಈಗಾಗಲೇ ಆಗಬೇಕಿತ್ತು.

ಕಾರಣಾಂತರಗಳಿಂದ ಆಗಿಲ್ಲ. ಜಿಎಸ್‌ಟಿ ಗೊಂದಲ ಇನ್ನೂ ಇದೆ. ಈ ಬಗ್ಗೆ ಸರ್ಕಾರದ ಜೊತೆ ಮಾತುಕತೆ ಮಾಡುತ್ತಿದ್ದೇವೆ. ಇಲ್ಲಿ ಯಾರೋ ಒಬ್ಬರು ಸರಿ, ಮತ್ತೂಬ್ಬರು ತಪ್ಪು ಅಂತ ಹೇಳಲಾಗುವುದಿಲ್ಲ. ಒಟ್ಟಿನಲ್ಲಿ ನಮ್ಮ ಅವಧಿಯಲ್ಲಿ ಈ ಇದೆಲ್ಲದ್ದಕ್ಕೂ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುತ್ತೇವೆ.

ಮಂಡಳಿಗೆ 75ರ ಸಂಭ್ರಮಕ್ಕೆ ತಯಾರಿ: ಕನ್ನಡ ಚಿತ್ರರಂಗ ಎಂಟು ದಶಕಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದೇ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಎಪ್ಪತ್ತೈದರ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಮಂಡಳಿ ನಿರ್ಧರಿಸಿದೆ. ಚಿತ್ರರಂಗವನ್ನು ಕಟ್ಟಿದ, ಇದರ ಬೆಳವಣಿಗೆಗೆ ಕಾರಣರಾದವರನ್ನು ಸ್ಮರಿಸುವ, ಚಿತ್ರರಂಗದ ಇತಿಹಾಸವನ್ನು ಈಗಿನವರಿಗೆ ಮತ್ತು ಮುಂದಿನವರಿಗೆ ತಲುಪಿಸುವ ಸದುದ್ದೇಶದಿಂದ ಇಂಥದ್ದೊಂದು ವಿಭಿನ್ನ ಕಾರ್ಯಕ್ರಮ ನಡೆಸುವ ಯೋಜನೆ ಇದೆ.

ಚಿತ್ರರಂಗದ ಎಲ್ಲರ ಸಹಕಾರ ಪಡೆದುಕೊಂಡು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಇಡೀ ಭಾರತೀಯ ಚಿತ್ರರಂಗವೇ ಇದಕ್ಕೆ ಸಾಕ್ಷಿಕರಿಸುವಂತೆ ಕಾರ್ಯಕ್ರಮ ಮಾಡುವ ಯೋಜನೆ ಇದೆ. ಈ ಕಾರ್ಯಕ್ರಮದ ಬಗ್ಗೆ ಈಗಾಗಲೇ ತಯಾರಿ ಮತ್ತು ರೂಪುರೇಷೆಗಳು ಸಿದ್ಧವಾಗುತ್ತಿದ್ದು, ಶೀಘ್ರದಲ್ಲಿಯೇ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ.

ಟಾಪ್ ನ್ಯೂಸ್

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

jagadish shettar

Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.