ಪ್ರೇಮ್ ಸಸಿ ಹಂಚಲು ಕಾರಣ ಯಾರು ಗೊತ್ತಾ?
Team Udayavani, Oct 23, 2017, 10:57 AM IST
ನಿರ್ದೇಶಕ ಪ್ರೇಮ್ ಈ ಬಾರಿ ದೀಪಾವಳಿಯನ್ನು ಸಸಿ ಹಂಚುವ ಮೂಲಕ ಆಚರಿಸಿಕೊಂಡಿದ್ದಾರೆ. ಶಿವರಾಜಕುಮಾರ್ ಹಾಗೂ “ದಿ ವಿಲನ್’ ತಂಡದೊಂದಿಗೆ ಸೇರಿ ಸಸಿ ಹಂಚಿ ಸಂಭ್ರಮಿಸಿದ್ದರು. ಅಷ್ಟಕ್ಕೂ ಪ್ರೇಮ್ ಈ ಬಾರಿ ಸಸಿ ಹಂಚಲು ಕಾರಣವೇನು ಎಂದರೆ ಮಗ ಸೂರ್ಯ ಎಂಬ ಉತ್ತರ ಬರುತ್ತದೆ. ಹೌದು, ಪ್ರೇಮ್ ಪಟಾಕಿ ಬದಲು ಸಸಿ ಹಂಚಲು ಪ್ರೇರಣೆ ಅವರ ಮಗ ಸೂರ್ಯನಂತೆ.
“ನನ್ನ ಮಗ ಸೂರ್ಯನಿಗೆ ಪಟಾಕಿ ತಂದುಕೊಡ್ಲಾ ಎಂದು ಕೇಳಿದೆ. ಆದರೆ, ಆತ “ಬೇಡ ಡ್ಯಾಡಿ, ಪಟಾಕಿಯಿಂದ ಪೊಲ್ಯುಶನ್ ಆಗುತ್ತೆ. ಪಟಾಕಿ ಬದಲು ಏನಾದರೂ ಆಟದ ಸಾಮಾನು ತಂದುಕೊಡು’ ಎಂದ. ಎಂಟು ವರ್ಷದ ಸೂರ್ಯನ ಮಾತು ನಿಜಕ್ಕೂ ನನಗೆ ಪ್ರೇರಣೆಯಾಯಿತು. ಹಾಗಾಗಿ, ನಮ್ಮ ತಂಡಕ್ಕೂ ಪಟಾಕಿ ಬದಲು ಸಸಿ ಹಂಚಿದೆ’ ಎಂದು ತಾವು ದೀಪಾವಳಿ ಆಚರಿಸಿದ ಬಗ್ಗೆ ಹೇಳುತ್ತಾರೆ.
ಇನ್ನು, ಪ್ರೇಮ್ ನಿರ್ದೇಶನದ “ದಿ ವಿಲನ್’ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ. ಚೇಸಿಂಗ್ ಸೇರಿದಂತೆ ಇತರ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು, ಶಿವರಾಜಕುಮಾರ್ ಚಿತ್ರೀಕರಣದಲ್ಲಿದ್ದಾರೆ. ಆರಂಭದಲ್ಲಿ “ದಿ ವಿಲನ್’ ಚಿತ್ರೀಕರಣ ಲೇಹ್, ಲಡಾಕ್ನಲ್ಲೂ ನಡೆಯಲಿದೆ ಎಂದು ಹೇಳಲಾಗಿತ್ತು. ಪ್ರೇಮ್ ಕೂಡಾ ಅಲ್ಲಿ ಚಿತ್ರೀಕರಿಸುವ ಬಗ್ಗೆ ಶೆಡ್ನೂಲ್ ಪ್ಲ್ರಾನ್ ಮಾಡಿಕೊಂಡಿದ್ದರು. ಆದರೆ, ಈಗ ಶೆಡ್ನೂಲ್ನಲ್ಲಿ ಬದಲಾವಣೆಯಾಗಿದ್ದು, ಲೇಹ್ ಲಡಾಕ್ ಅನ್ನು ಕೈ ಬಿಡಲಾಗಿದೆ.
ಲೇಹ್ ಲಡಾಕ್ನಲ್ಲಿ ಚಿತ್ರೀಕರಣವಾಗಬೇಕಿದ್ದ ದೃಶ್ಯಗಳನ್ನು ಪ್ರೇಮ್ ಎಲ್ಲಿ ಚಿತ್ರೀಕರಿಸಲಿದ್ದಾರೆಂದು ನೀವು ಕೇಳಬಹುದು. ಅದಕ್ಕೆ ಉತ್ತರ ಬ್ಯಾಂಕಾಕ್. ಹೌದು, ತಿಂಗಳ ಹಿಂದೆ ಸುದೀಪ್-ಶಿವಣ್ಣ ಬ್ಯಾಂಕಾಕ್ನಲ್ಲಿ ಚಿತ್ರೀಕರಣದಲ್ಲಿದ್ದರು. ಈ ಮೂಲಕ ಪ್ರೇಮ್ ಲೇಹ್ ಲಡಾಕ್ ದೃಶ್ಯಗಳನ್ನು ಬ್ಯಾಂಕಾಕ್ನಲ್ಲೇ ಚಿತ್ರೀಕರಣ ಮಾಡಿದ್ದಾರೆ. ಇನ್ನೂ ಸಾಕಷ್ಟು ದಿನಗಳ ಚಿತ್ರೀಕರಣ ಬಾಕಿ ಇದ್ದು, ಡಿಸೆಂಬರ್ನಲ್ಲಿ ಚಿತ್ರೀಕರಣ ಮುಗಿಯುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್ ರೋಲ್ ನಲ್ಲಿ ಫಾಫಾ
ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ
Malpe: ಶ್ರೀ ವಡಭಾಂಡ ಬಲರಾಮ ದೇವಸ್ಥಾನ: ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಸಂಪನ್ನ