ಮಗ-ಸೊಸೆ ಸಂಸಾರ ಸರಿ ಪಡಿಸಲು ನಟ ನಾಗಾರ್ಜುನ್ ಪ್ರಯತ್ನ
Team Udayavani, Sep 13, 2021, 6:28 PM IST
ಹೈದರಾಬಾದ್: ತಮ್ಮ ಮಗ ನಾಗಚೈತನ್ಯ ಹಾಗೂ ಸೊಸೆ ಸಮಂತಾ ನಡುವೆ ಉಂಟಾಗಿರುವ ವೈಮನಸ್ಸು ಸರಿಪಡಿಸಲು ಹಿರಿಯ ನಟ ನಾಗಾರ್ಜುನ್ ಅಕ್ಕಿನೇನಿ ಮುಂದಾಗಿದ್ದಾರಂತೆ.
ಟಾಲಿವುಡ್ ಸೂಪರ್ ಜೋಡಿ ಎನ್ನಿಸಿಕೊಂಡಿದ್ದ ಸಮಂತಾ ಪ್ರಭು ಮತ್ತು ನಾಗಚೈತನ್ಯ ನಡುವಿನ ವೈವಾಹಿಕ ಬದುಕು ಮುರಿದುಬಿದ್ದಿದೆ ಎಂಬ ಸುದ್ದಿ ಕಳೆದ ಕೆಲ ದಿನಗಳಿಂದ ಕೇಳಿ ಬರುತ್ತಿದೆ. ತಮ್ಮ ದಾಂಪತ್ಯ ಜೀವನಕ್ಕೆ ಫುಲ್ ಸ್ಟಾಪ್ ಹೇಳಿ ಪರಸ್ಪರ ದೂರವಾಗಲು ಈ ಜೋಡಿ ಮುಂದಾಗಿದೆಯಂತೆ. ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಅಕ್ಕಿನೇನಿ ಹೆಸರು ಕೈ ಬಿಟ್ಟಿರುವ ಸುಮಂತಾ, ಇತ್ತೀಚಿಗೆ ನಡೆದ ತಮ್ಮ ಮಾವ ನಾಗಾರ್ಜುನ್ ಅವರ ಬರ್ತ್ಡೇ ಕಾರ್ಯಕ್ರಮಕ್ಕೂ ಗೌರು ಆಗಿದ್ದರು. ಈ ನಡೆ ಬ್ರೇಕಪ್ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದೆ.
2017 ರಲ್ಲಿ ಪ್ರೀತಿಸಿ ಮದುವೆಯಾದ ಈ ಜೋಡಿಯನ್ನು ಒಂದುಗೂಡಿಸಲು ನಾಗಚೈತನ್ಯ ಅವರ ತಂದೆ ನಟ ನಾಗಾರ್ಜುನ ಇನ್ನಿಲ್ಲದ ಪ್ರಯತ್ನಪಡುತ್ತಿದ್ದಾರಂತೆ. ಇಬ್ಬರ ನಡುವೆ ಸಮಸ್ಯೆಯೇನೆಂದು ತಿಳಿದುಕೊಂಡು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ನಾಗಾರ್ಜುನ್ ಪ್ರಯತ್ನ ನಡೆಸಿದ್ದಾರಂತೆ. ಆದರೆ ಇಬ್ಬರೂ ಎಲ್ಲೂ ಅಧಿಕೃತವಾಗಿ ತಾವು ಬೇರೆಯಾಗುತ್ತಿರುವ ಸುದ್ದಿಯನ್ನು ಹೇಳಿಕೊಂಡಿಲ್ಲ.
ಇನ್ನು ಸಮಂತಾ ಹಾಗೂ ನಾಗಚೈತನ್ಯ ಸಿನಿಮಾಗಳಲ್ಲಿ ಬ್ಯುಝಿ ಆಗಿದ್ದಾರೆ. ಸಮಂತಾ ಅವರ ವೆಬ್ ಸಿರೀಸ್ ಹಾಗೂ ಕೆಲವು ಟಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದರೆ, ನಾಗ ಚೈತನ್ಯ ಬಾಲಿವುಡ್ ಸೇರಿದಂತೆ ಹಲವು ತೆಲುಗು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?
MUST WATCH
ಹೊಸ ಸೇರ್ಪಡೆ
Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ