“ನನಗೆ ಬೇಕಿರುವುದು ಪ್ರೀತಿಮಾತ್ರ, ಡೋಂಗಿ followersಗಳಲ್ಲ’
Team Udayavani, Feb 20, 2019, 10:24 AM IST
ಇತ್ತಿಚೆಗಷ್ಟೇ ನವರಸ ನಾಯಕ ಜಗ್ಗೇಶ್ ಅಭಿನಯದ “ಪ್ರೀಮಿಯರ್ ಪದ್ಮಿನಿ’ ಚಿತ್ರದ ಡಬ್ಬಿಂಗ್ ಮುಕ್ತಾಯವಾಗಿದ್ದು, ಜಗ್ಗೇಶ್ ಕೊಂಚ ಬಿಡುವಿನಲ್ಲಿದ್ದಾರೆ. ಅಲ್ಲದೇ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿದ್ದು, ಇದೀಗ ಟ್ವೀಟರ್ ಖಾತೆಯ ನಕಲಿ ಫಾಲೋವರ್ ಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, “ನನಗೆ ನನಗೆ ಡೋಂಗಿ million followers ಸಂಖ್ಯೆ ಬೇಕಿಲ್ಲಾ! ಬೇಕಿರುವುದು ಪ್ರೀತಿಯ ಆತ್ಮಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಹೌದು, ಇತ್ತೀಚೆಗೆ ಜಗ್ಗೇಶ್, ಟ್ವೀಟರ್ ಖಾತೆಯನ್ನು ಫಾಲೋ ಮಾಡುತ್ತಿರುವ ಕೆಲವರು ಅವರ ಪ್ರತಿಯೊಂದು ಪೋಸ್ಟ್ ಬಗ್ಗೆಯೂ ಕುಹುಕದ ಮಾತುಗಳು ಮತ್ತು ವ್ಯರ್ಥ ಚರ್ಚೆ ಮಾಡುತ್ತಿರುವ ಬಗ್ಗೆ ಅಸಮಾಧಾನಗೊಂಡಿದ್ದು, ಈ ಬಗ್ಗೆ ಜಗ್ಗೇಶ್ ಸರಣಿ ಟ್ವೀಟ್ ಮಾಡಿದ್ದಾರೆ.
“ನಾನು ಸಾಮಾಜಿಕ ಜಾಲತಾಣ 2014ರಿಂದ ಬಳಸುತ್ತಿರುವೆ! ಉದ್ದೇಶ ನನ್ನ ಪ್ರೀತಿಸುವ ಆತ್ಮಗಳ ಅನ್ವೇಷಣೆಗೆ! ರಾಯರ ದಯೇ 4.8k ದೊರೆಕಿದ್ದಾರೆ ಧನ್ಯ! ಇವರ ಮದ್ಯೇ ಯಾರೋ fakeಗಳು ಸೇರಿ ನನ್ನಪ್ರತಿ twitಗು! ಅರ್ಥ! ಅಪಹಾಸ್ಯ! timepassಗೆ ಯತ್ನಿಸುತ್ತಾರೆ! ಈಗ ನನ್ನ ಆಯ್ಕೆ ಆತ್ಮೀಯರ ಉಳಿವಿಕೆ! timepassಗಳಿಂದ ದೂರ ಉಳಿಯೋದು! ಹಾಗಾಗಿ mute! blockಬಳಸುವೆ!’ ಎಂದು ಜಗ್ಗೇಶ್ ಹೇಳಿದ್ದಾರೆ.
ನಾನು ಸಾಮಾಜಿಕ ಜಾಲತಾಣ 2014ರಿಂದ ಬಳಸುತ್ತಿರುವೆ!
ಉದ್ದೇಶ ನನ್ನ ಪ್ರೀತಿಸುವ ಆತ್ಮಗಳ ಅನ್ವೇಷಣೆಗೆ!ರಾಯರ ದಯೇ 4.8k ದೊರೆಕಿದ್ದಾರೆ ಧನ್ಯ!ಇವರ ಮದ್ಯೇ ಯಾರೋ fakeಗಳು ಸೇರಿ ನನ್ನಪ್ರತಿtwit
ಗು!ಅರ್ಥ!ಅಪಹಾಸ್ಯ!timepassಗೆ ಯತ್ನಿಸುತ್ತಾರೆ!ಈಗ ನನ್ನ ಆಯ್ಕೆ ಆತ್ಮೀಯರ ಉಳಿವಿಕೆ!timepassಗಳಿಂದ
ದೂರ ಉಳಿಯೋದು!ಹಾಗಾಗಿ mute!blockಬಳಸುವೆ!— ನವರಸನಾಯಕ ಜಗ್ಗೇಶ್ (@Jaggesh2) February 19, 2019
ಅಲ್ಲದೇ “ನನಗೆ ಡೋಂಗಿ million followers ಸಂಖ್ಯೆ ಬೇಕಿಲ್ಲಾ! ಬೇಕಿರುವುದು ಪ್ರೀತಿಯ ಆತ್ಮಗಳು! ಭಾವನೆಗೆ ಬೇಕಿರುವುದು ಪ್ರೀತಿಯ ಆತ್ಮಗಳು ಮಾತ್ರ! ಅವು ನೂರಿದ್ದರು ಸಾಕು! ಕೋಟಿ ಯಾಕೆ ಬೇಕು! ಅಲ್ಲವೇ! ದುಡ್ಡು ಕೊಟ್ಟರೆ ಏನು ಬೇಕಾದರು ಸಿಗುತ್ತದೆ ! ಪ್ರೀತಿ ಒಂದುಬಿಟ್ಟು! ನನಗೆ ಬೇಕಿರುವುದು ಪ್ರೀತಿ ಮಾತ್ರ! ದುಡ್ಡು ತುಂಬ ನೋಡಿರುವೆ! ಸಂತೋಷ ಹುಡುಕುವ!’ ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.
ಇಷ್ಟಕ್ಕೂ ಸುಮ್ಮನಾಗದ ನವರಸ ನಾಯಕ ಜಗ್ಗೇಶ್, “ನನಗೆ ಬೇಕಿರುವುದು ಪ್ರೀತಿಮಾತ್ರ! ಕಾರಣ ಬದುಕಿನ ಎಲ್ಲಾ ಮಗ್ಗಲು ಕಂಡು ಮಾಗಿದೆ ಮನಸ್ಸು! ಯಾರಿಗಾದರು ಪ್ರೀತಿಬಿಟ್ಟು ಬೇರೆ ಏನಾದರು ಬೇಕಿದ್ದರೆ! ನನ್ನ ಹಿಂಬಾಲಿಸುವುದು ವ್ಯರ್ಥ! ತಂದೆ ಹಿರಿಯನ ಪ್ರೀತಿಬೇಕಿದ್ದರೆ ಉಳಿಯಿರಿ! ವ್ಯರ್ಥ ಚರ್ಚೆ ಬೇಕಿದ್ದರೆ ಬೇರೆಜಾಗ ಹುಡುಕಿ! ನಾನು ವ್ಯೆರ್ಥ! I search fr loveable heart!idont need haters!’ ಎಂದು ಮಗದೊಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್
ʼದುರ್ಗಿʼಯಾಗಿ ಚಂದನವನಕ್ಕೆ ಕಾಲಿಟ್ಟ ಕಾಲಿವುಡ್ ಬೆಡಗಿ: ಡಾಲಿ ಜೊತೆ ರೊಮ್ಯಾನ್ಸ್
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Kannada Cinema; ‘ರಾಮರಸ’ ಹಿಂದೆ ಗುರು ಆ್ಯಂಡ್ ಟೀಂ
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!