ಅಮೀರ್ ಪುತ್ರಿಗೆ ಇನ್ನೂ ಕಾಡ್ತಿದೆ ಆ ಪೆಡಂಭೂತ … ಇನ್ಸ್ಟಾದಲ್ಲಿ ಇರಾ ಖಾನ್ ಹೇಳಿದ್ದೇನು?
ಇರಾ ಖಾನ್ ಇನ್ನೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಲ್ಲವಾದರೂ, ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ.
Team Udayavani, Feb 10, 2021, 3:35 PM IST
‘ಡಿಪ್ರೆಷನ್’.. ಡಿಪ್ರೆಷನ್… ಡಿಪ್ರೆಷನ್… ಒಂದಿಲ್ಲೊಂದು ಕಾರಣಕ್ಕೆ ಎಲ್ಲರೂ ಮಾನಸಿಕ ಖಿನ್ನತೆಗೆ ಒಳಾಗಿಯೇ ಇರ್ತಾರೆ. ಈ ಬಲೆಯಿಂದ ಬೇಗನೆ ಹೊರಬಂದ್ರೆ ಉತ್ತಮ ಇಲ್ಲದಿದ್ದರೆ ಇದರ ಪರಿಣಾಮ ಘೋರವಾಗಿರುತ್ತೆ ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ.
ಮಾನಸಿಕ ಖಿನ್ನತೆ ಎನ್ನುವ ಪೆಡಂಭೂತ ಚಿತ್ರಂಗವನ್ನೂ ಬಿಟ್ಟಿಲ್ಲ. ಈ ಕಾಯಿಲೆ ಹಲವರ ಪ್ರಾಣ ಬಲಿ ಪಡೆದಿದ್ದು ಕೂಡ ಇದೆ. ಇತ್ತೀಚಿಗಷ್ಟೆ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ ಹಾಗೂ ಕನ್ನಡದ ಬಿಗ್ ಬಾಸ್ ಮಾಜಿ ಸ್ಪರ್ಧಿ ಜಯಶ್ರೀ ರಾಮಯ್ಯ ಅವರ ಆತ್ಮಹತ್ಯೆಯ ಹಿಂದೆ ಇದೇ ‘ಡಿಪ್ರೆಷನ್’ ಕಾರಣ ಎನ್ನುವ ಗುಲ್ಲು ಕೂಡ ಕೇಳಿ ಬಂದಿತ್ತು. ಅದೇನೆ ಇರಲಿ ಸದ್ಯ ಬಿಟೌನ್ ನ ಮತ್ತೊರ್ವಳು ತಾನೂ ಮಾನಸಿಕ ಖಿನ್ನತೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಹೌದು, ಬಾಲಿವುಡ್ ಮಿಸ್ಟರ್ ಫರ್ಪೆಕ್ಟ್ ಅಮೀರ್ ಖಾನ್ ಅವರ ಮೊದಲ ಹೆಂಡತಿ ಪುತ್ರಿ ಇರಾ ಖಾನ್, ತಾನು ‘ಡಿಪ್ರೆಷನ್’ ನಿಂದ ನರಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ತಾವು ಎದುರಿಸುತ್ತಿರುವ ಸಮಸ್ಯೆಯನ್ನು ಹಂಚಿಕೊಂಡಿದ್ದಾರೆ.
ಕಳೆದ ವರ್ಷ ‘ವಿಶ್ವ ಮಾನಸಿಕ ಆರೋಗ್ಯ ದಿನ’ದಂದು ಇರಾ, ತಾನೂ ನಾಲ್ಕು ವರ್ಷಗಳ ಕಾಲ ಮಾನಸಿಕ ಖಿನ್ನತೆ ಅನುಭವಿಸಿದ್ದೆ ಎಂದು ಹೇಳಿಕೊಂಡಿದ್ದರು. ಇದಾದ ನಂತರ ಅವರು ಅದರಿಂದ ಹೊರ ಬಂದಿರಬಹುದು ಎಂಬುದು ಎಲ್ಲರ ಊಹೆಯಾಗಿತ್ತು. ಆದರೆ, ಅವರು ನಿನ್ನೆಯ ವಿಡಿಯೋ ನೋಡಿದ ಬಳಿಕ, ಇರಾ ಇಂದಿಗೂ ಕೂಡ ‘ಡಿಪ್ರೆಷನ್’ ನಲ್ಲಿದ್ದಾರೆ ಎಂದು ಗೊತ್ತಾಗಿದೆ.
ಇದನ್ನೂ ಓದಿ :
ಇರಾ ಖಾನ್ ಇನ್ನೂ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಲ್ಲವಾದರೂ, ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾರೆ. ಹಲವು ಬಾರಿ ತಮ್ಮ ಲವ್ ವಿಚಾರವಾಗಿಯೂ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು..
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Movie: ʼರಾವಣʼನ ಪತ್ನಿಯಾಗಿ ಯಶ್ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?
ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ
ಮೀಟಿಂಗ್ ಮಾಡೋಕ್ಕೂ ರೇಟ್ ಫಿಕ್ಸ್: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ
Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?
Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ