ಬಾಲ್ಯದಿಂದಲೇ “ಈ” ಕಾಯಿಲೆಯಿಂದ ಬಳಲುತ್ತಿದ್ದಾರಂತೆ ಮಗಧೀರ ಬೆಡಗಿ ಕಾಜಲ್!
Team Udayavani, Feb 10, 2021, 3:25 PM IST
ಟಾಲಿವುಡ್, ಕಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ತಮ್ಮದೆ ಛಾಪು ಮೂಡಿಸಿರುವ ನಟಿ ಕಾಜಲ್ ಅಗರವಾಲ್ ತಮ್ಮ ಆರೋಗ್ಯದ ಕುರಿತು ವಿಷಯವೊಂದನ್ನು ಹೊರ ಹಾಕಿದ್ದಾರೆ.
ಇನ್ ಸ್ಟಾಗ್ರಾಂ ನಲ್ಲಿ ತಾವು ಬಾಲ್ಯದಿಂದ ಬಳಲುತ್ತಿರುವ ಕಾಯಿಲೆಯೊಂದರ ಬಗ್ಗೆ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಕಾಜಲ್ ಗೆ ಕಾಡುತ್ತಿರುವ ಆ ಕಾಯಿಲೆ ಏನು ಗೊತ್ತಾ ?
ಮಗಧೀರ ಚಿತ್ರದ ಬೆಡಗಿ ಕಾಜಲ್, ತಾನು 5 ವರ್ಷದವಳಾಗಿದ್ದಾಗಿನಿಂದ ಅಸ್ತಮಾ ಕಾಯಿಲೆಗೆ ತುತ್ತಾಗಿರುವುದಾಗಿ ಹೇಳಿಕೊಂಡಿದ್ದಾರೆ. ಅದರಿಂದ ಅವರು ಅನುಭವಿಸಿರುವ ಕಷ್ಟವನ್ನೂ ಹೇಳಿಕೊಂಡಿರುವ ಈ ನಟಿ, ಏನೂ ಅರಿಯದ ವಯಸ್ಸಿನಲ್ಲಿಯೇ ಅಸ್ತಮಾ ಕಾಣಿಸಿಕೊಂಡಿತು. ಇದರಿಂದ ಚಾಕೋಲೆಟ್ ಹಾಗೂ ಡೈರಿ ಆಹಾರ ಪದಾರ್ಥಗಳಿಂದ ದೂರವಾಗಬೇಕಾಯಿತು. ಸಣ್ಣ ಮಕ್ಕಳಿಗೆ ಈ ಆಹಾರವೆಂದರೆ ತುಂಬ ಇಷ್ಟ. ಆದರೆ, ನಾನು ಅವುಗಳಿಂದ ವಂಚಿತಳಾದೆ ಎಂದಿದ್ದಾರೆ.
ಚಳಿಗಾಲ ಹಾಗೂ ದೂರದ ಪ್ರಯಾಣ ನಂಗೆ ಆಗಿ ಬರುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ತುಂಬಾ ತೊಂದರೆ ಅನುಭವಿಸಿದ್ದೇನೆ. ಯಾವಾಗ ಇನ್ ಹೇಲರ್ ಬಳಸಲು ಶುರು ಮಾಡಿದೆ, ಅವಾಗಿನಿಂದ ಅರಾಮ್ ಇದ್ದೇನೆ ಎಂದಿದ್ದಾರೆ.
ಇದನ್ನೂ ಓದಿ :ರಾಮನ ಪೋಷಾಕು, ಸೀತೆ ಜತೆ ವನವಾಸ….ರಾಮಾಯಣಕ್ಕೆ ಟಾಲಿವುಡ್ ಪ್ರಿನ್ಸ್ ಗೆ ಬಿಗ್ ಆಫರ್
ಅಸ್ತಮಾ ಬಗ್ಗೆ ಮುಕ್ತವಾಗಿ ಮಾತಾಡಿರುವ ಕಾಜಲ್, ಈ ರೋಗದ ಕುರಿತು ಜಾಗೃತಿ ಕೂಡ ಮೂಡಿಸುತ್ತಿದ್ದಾರೆ. ನಮ್ಮಲ್ಲಿ ಸಾಕಷ್ಟು ಜನ ಇನ್ ಹೇಲರ್ ಬಳಸಲು ಸಂಕೋಚ ಪಡುತ್ತಾರೆ. ಅದು ತಪ್ಪು. ನಮ್ಮ ಆರೋಗ್ಯದ ಬಗ್ಗೆ ನಾವೇ ಗಮನ ಕೊಡದಿದ್ದರೆ ಹೇಗೆ ? ನಾನೂ ಬಾಲ್ಯದಿಂದಲೇ ಇನ್ ಹೇಲರ್ ಬಳಸುತ್ತಿದ್ದೇನೆ. ಎಲ್ಲಿಗಾದರೂ ಹೋಗುವಾಗಿ ಅದನ್ನು ತೆಗೆದುಕೊಂಡು ಹೋಗುತ್ತೇನೆ. ನಿಸ್ಸಂಕೋಚವಾಗಿ ಇನ್ ಹೇಲರ್ ಬಳಸುತ್ತೇನೆ. ನೀವು ಕೂಡ ಯಾವು ಸಂಕೋಚ, ಮುಜುಗರ ಇಲ್ಲದೆ ಇನ್ ಹೇಲರ್ ಬಳಸಿ, ಆರೋಗ್ಯವಾಗಿರಿ ಎಂದು ಕಿವಿ ಮಾತು ಹೇಳಿದ್ದಾರೆ.
ಇನ್ನು ಸದ್ಯ ಮೆಗಾಸ್ಟಾರ್ ಚಿರಂಜೀವಿ ನಟಿಸುತ್ತಿರುವ ‘ಆಚಾರ್ಯ’ ಸಿನಿಮಾ ಹಾಗೂ ಕಮಲ್ ಹಾಸನ್ ಅವರ ‘ಇಂಡಿಯಾ 2’ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಕಾಜಲ್ ನಟಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ