ವಲಸಿಗರಿಗೆ ನೆರವಾದ ಅಮಿತಾಬ್ ಬಚ್ಚನ್:ಮುಂಬೈನಿಂದ ಉತ್ತರಪ್ರದೇಶಕ್ಕೆ 4ವಿಶೇಷ ವಿಮಾನ ವ್ಯವಸ್ಥೆ
Team Udayavani, Jun 11, 2020, 8:14 AM IST
ಮುಂಬೈ: ಮುಂಬೈಯಿಂದ ಸುಮಾರು 700 ವಲಸಿಗರನ್ನು ಉತ್ತರ ಪ್ರದೇಶದ ಅವರ ಮನೆಗಳಿಗೆ ಕಳುಹಿಸಲು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಬುಧವಾರ ನಾಲ್ಕು ವಿಶೇಷ ವಿಮಾನಗಳ ವ್ಯವಸ್ಥೆ ಮಾಡಿದ್ದಾರೆ.
ಈ 4 ವಿಮಾನಗಳ ಜೊತೆ ಮತ್ತೆ 2 ವಿಮಾನಗಳು ಗುರುವಾರ ಹೊರಡಲಿವೆ ಎಂದು ಬಚ್ಚನ್ ಅವರ ಆಪ್ತ ಮೂಲಗಳು ತಿಳಿಸಿವೆ. ಈ ಮೊದಲು ವಲಸೆ ಕಾರ್ಮಿಕರನ್ನು ರೈಲು ಮೂಲಕ ಅವರವರ ಊರಿಗೆ ಕಳುಹಿಸಲು ನಿರ್ಧರಿಸಲಾಗಿತ್ತು. ಅದರೇ ಅನಿವಾರ್ಯ ಕಾರಣಕ್ಕೆ ಕಾರ್ಯರೂಪಕ್ಕೆ ಬಂದಿರಲಿಲ್ಲ.
ಅಮಿತಾಬ್ ಬಚ್ಚನ್ ಅವರ ನಿರ್ದೇಶನದ ಮೇರೆಗೆ ಅವರ ನಿಕಟ ಸಹಾಯಕ ರಾಜೇಶ್ ಯಾದವ್ ಅವರು ಈ ವಿಮಾನಗಳನ್ನು ಆಯೋಜಿಸಿದ್ದಾರೆ. ಮುಂಬೈಯಿಂದ ಬುಧವಾರ ಬೆಳಿಗ್ಗೆ ಯುಪಿ ಯ ಅಲಹಾಬಾದ್, ಗೋರಖ್ಪುರ ಮತ್ತು ವಾರಣಾಸಿಗೆ ವಿಮಾನಗಳು ತಲಾ 180 ಪ್ರಯಾಣಿಕರೊಂದಿಗೆ ಹೊರಟವು ಎಂದು ಮಾಧ್ಯಮಗಳು ವರದಿ ಮಾಡಿದೆ.
ಯಾದವ್ ಅವರು ಇತ್ತೀಚಿಗಷ್ಟೆ ಅಮಿತಾಬ್ ಅವರ ಸಲಹೆ ಮೇರೆಗೆ, 300 ವಲಸಿಗರಿಗೆ ಲಕ್ನೋ, ಅಲಹಾಬಾದ್, ಭಾದೋಹಿ ಮತ್ತು ಉತ್ತರ ಪ್ರದೇಶದ ಇತರ ಸ್ಥಳಗಳಲ್ಲಿ ತಮ್ಮ ಗ್ರಾಮಗಳನ್ನು ತಲುಪಲು 10 ಬಸ್ಸುಗಳ ವ್ಯವಸ್ಥೆ ಮಾಡಿದ್ದರು.
‘ನಾನು ಇದಕ್ಕೂ ಮೊದಲು ವಿಮಾನದಲ್ಲಿ ಪ್ರಯಾಣಿಸಿರಲಿಲ್ಲ, ಆದರೆ ಬಚ್ಚನ್ ಅವರು ನನಗೆ ಅದನ್ನು ಸಾಧ್ಯವಾಗಿಸಿದರು. ಅದೂ ಸಹ ನಾನು ಮುಂಬೈಯಲ್ಲಿ ಸಿಲುಕಿಕೊಂಡಿದ್ದ ಸಮಯದಲ್ಲಿ. ನಾನು ಎಂಟು ತಿಂಗಳ ನಂತರ ಮನೆಗೆ ಮರಳುತ್ತಿದ್ದೇನೆ” ಎಂದು ಟೈಲರಿಂಗ್ ಕೆಲಸ ಮಾಡುತ್ತಿದ್ದ ಹಸನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ