ಮಗನಿಗೆ “ರಾಜಮೌಳಿ” ಎಂದೇ ಹೆಸರಿಟ್ಟ ಬಾಹುಬಲಿಯ ಕಾಲಕೇಯ…ಅದಕ್ಕೆ ಕಾರಣವೇನು?
ಎಸ್ ಎಸ್ ರಾಜಮೌಳಿ ಸಿನಿಮಾದ ಆಡಿಷನ್ ನಡೆಸುತ್ತಿದ್ದ ಸ್ಥಳಕ್ಕೆ ಗೆಳೆಯನೊಬ್ಬ ಪ್ರಭಾಕರ್ ಅವರನ್ನು ಕರೆದೊಯ್ದಿದ್ದ.
Team Udayavani, May 17, 2020, 1:34 PM IST
ಆಂಧ್ರಪ್ರದೇಶ: ಎಸ್ ಎಸ್ ರಾಜಮೌಳಿ ನಿರ್ದೇಶನದ ಸೂಪರ್ ಹಿಟ್ ಸಿನಿಮಾ ಬಾಹುಬಲಿಯಲ್ಲಿ ಕಾಲಕೇಯ ಪಾತ್ರ ನಿರ್ವಹಿಸಿದ್ದ ನಟ ಪ್ರಭಾಕರ್ ಅವರು ತಮ್ಮ ಮಗನಿಗೆ ರಾಜಮೌಳಿ ಎಂದು ಹೆಸರಿಟ್ಟಿದ್ದಾರಂತೆ. ಮಗನಿಗೆ ರಾಜಮೌಳಿ ಎಂದು ಹೆಸರು ಇಡಲು ಕಾರಣವೇನು ಎಂಬುದನ್ನು ಪ್ರಭಾಕರ್ ಬಹಿರಂಗಪಡಿಸಿದ್ದಾರೆ.
ಪತ್ರಕರ್ತರ ಜತೆ ಸಂವಹನ ನಡೆಸಿದ್ದ ಪ್ರಭಾಕರ್ ರಾಜಮೌಳಿ ಕುರಿತಾಗಿ ಒಂದಷ್ಟು ವಿಚಾರ ಹಂಚಿಕೊಂಡಿದ್ದರು. ಮೆಹಬೂಬ್ ನಗರ್ ಜಿಲ್ಲೆಯ ಕೋಡಂಗಲ್ ನಿವಾಸಿಯಾಗಿದ್ದ ಪ್ರಭಾಕರ್ ಗೆ ತಾನೊಬ್ಬ ನಟನಾಗಬೇಕೆಂದು ಯಾವತ್ತೂ ಆಲೋಚಿಸಿರಲಿಲ್ಲವಂತೆ. ಆದರೆ ಕ್ರಿಕೆಟ್ ಅಂದ್ರೆ ಪಂಚಪ್ರಾಣವಂತೆ. ನೂರಾರು ಕ್ರಿಕೆಟ್ ಪಂದ್ಯದಲ್ಲಿ ಪ್ರಭಾಕರ್ ಆಡಿದ್ದರಂತೆ. ಒಮ್ಮೆ ಹೈದರಾಬಾದ್ ಗೆ ಬಂದಿದ್ದಾಗ, ಎಸ್ ಎಸ್ ರಾಜಮೌಳಿ ಅವರು ಮಗಧೀರ ಸಿನಿಮಾಕ್ಕೆ ನಟರನ್ನು ಹುಡುಕುತ್ತಿದ್ದಾರೆ ಎಂಬ ವಿಷಯ ಯಾರೋ ತಿಳಿಸಿದ್ದರಂತೆ.
ಎಸ್ ಎಸ್ ರಾಜಮೌಳಿ ಸಿನಿಮಾದ ಆಡಿಷನ್ ನಡೆಸುತ್ತಿದ್ದ ಸ್ಥಳಕ್ಕೆ ಗೆಳೆಯನೊಬ್ಬ ಪ್ರಭಾಕರ್ ಅವರನ್ನು ಕರೆದೊಯ್ದಿದ್ದ. ಆದರೆ ಪ್ರಭಾಕರ್ ನನ್ನು ನೋಡಿ ರಾಜಮೌಳಿ ಏನೂ ಹೇಳಿಲ್ಲವಂತೆ. ಆದರೆ ಒಂದು ದಿನ ರಾಜಮೌಳಿ ಸಹಾಯಕರೊಬ್ಬರು ಕರೆ ಮಾಡಿ ಪ್ರಭಾಕರ್ ನನ್ನು ರಾಜಮೌಳಿ ಮನೆಗೆ ಕರೆದೊಯ್ದಿದ್ದರಂತೆ! ಆ ವೇಳೆ ಮರ್ಯಾದ ರಾಮಣ್ಣ ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ತಿಳಿಸಿದ್ದರಂತೆ.
ಆಗ ಕಾಲಕೇಯ(ಪ್ರಭಾಕರ್) ನನಗೆ ನಟನೆ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರಂತೆ, ನಂತರ ದೇವ್ ದಾಸ್ ಕನಕಾಲಾಕ್ಕೆ ಅಭಿನಯ ಕಲಿಯಲು ಕಳುಹಿಸಿಕೊಟ್ಟಿದ್ದರಂತೆ. ಹೀಗೆ ರಾಜಮೌಳಿಗಾರು ನನಗೆ ಇಂದು ಹೊಸ ಬದುಕು ಕಟ್ಟಿಕೊಟ್ಟಿದ್ದಾರೆ. ನಂತರ ನನಗೆ ಬಾಹುಬಲಿ ಸಿನಿಮಾದಲ್ಲಿಯೂ ಕಾಲಕೇಯ ಪಾತ್ರ ನೀಡುವ ಮೂಲಕ ನನಗೆ ಮತ್ತೊಂದು ಅವಕಾಶ ಕೊಟ್ಟರು. ನನ್ನ ಬದುಕಿನ ದಿಕ್ಕು ಬದಲಾಗಲು ರಾಜಮೌಳಿಗಾರು ಕಾರಣ…ಆ ಕಾರಣಕ್ಕಾಗಿಯೇ ಮಗನಿಗೆ ಶ್ರೀರಾಮ್ ರಾಜಮೌಳಿ ಎಂದು ಹೆಸರಿಟ್ಟಿರುವುದಾಗಿ ವಿವರಣೆ ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು
Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್
ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ