ನಿರ್ದೇಶಕಿ ಕಲ್ಪನಾ ಲಾಜ್ಮಿ ICUನಲ್ಲಿ :ನಟ,ನಟಿಯರ ನೆರವು
Team Udayavani, Nov 7, 2017, 12:00 PM IST
ಮುಂಬಯಿ: ಕಿಡ್ನಿ ಕ್ಯಾನ್ಸರ್ನಿಂದ ಬಳಲುತ್ತಿರುವ ಖ್ಯಾತ ನಿರ್ದೇ ಶಕಿ ಕಲ್ಪನಾ ಲಾಜ್ಮಿ ಅವರ ಪರಿಸ್ಥಿತಿ ಇಂದು ಉಲ್ಬಣಿಸಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರುಡಾಲಿ, ಧರ್ಮಿಯಾನ್, ದಮನ್ ಮುಂತಾದ ಹೊಸ ಅಲೆಯ ಚಿತ್ರಗಳ ಮೂಲಕ ಗಮನ ಸೆಳಎದಿರುವ 61ರ ಹರೆಯದ ಲಾಜ್ಮಿ ರೋಗದಿಂದಾಗಿ ತುಂಬ ನಿಶ್ಶಕ್ತರಾಗಿದ್ದಾರೆ.
ಇಂದು ಬೆಳಗ್ಗೆ ಎದೆ ಬಿಡಿತ ಕುಸಿಯತೊಡಗಿತು. ಹೀಗಾಗಿ ತಕ್ಷಣ ಆಸ್ಪತ್ರೆಗೆ ಸೇರಬೇಕಾಯಿತು. ಎರಡೂ ಕಿಡ್ನಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತನ್ನುನ್ನು ಭೇಟಿಯಾದ ವರದಿಗಾರರ ಬಳಿ ಹೇಳಿಕೊಂಡಿದ್ದಾರೆ.
ನಿನ್ನೆಯಷ್ಟೇ ಅವರ ಸಂಗಾತಿ ಭೂಪೇನ್ ಹಜಾರಿಕಾ ಅವರು ಪುಣ್ಯತಿಥಿಯಾಗಿತ್ತು. ಅನಾರೋಗ್ಯದ ನಡುವೆಯೂ ಕಲ್ಪನಾ ವಾಶಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಆ ಬಳಿಕ ನಿಳಶ್ಶಕ್ತಿ ಹೆಚ್ಚಾಯಿತು. ಹೀಗಾಗಿ ಐಸಿಯುಗೆ ದಾಖಲಿಸಬೇಕಾಯಿತು. ಒಂದೆರಡು ದಿನ ಆಸ್ಪತ್ರೆಯಲ್ಲಿರಬೇಕು ಎಂದು ವೈದ್ಯರು ಹೇಳಿದ್ದಾರೆ.
ಕಲ್ಪನಾ ಲಾಜ್ಮಿ ಹಾಸಿಗೆ ಹಿಡಿದು ಎರಡು ವರ್ಷವಾಗುತ್ತಾ ಬಂತು. ಆದರೆ ಕಳೆದ ಕೆಲ ಸಮಯದಿಂದ ತುಸು ಚೇತರಿಸಿಕೊಂಡಿದ್ದರು. ಇನ್ನೂ ಒಂದೂವರೆ ವರ್ಷದಲ್ಲಿ ಎದ್ದು ನಡೆದಾಡಲು ಸಾಧ್ಯವಾಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಪ್ರತಿವಾರ ಡಯಾಲಿಸಿಸ್ಗೆ ಒಳಪಡಬೇಕಾಗುತ್ತದೆ. ವೈದ್ಯಕೀಯ ಖರ್ಚುವೆಚ್ಚಗಳು ವಿಪರೀತವಾಗಿದ್ದು, ಇದನ್ನು ನಿಭಾಯಿಸಲು ಬಾಲಿವುಡ್ ನೀಡುತ್ತಿರುವ ನೆರವಿಗೆ ಧನ್ಯವಾದ ಹೇಳಿದ್ದಾರೆ. ಅಮೀರ್ ಖಾನ್, ಇಂಡಿಯನ್ ಫಿಲ್ಮ್ ಆ್ಯಂಡ್ ಟೆಲಿವಿಶನ್ ಡೈರೆಕ್ಟರ್ ಅಸೋಸಿಯೇಶನ್, ರೋಹಿತ್ ಶೆಟ್ಟಿ, ಸಲ್ಮಾನ್ ಖಾನ್, ಕರಣ್ ಜೋಹರ್, ಅಲಿಯಾ ಭಟ್, ಸೋನಿ ರಜಾªನ್, ನೀನಾ ಗುಪ್ತ ಹೀಗೆ ಹಲವು ಮಂದಿ ಸಹಾಯ ಮಾಡಿದ್ದಾರೆ. ಪ್ರತಿ ವಾರ ಡಯಾಲಿಸಿಸ್ ಮಾಡಿಕೊಳ್ಳುವುದು ಆರ್ಥಿಕವಾಗಿ ದೊಡ್ಡ ಹೊರೆಯಾಗುತ್ತಿದೆ. ಜೀವನಮಾನವಿಡೀ ಇದನ್ನು ಮಾಡಿಕೊಂಡಿರಬೇಕು ಎಂದು ಕಲ್ಪನಾ ಲಾಜ್ಮಿ ತನ್ನ ಕಷ್ಟವನ್ನು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!
Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?