ರಶ್ಮಿಕಾ ಮುಂದಿನ ಚಿತ್ರ ಯಾವುದು?


Team Udayavani, Jan 8, 2018, 11:59 AM IST

rashmika.jpg

ರಶ್ಮಿಕಾ ಅಭಿನಯದ ಎರಡು ಚಿತ್ರಗಳು ಬ್ಯಾಕ್‌ ಟು ಬ್ಯಾಕ್‌ ಬಿಡುಗಡೆಯಾಗಿವೆ. ಅವರ ಮುಂದಿನ ಕನ್ನಡ ಚಿತ್ರ ಯಾವುದು? ಈ ವಿಷಯವನ್ನು ರಶ್ಮಿಕಾ ಅಪ್ಪಿತಪ್ಪಿಯೂ ಹೇಳುವುದಿಲ್ಲ. “ಒಂದು ದೊಡ್ಡ ಚಿತ್ರದಲ್ಲಿ ಹಳ್ಳಿಹುಡುಗಿ ಪಾತ್ರವನ್ನು ಮಾಡುತ್ತಿದ್ದೇನೆ. ಆ ಬಗ್ಗೆ ಚಿತ್ರತಂಡದವರೇ ಅಧಿಕೃತವಾಗಿ ಹೇಳುತ್ತಾರೆ. ಸದ್ಯದಲ್ಲೇ ಚಿತ್ರತಂಡದ ಕಡೆಯಿಂದಲೇ ಎಲ್ಲವೂ ಗೊತ್ತಾಗಲಿದೆ’ ಎಂದಷ್ಟೇ ಹೇಳುತ್ತಾರೆ. ಹಾಗಾದರೆ, ರಶ್ಮಿಕಾ ಅಭಿನಯದ ಮುಂದಿನ ಚಿತ್ರ ಯಾವುದು? ಅವರು ಯಾರ ಜೊತೆಗೆ ನಟಿಸಲಿದ್ದಾರೆ?

“ಪೈಲ್ವಾನ್‌’ನಲ್ಲಿ ಸುದೀಪ್‌ ಅವರಿಗೆ ನಾಯಕಿಯಾಗಿಯೋ ಅಥವಾ ದರ್ಶನ್‌ ಅವರ 51ನೇ ಚಿತ್ರದಲ್ಲೋ ಎಂಬ ಪ್ರಶ್ನೆ ಬರುವುದು ಸಹಜ. ಏಕೆಂದರೆ, ರಶ್ಮಿಕಾ ದೊಡ್ಡ ಹೀರೋ ಜೊತೆಗೆ ಆಪರ್‌ ಬಂದಿದೆ ಎಂದು ಹೇಳಿಕೊಂಡಿದ್ದಾರೆ. “ಪೈಲ್ವಾನ್‌’ ಮತ್ತು ದರ್ಶನ್‌ ಅಭಿನಯದ ಹೊಸ ಚಿತ್ರಗಳೆರಡೂ ಜನವರಿ ಕೊನೆ ಅಥವಾ ಫೆಬ್ರವರಿಯಲ್ಲಿ ಪ್ರಾರಂಭವಾಗಿರುವುದರಿಂದ, ಈ ಎರಡು ಚಿತ್ರಗಳಲ್ಲಿ ಯಾವ ಚಿತ್ರದಲ್ಲಿ ಅವರು ನಟಿಸಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ. ಇವೆರಡೂ ಚಿತ್ರ ಬಿಟ್ಟು ಇನ್ನೊಂದು ಬಿಗ್‌ ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡರೆ ಅದರಲ್ಲಿ ಆಶ್ಚರ್ಯವಿಲ್ಲ.

ಇನ್ನು ಕೆಲವು ದಿನಗಳಿಂದ ಖಾಲಿ ಕುಳಿತಿರುವುದರಿಂದ ಭಯ ಆಗುತ್ತಿದೆಯಂತೆ ರಶ್ಮಿಕಾಗೆ. “ನಾನು ಯಾವತ್ತೂ ಸುಮ್ಮನೆ ಕೂತಿಲ್ಲ. ಕಳೆದ ಒಂದು ವರ್ಷ ಬಿಝಿಯಾಗಿದ್ದೆ. ಮೂರು ಚಿತ್ರಗಳಲ್ಲಿ ನಟಿಸಿದೆ. ಈಗ ಒಂದು ವಾರ ಬ್ರೇಕ್‌ ಸಿಕ್ಕಿದೆ. ಸುಮ್ಮನೆ ಇರುವುದರಿಂದ ಭಯ ಆಗುತ್ತಿದೆ’ ಎಂದು ನಗುತ್ತಾರೆ ಅವರು. ತೆಲುಗಿನಲ್ಲಿ ವಿಜಯ್‌ ದೇವರಕೊಂಡ ಚಿತ್ರದಲ್ಲಿ ನಟಿಸುತ್ತಿರುವುದು ಬಿಟ್ಟರೆ, ರಶ್ಮಿಕಾ ಸದ್ಯಕ್ಕೆ ಯಾವುದೇ ಚಿತ್ರ ಇಲ್ಲ. “ಪೊಗರು’ನಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತಾದರೂ, ಆ ಚಿತ್ರದಲ್ಲಿ ನಟಿಸುತ್ತಿಲ್ಲವಂತೆ. “ಇನ್ನೊಂದಿಷ್ಟು ಚಿತ್ರಗಳ ಮಾತುಕತೆಯಾಗುತ್ತಿದೆಯಾದರೂ, ಅವೆಲ್ಲಾ ಪಕ್ಕಾ ಆದಮೇಲಷ್ಟೇ ಹೇಳ್ಳೋದಕ್ಕೆ ಸಾಧ್ಯ’ ಎನ್ನುತ್ತಾರೆ ಅವರು.

ಜನರ ಧ್ವನಿಯಾಗಿ ನಿಲ್ಲುವ ಪಾತ್ರ: “ಚಮಕ್‌’ನಲ್ಲಿ ಚಿತ್ರದಲ್ಲಿನ ತಮ್ಮ ಪಾತ್ರಕ್ಕೆ ಮೆಚ್ಚುಗೆ ಬಂದಿರುವುದರಿಂದ, ರಶ್ಮಿಕಾಗೆ ಧೈರ್ಯ ಬಂದಿದೆಯಂತೆ. “ಜನ ಒಪ್ಪುತ್ತಾರೋ ಇಲ್ಲವೋ ಎಂಬ ಭಯ ಇತ್ತು. ಈಗ ಮೆಚ್ಚಿಕೊಂಡಿರುವುದರಿಂದ, ಇನ್ನಷ್ಟು ಪ್ರಯೋಗ ಮಾಡಬಹುದು ಎಂಬ ಧೈರ್ಯ ಬಂದಿದೆ. ಇನ್ನಷ್ಟು ಬೇರೆ ತರಹದ ಪ್ರಯತ್ನ ಮಾಡಬೇಕೆಂಬ ಆಸೆ ಇದೆ. ಆದರೆ, ನನ್ನ ಪರಿಚಯ ಅಷ್ಟಾಗಿ ಇರಲಿಲ್ಲ. ಇದೀಗ ಮೂರು ಚಿತ್ರಗಳಾದ್ದರಿಂದ, ಜನರಿಗೆ ನನ್ನ ಪರಿಚಯವಾಗಿರುತ್ತದೆ. ಈಗ ಒಂದಿಷ್ಟು ಟ್ರೆ„ ಮಾಡಬಹುದು. ಜನರ ಧ್ವನಿಯಾಗಿ ನಿಲ್ಲುವಂತಹ ಪಾತ್ರಗಳು ಸಿಕ್ಕರೆ ಖಂಡಿತಾ ಒಪ್ಪುತ್ತೇನೆ’ ಎನ್ನುತ್ತಾರೆ ರಶ್ಮಿಕಾ.

ರಶ್ಮಿಕಾ ಆ್ಯಂಡ್‌ ಸೆವೆನ್‌ ಆಡ್ಸ್‌: ಇನ್ನು ರಕ್ಷಿತ್‌ ಅವರ ಜೊತೆಗೆ ಸೆವೆನ್‌ ಆಡ್ಸ್‌ ಇರುವಂತೆಯೇ, ರಶ್ಮಿಕಾ ಜೊತೆಗೂ ಸೆವೆನ್‌ ಆಡ್ಸ್‌ ಇದ್ದಾರಂತೆ. ಅವರು ಕಥೆ ಒಪ್ಪಿದರೆ, ತಾವು ಒಂದು ಚಿತ್ರ ಒಪ್ಪುವುದಾಗಿ ಹೇಳುತ್ತಾರೆ. “ನನಗೆ ಅಮ್ಮ ಸೇರಿದಂತೆ ಏಳು ಸ್ನೇಹಿತರಿದ್ದಾರೆ. ಅವರ ಜೊತೆಗೆ ಚರ್ಚೆ ಮಾಡುತ್ತೇನೆ. ಅವರಲ್ಲಿ ಮೆಜಾರಿಟಿ ಒಪ್ಪಿದರೆ, ನಾನು ಚಿತ್ರ ಮಾಡುತ್ತೇನೆ. ಇಲ್ಲವಾದರೆ ಇಲ್ಲ’ ಎನ್ನುತ್ತಾರೆ ರಶ್ಮಿಕಾ.

ಕಥೆ ಅಲ್ಲ ಐಡಿಯಾ: ರಶ್ಮಿಕಾ ಚೆನ್ನಾಗಿ ಕಥೆ ಬರೆಯುತ್ತಾರೆ ಎಂದು ರಕ್ಷಿತ್‌ ಹೇಳಿಕೊಂಡಿದ್ದರು. ಈ ಕುರಿತು ರಶ್ಮಿಕಾ ಅವರನ್ನು ಕೇಳಿದರೆ, “ಕಥೆ ಅಂತಲ್ಲ ಐಡಿಯಾ ಅಷ್ಟೇ. ಐಡಿಯಾ ಬಂತು, ಹೇಳಿದೆ. ಅದನ್ನು ಕೇಳಿ ಮುಂದುವರೆಸು ಅಂತ ಹೇಳಿದರು. ಸದ್ಯಕ್ಕೆ ಏನೂ ಬರೆದಿಲ್ಲ. ಮುಂದಿನ ದಿನಗಳಲ್ಲಿ ಏನಾದರೂ ಬರೆಯಬಹುದು. ನಾವು ಉಳಿಯಬೇಕು ಅಂದರೆ ನಾವೇ ಏನಾದರೂ ಮಾಡಿಕೊಳ್ಳಬೇಕು’ ಎಂಬುದು ರಶ್ಮಿಕಾ ಅಭಿಪ್ರಾಯ.

ಟಾಪ್ ನ್ಯೂಸ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

Ram Navami Procession: ರಾಮನವಮಿ ಮೆರವಣಿಗೆ ವೇಳೆ ಘರ್ಷಣೆ: 20ಕ್ಕೂ ಹೆಚ್ಚು ಮಂದಿಗೆ ಗಾಯ

2-shimoga

Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು

1-24-thursday

Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ

1eqqewe

IPL; ಪಂಜಾಬ್‌ ಕಿಂಗ್ಸ್‌-ಮುಂಬೈ ಇಂಡಿಯನ್ಸ್‌ : ಒಂದೇ ದೋಣಿಯ ಪಯಣಿಗರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

Actor Dwarakish: ಸಕಲ ಗೌರವಗಳೊಂದಿಗೆ ನಟ ದ್ವಾರಕೀಶ್‌ ಅಂತ್ಯಕ್ರಿಯೆ

choo mantar kannada movie

Sharan; ಮೇ 10ಕ್ಕೆ ‘ಛೂ ಮಂತರ್‌’ ತೆರೆಗೆ ಸಿದ್ಧ

aditya;s kangaroo movie

Aditya; ಟ್ರೇಲರ್ ನಲ್ಲಿ ‘ಕಾಂಗರೂ’ ದರ್ಶನ; ಮೇ.3ರಂದು ತೆರೆಗೆ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Dwarakish: ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್‌ ವಿಧಿವಶ

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

Sandalwood: ಡಾಲಿ ಧನಂಜಯ ʼಉತ್ತರಕಾಂಡʼಕ್ಕೆ ʼಲಚ್ಚಿʼಯಾಗಿ ಎಂಟ್ರಿ ಕೊಟ್ಟ ಚೈತ್ರಾ ಜೆ ಆಚಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

6-fusion

UV Fusion: ಇಂಡಿ ಪಂಪ್‌ ಮಟ..

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

Money Laundering Case: ಮತ್ತೆ ನಾಲ್ವರನ್ನು ಬಂಧಿಸಿದ ಇಡಿ, ಬಂಧಿತರ ಸಂಖ್ಯೆ 8 ಕ್ಕೆ ಏರಿಕೆ

5-fusion

UV Fusion: ನಾಟಕದ ಜೀವನಕ್ಕೆ ಯಾತಕ್ಕಾಗಿ ದೇವರ ಹೊಣೆ

4-uv-fusion

Women: ಜಗದೆಲ್ಲ ನೋವನುಂಡರೂ ಹಿತ ಬಯಸುವವಳು ಮಾತೇ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.