ದಕ್ಷಿಣ ಭಾರತದಿಂದ ಬಂದು ಬಾಲಿವುಡ್ ನಲ್ಲಿ ಮಿಂಚು ಹರಿಸಿದ್ದ ಎಸ್ ಪಿಬಿ
Team Udayavani, Sep 26, 2020, 12:20 PM IST
ಸಾಮಾನ್ಯವಾಗಿ ಒಂದು ಮಾತಿದೆ, ಅದೇನೆಂದರೆ ದಕ್ಷಿಣ ಭಾರತದಿಂದ ಬಾಲಿವುಡ್ಗೆ ಯಾರೇ ಹೋದರೂ, ಬಾಲಿವುಡ್ ಮಂದಿ ಅವರನ್ನು ಬೇಗನೇ ಒಳಸೇರಿಸಿಕೊಳ್ಳುವುದಿಲ್ಲ ಎಂದು. ಅದಕ್ಕೆ ಉದಾಹರಣೆಯಾಗಿ ಒಂದಷ್ಟು ಮಂದಿ ಬಾಲಿವುಡ್ಗೆ ಹೋಗಿ, ಅಲ್ಲಿ ಏನೂ ಸಾಧನೆ ಮಾಡಲಾಗದೇ ವಾಪಸ್ ಬಂದಿರೋದು.
ಆದರೆ, ಎಸ್ಪಿಬಿ ವಿಷಯದಲ್ಲಿ ಇದು ಸುಳ್ಳಾಗಿದೆ. ಎಸ್ಪಿಬಿ ಬಾಲಿವುಡ್ನಲ್ಲೂ ತಮ್ಮದೇ ಹಾದಿಯನ್ನು ಮಾಡುತ್ತಾ ಬೇಡಿಕೆಯ ಗಾಯಕರಾದವರು. ಬಾಲಿವುಡ್ನ ಮಹಮ್ಮದ್ ರಫಿ, ಕಿಶೋರ್ ಕುಮಾರ್ರಂತಹ ದಿಗ್ಗಜ ಗಾಯಕರನ್ನೇ ನೆಚ್ಚಿಕೊಂಡಿದ್ದ ಬಾಲಿವುಡ್ ಸಿನೆಮಾ ಮಂದಿಗೆ ಎಸ್ಪಿಬಿ ತಮ್ಮ ಕಂಠಸಿರಿಯ ಮೂಲಕ ರಫಿ, ಕಿಶೋರ್ ಅವರು ಇಲ್ಲ ಎಂಬ ಕೊರಗನ್ನು ನೀಗಿಸಿದರು. ಬಾಲಿವುಡ್ನ ಖ್ಯಾತ ಸಂಗೀತ ನಿರ್ದೇಶಕರಾದ ಲಕ್ಷ್ಮೀಕಾಂತ್ ಪ್ಯಾರೇ ಲಾಲ್ ಅವರ ಸಂಗೀತ ನಿರ್ದೇಶನದ “ಏಕ್ ದೂಜೇ ಕೇಲಿಯೇ’ ಚಿತ್ರದ ಮೂಲಕ ಬಾಲಿವುಡ್ಗೆ ಪಾದಾರ್ಪಣೆ ಮಾಡಿದ 2014ರವರೆಗೂ ಬೇಡಿಕೆಯ ಗಾಯಕರಾಗಿಯೇ ಇದ್ದರು.
1981ರಿಂದ ಹಿಂದಿಯಲ್ಲಿ ಬಂದ ಬಹುತೇಕ ಚಿತ್ರಗಳಲ್ಲಿ ಎಸ್ಪಿಬಿ ಅವರ ಧ್ವನಿ ಇದೆ. ಆರಂಭದಲ್ಲಿ ಎಸ್ಪಿಬಿ ಹಾಡಲು ಹೋಗಿದ್ದಾಗ ಸಂಗೀತ ನಿರ್ದೇಶಕ ಲಕ್ಷ್ಮೀಕಾಂತ್, “ಈ ಮದ್ರಾಸಿ ನನ್ನ ಹಾಡುಗಳಿಗೆ ನ್ಯಾಯ ಕೊಡಬಲ್ಲನೇ’ ಎಂದು ಕೇಳಿದರಂತೆ. ಆಗ ಆ ಚಿತ್ರದ ನಿರ್ದೇಶಕ ಕೆ. ಬಾಲಚಂದರ್, ಚಿತ್ರದ ಕೊನೆಯವರೆಗೂ ಪ್ರಮುಖ ಪಾತ್ರವು ಉತ್ತಮ ಹಿಂದಿ ಮಾತನಾಡಲು ಸಾಧ್ಯವಿಲ್ಲ, ಹಾಡಿನಲ್ಲಿ ಸ್ವಲ್ಪ ದಕ್ಷಿಣದ ಶೈಲಿ ಕಂಡು ಬಂದರೂ ಸಮಸ್ಯೆ ಇಲ್ಲ ಎಂದು ಹೇಳಿ ಹಾಡಿಸಿದರಂತೆ. ಆ ಚಿತ್ರದ “ತೇರೇ ಮೇರೆ ಬೀಚ್’, “ಹಮ್ ತುಮ್ ದೋನೋ ಜಬ್ ಮೀಲಿಂಗೆ’, “ಮೇರೆ ಜೀವನ್ ಸಾಥಿ’, “ಹಮ್ ಬನೇ ತುಮ್ ಬನೇ’ ಹಾಡುಗಳನ್ನು ಹಾಡಿದ್ದಾರೆ.
ಅಲ್ಲಿಂದ ಆರಂಭವಾದ ಅವರ ಬಾಲಿವುಡ್ ಜರ್ನಿ ಯಶಸ್ವಿಯಾಗಿ ಮುಂದುವರಿದುಕೊಂಡು ಬಂತು. “ಝರಾ ಸೇ ಜಿಂದಾಗಿ’, “ಮೈ ನೇ ಪ್ಯಾರ್ ಕೀಯಾ’, “ಸಾಜನ್’, “ರೋಜಾ’, “ಹಮ್ ಆಪ್ಕೆ ಹೈ ಕೌನ್’, “ಹಿಂದೂಸ್ತಾನಿ’, “ಲವ್ ಬರ್ಡ್ಸ್’, “ಮಿಸ್ಟರ್ ರೋಮಿಯೋ’, “ಕಭಿ ನಾ ಕಭಿ’: “ತುಹಿ ಮೇರಾ ದಿಲ್’ ಸೇರಿದಂತೆ ಹಲವು ಹಿಂದಿ ಸಿನೆಮಾಗಳಿಗೆ ಎಸ್ಪಿಬಿ ಹಾಡಿದ್ದಾರೆ.
ಎಸ್ಪಿಬಿ ಬಾಲಿವುಡ್ನಲ್ಲಿ ಎಷ್ಟು ಬಿಝಿಯಾಗಿದ್ದರೆಂದರೆ ದಿನದಲ್ಲಿ 15 ಅಥವಾ 16 ಹಿಂದಿ ಹಾಡುಗಳನ್ನು ರೆಕಾರ್ಡ್ ಮಾಡುವ ಮಟ್ಟಕ್ಕೆ ಬಿಝಿಯಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ
Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್ರಾಜ್ ಮೌರ್ಯ
Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ
Gujarat Lok Sabha Constituency: ಗುಜರಾತ್ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?
Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ