”ಸತ್ಯ” ಶೀಘ್ರದಲ್ಲೇ ಹೊರ ಬರಲಿದೆ… ಜೈಲಿನಿಂದ ಹೊರ ಬಂದ ವರ್ಷದ ಬಳಿಕ ರಾಜ್ ಕುಂದ್ರಾ
Team Udayavani, Sep 21, 2022, 7:52 PM IST
ಮುಂಬಯಿ: ಆಶ್ಲೀಲ ಚಿತ್ರ ನಿರ್ಮಾಣದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ಶಿಲ್ಪಾ ಶೆಟ್ಟಿ ಪತಿ ಉದ್ಯಮಿ ರಾಜ್ ಕುಂದ್ರಾ ಜೈಲಿನಿಂದ ಬಿಡುಗಡೆಯಾಗಿ ಇಂದಿಗೆ (ಸೆ.21) ಒಂದು ವರ್ಷವಾಗಿದೆ. ಈ ಬಗ್ಗೆ ಟ್ವೀಟ್ ವೊಂದನ್ನು ಮಾಡಿ ರಾಜ್ ಕುಂದ್ರಾ ಮೌನ ಮುರಿದಿದ್ದಾರೆ.
ನೀಲಿ ಸಿನಿಮಾ ನಿರ್ಮಾಣ ಹಾಗೂ ಆ್ಯಪ್ಗಳ ಮೂಲಕ ಅವುಗಳ ಬಿಡುಗಡೆ ಆರೋಪದಡಿ ರಾಜ್ ಕುಂದ್ರಾ ಅವರನ್ನು ಕಳೆದ ಜುಲೈ (2021) ತಿಂಗಳಿನಲ್ಲಿ ಮುಂಬೈ ಅಪರಾಧ ಇಲಾಖೆಯ ಪೊಲೀಸರು ಬಂಧಿಸಿದ್ದರು.
ಹಲವು ಬಾರಿ ಜಾಮೀನು ಪಡೆಯಲು ಮುಂದಾದ ಅವರಿಗೆ ಸೆ.21 (2021) ರಂದು ಮುಂಬೈ ಕೋರ್ಟ್ 50,000 ಶ್ಯೂರಿಟಿಯೊಂದಿಗೆ ಬೇಲ್ ಮಂಜೂರು ಮಾಡಿತ್ತು.
ಜೈಲಿನಿಂದ ಬಿಡುಗಡೆ ಆದ ಬಳಿಕ ರಾಜ್ ಕುಂದ್ರಾ ಎಲ್ಲೂ ಕೂಡ ಮುಖ ತೋರಿಸಿ ಕಾಣಿಸಿಕೊಂಡಿಲ್ಲ. ಎಲ್ಲಿ ಹೋದರೂ ಅವರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಹೋಗುತ್ತಿದ್ದಾರೆ.
ಇಂದಿಗೆ ( ಸೆ.21 ರಂದು) ರಾಜ್ ಕುಂದ್ರಾ ಜೈಲಿನಿಂದ ಹೊರ ಬಂದು ಒಂದು ವರ್ಷವಾಗಿದೆ. ಇದುವರೆಗೂ ಎಲ್ಲೂ ಬಹಿರಂಗವಾಗಿ ಮಾತಾನಾಡದ ಅವರು, ಟ್ವೀಟ್ ಮೂಲಕ ವಿರೋಧಿಗಳಿಗೆ, ಟೀಕಿಸುವವರಿಗೆ ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ.
“ಆರ್ಥರ್ ಜೈಲಿನಿಂದ ಬಿಡುಗಡೆಯಾಗಿ ಇಂದಿಗೆ ಒಂದು ವರ್ಷವಾಗಿದೆ. ಇದು ನ್ಯಾಯವನ್ನು ಸಲ್ಲಿಸುವ ಸಮಯ. ಶೀಘ್ರದಲ್ಲೇ ಸತ್ಯ ಹೊರ ಬೀಳಲಿದೆ. ಎಲ್ಲರಿಗೂ ಧನ್ಯವಾದಗಳು, ವಿಶೇಷವಾಗಿ ನನ್ನನ್ನು ಬಲಪಡಿಸುತ್ತಿರುವ ಟ್ರೋಲರ್ ಗಳಿಗೆ ದೊಡ್ಡ ಧನ್ಯವಾದಗಳೆಂದು” ಹೇಳಿದ್ದಾರೆ. #enquiry #word #mediatrial #trollers ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ.
‘ನಿಮಗೆ ಸಂಪೂರ್ಣ ಕಥೆ ತಿಳಿದಿಲ್ಲದಿದ್ದರೆʼ ಸುಮ್ಮನಿರಿ ಎಂದು ಮಾಸ್ಕ್ ಹಾಕಿಕೊಂಡ ಫೋಟೋದ ಕೆಳೆಗೆ ಬರೆದುಕೊಂಡಿದ್ದಾರೆ.
One Year Today released from #ArthurRoad Its a matter of time Justice will be served! The truth will be out soon! Thank you well wishers and a bigger thank you to the trollers you make me stronger ? #enquiry #word #mediatrial #trollers pic.twitter.com/KVSpJoNAKo
— Raj Kundra (@TheRajKundra) September 21, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ