ಮಂಚಕ್ಕೆ ಕರೆದಿದ್ದನಂತೆ ಆ ನಿರ್ದೇಶಕ : ಕರಾಳ ಅನುಭವ ಬಿಚ್ಚಿಟ್ಟ ನಟಿ
Team Udayavani, May 29, 2021, 2:53 PM IST
ಮುಂಬೈ: ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಹಿಂದಿಯ ಕಿರುತೆರೆಯ ಖ್ಯಾತ ನಟಿ ಕಿಶ್ವರ್ ಮರ್ಚೆಂಟ್ , ತಮ್ಮ ವೃತ್ತಿ ಜೀವನದಲ್ಲಿ ಎದುರಿಸಿದ ಕರಾಳ ಅನುಭವವನ್ನು ರಿವೀಲ್ ಮಾಡಿದ್ದಾರೆ.
ಅವಕಾಶ ಬೇಕೆಂದರೆ ನಟ-ನಿರ್ದೇಶಕರ ಜೊತೆ ಹಾಸಿಗೆ ಹಂಚಿಕೊಳ್ಳಬೇಕು ಎನ್ನುವ ಅನಿಷ್ಠ ಪದ್ಧತಿ ಚಿತ್ರರಂಗದಲ್ಲಿ ಇದೆ ಎಂದು ಕಿಶ್ವರ್ ಹೇಳಿಕೊಂಡಿದ್ದಾಳೆ. ಸ್ವತಃ ತಾವು ಎದುರಿಸಿದ ಪ್ರಸಂಗವೊಂದನ್ನುವ ಅವರು ಬಿಚ್ಚಿಟ್ಟಿದ್ದಾರೆ.
‘ಚಿತ್ರವೊಂದರ ಕುರಿತು ಮಾತುಕತೆಗೆ ತೆರಳಿದ್ದಾಗ ಕಾಸ್ಟಿಂಗ್ ಕೌಚ್ ಅನುಭವ ನನಗೂ ಆಯ್ತು. ಅವಕಾಶ ಬೇಕು ಅಂದ್ರೆ ಹೀರೋ ಜೊತೆ ಮಂಚ ಏರಬೇಕು ಅಂತ ನಿರ್ಮಾಪಕರು ನೇರವಾಗಿ ಹೇಳಿದರು. ನಾನು ಅವಕಾಶವೇ ಬೇಡ ಎಂದು ತಿರಸ್ಕರಿಸಿ ಬಂದೆ” ಎಂದು ಕಿಶ್ವೆರ್ ಅವರು ಹೇಳಿದ್ದಾರೆ. ಈ ಮೀಟಿಂಗ್ ವೇಳೆ ಈ ನಟಿಯ ತಾಯಿ ಕೂಡ ಜೊತೆಗಿದ್ದರಂತೆ.
ಈ ಘಟನೆ ಕುರಿತು ಹೇಳಿರುವ ನಟಿ, ನನಗೆ ಕಾಂಪ್ರಮೈಸ್ ಗೆ ಹೇಳಿದ ನಿರ್ದೇಶಕನಿಗೆ ಬಾಲಿವುಡ್ನಲ್ಲಿ ದೊಡ್ಡ ಹೆಸರು ಇದೆ. ಆ ನಟ ಕೂಡ ಅಷ್ಟೇ ಫೇಮಸ್ ಎಂದಿದ್ದಾರೆ. ಅವರ ಹೆಸರು ಬಹಿರಂಗ ಪಡಿಸಲು ಕಿಶ್ವೆರ್ ಇಚ್ಚಿಸಿಲ್ಲ.
ಇನ್ನು ಕಿಶ್ವರ್ ಅವರು ‘ಶಕ್ತಿಮಾನ್’, ‘ಕುಟುಂಬ್’, ‘ಕಸೌತಿ ಝಿಂದಗಿ ಕೇ’, ‘ಧಡ್ಕನ್’, ‘ಪಿಯಾ ಕಾ ಘರ್’, ‘ಖಯಾಮತ್’, ‘ಕಾವ್ಯಾಂಜಲಿ’, ‘ಗಂಗಾ’ ಮುಂತಾದ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepfake video ವಿರುದ್ಧ ನಟ ರಣ್ವೀರ್ ಸಿಂಗ್ ದೂರು
Ranveer Singh: ಮತಯಾಚನೆಯ ಡೀಪ್ ಫೇಕ್ ವಿಡಿಯೋ ವೈರಲ್; FIR ದಾಖಲಿಸಿದ ನಟ ರಣ್ವೀರ್
Big B: ʼಕಲ್ಕಿʼಗಾಗಿ ʼಅಶ್ವತ್ಥಾಮʼನ ಅವತಾರ ತಾಳಿದ ಬಿಗ್ ಬಿ; ಗಮನ ಸೆಳೆದ ಪಾತ್ರದ ಝಲಕ್
Road mishap: ಭೀಕರ ರಸ್ತೆ ಅಪಘಾತದಲ್ಲಿ ನಟ ಪಂಕಜ್ ತ್ರಿಪಾಠಿ ಬಾವ ಮೃತ್ಯು: ಸಹೋದರಿಗೆ ಗಾಯ
ʼಭಜರಂಗಿ ಭಾಯಿಜಾನ್ʼ, ʼರೌಡಿ ರಾಥೋರ್ʼ ಸೀಕ್ವೆಲ್ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ನಿರ್ಮಾಪಕ
MUST WATCH
ಹೊಸ ಸೇರ್ಪಡೆ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ