ಚಿತ್ರೀಕರಣ ಪೂರ್ಣಗೊಳಿಸಿದ ಯುವರತ್ನ
Team Udayavani, Oct 14, 2020, 12:45 PM IST
ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ “ಯುವರತ್ನ’ ಚಿತ್ರದ ಚಿತ್ರೀಕರಣ ಸೋಮವಾರ ಮುಕ್ತಾಯವಾಗಿದೆ.
ಇದೇ ಮಾರ್ಚ್ನಲ್ಲಿಕೊರೊನಾ ಲಾಕ್ ಡೌನ್ನಿಂದಾಗಿ ಕೊನೆಯ ಹಂತದ ಚಿತ್ರೀಕರಣವನ್ನು ಅರ್ಧಕ್ಕೆ ನಿಲ್ಲಿಸಿದ್ದ ಚಿತ್ರತಂಡ, ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ಮತ್ತೆ ಚಿತ್ರೀಕರಣ ಕಾರ್ಯಕ್ಕೆ ಚಾಲನೆ ನೀಡಿತ್ತು. ಇದೀಗ “ಯುವರತ್ನ’ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಕ್ತಾಯವಾಗಿದ್ದು, ಚಿತ್ರದ ಇಂಟ್ರಡಕ್ಷನ್ ಹಾಡನ್ನು ಸೆರೆ ಹಿಡಿದು ಚಿತ್ರತಂಡ ಕುಂಬಳ ಕಾಯಿ ಹೊಡೆದಿದೆ.ಕೊನೆಯ ದಿನದ ಚಿತ್ರೀಕರಣದಲ್ಲಿ ನಟ ಪುನೀತ್ ರಾಜಕುಮಾರ್, ನಾಯಕಿ ಸಯೇಶಾ ಸೈಗಲ್ ಭಾಗಿಯಾಗಿದ್ದರು.
ಈ ವೇಳೆ ಚಿತ್ರದ ನಿರ್ದೇಶಕ ಸಂತೋಷ್ ಆನಂದರಾಮ್, ನಿರ್ಮಾಪಕ ವಿಜಯ್ ಕಿರಗಂದೂರ್,ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸೇರಿದಂತೆ ಚಿತ್ರದಕಲಾವಿದರು, ತಂತ್ರಜ್ಞರು ಹಾಜರಿದ್ದರು. ಇನ್ನು “ಯುವರತ್ನ’ ಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿರುವ ಬಗ್ಗೆ ನಿರ್ದೇಶಕ ಸಂತೋಷ್ ಆನಂದರಾಮ್, ತಮ್ಮ ಟ್ವಿಟ್ಟರ್ನಲ್ಲಿಸಂತಸವನ್ನು ಹಂಚಿಕೊಂಡಿದ್ದು, “ಯುವರತ್ನ’ ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಲು ಸಹಕಾರಿಸಿದ ಚಿತ್ರದಕಲಾವಿದರು, ನಿರ್ಮಾಪಕರು, ತಂತ್ರಜ್ಞರು ಮತ್ತು ತಂಡಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಸದ್ಯ “ಯುವರತ್ನ’ ಚಿತ್ರದ ಮಾತಿನ ಬಾಗ, ಬಾಕಿಯಿದ್ದ ಹಾಡುಗಳ ಚಿತ್ರೀಕರಣ ಎಲ್ಲವೂ ಪೂರ್ಣಗೊಂಡಿರುವುದ ರಿಂದ, ಚಿತ್ರತಂಡ ಭರದಿಂದ ಪೋಸ್ಟ್ ಪೊ›ಡಕ್ಷನ್ ಕೆಲಸಗಳಿಗೆ ಚಾಲನೆಕೊಟ್ಟಿದೆ. ಚಿತ್ರರಂಗದಮೂಲಗಳ ಪ್ರಕಾರ ಇದೇ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ “ಯುವರತ್ನ’ ತೆರೆಗೆ ಬರುವ ನಿರೀಕ್ಷೆ ಇದೆ.