ರಾಷ್ಟ್ರಪ್ರಶಸ್ತಿ ಪುರಸ್ಕೃತ ಮಲಯಾಳಂ ಸಿನಿಮಾ ನಿರ್ದೇಶಕ ಸೇತುಮಾಧವನ್ ಇನ್ನಿಲ್ಲ
1975ರಲ್ಲಿ ತೆರೆ ಕಂಡಿದ್ದ ಹಿಂದಿಯ ಜೂಲಿ ಸೇರಿದಂತೆ ಸುಮಾರು 70 ಸಿನಿಮಾಗಳನ್ನು ನಿರ್ದೇಶಿಸಿದ್ದರು.
Team Udayavani, Dec 24, 2021, 3:50 PM IST
ಚೆನ್ನೈ/ತಿರುವನಂತಪುರಂ: ಪ್ರಸಿದ್ಧ ಸಿನಿಮಾ ನಿರ್ದೇಶಕ, ಹತ್ತು ರಾಷ್ಟ್ರಪ್ರಶಸ್ತಿ ಹಾಗೂ ಒಂಬತ್ತು ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ.ಎಸ್. ಸೇತುಮಾಧವನ್ (90ವರ್ಷ) ಶುಕ್ರವಾರ(ಡಿಸೆಂಬರ್ 24) ಚೆನ್ನೈ ನಿವಾಸದಲ್ಲಿ ನಿಧನರಾಗಿರುವುದಾಗಿ ಮೂಲಗಳು ತಿಳಿಸಿವೆ.
1931ರಲ್ಲಿ ಕೇರಳದ ಪಾಲಕ್ಕಾಡ್ ನಲ್ಲಿ ಸೇತುಮಾಧವನ್ ಜನಿಸಿದ್ದರು. 1990ರ ದಶಕದಲ್ಲಿ ಸಿನಿಮಾ ನಿರ್ದೇಶನಕ್ಕೆ ಗುಡ್ ಬೈ ಹೇಳಿದ ನಂತರ ಚೆನ್ನೈನಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದರು. 1950ರ ದಶಕದಲ್ಲಿ ಎಲ್ ವಿ ಪ್ರಸಾದ್, ಸುಂದರ್ ರಾವ್ ಸೇರಿದಂತೆ ಇನ್ನಿತರ ಹಿರಿಯ ನಿರ್ದೇಶಕರ ಜತೆ ಸಹಾಯಕರಾಗಿ ಸೇತುಮಾಧವನ್ ಕಾರ್ಯನಿರ್ವಹಿಸುವ ಮೂಲಕ ತಮ್ಮ ಸಿನಿಮಾ ನಿರ್ದೇಶನ ಜೀವನ ಆರಂಭಿಸಿದ್ದರು.
1960ರಲ್ಲಿ ಸೇತುಮಾಧವನ್ ಅವರು ಸ್ವತಂತ್ರವಾಗಿ ಸಿಂಹಳಿ ಭಾಷೆಯ ಸಿನಿಮಾವನ್ನು ನಿರ್ದೇಶನ ಮಾಡಿದ ನಂತರ ಅವರು ತಮ್ಮ ನಿರ್ದೇಶನದಲ್ಲಿ ಹಿಂದಿರುಗಿ ನೋಡಿಲ್ಲ. ಮಲಯಾಳಂ, ತೆಲುಗು, ತಮಿಳು, 1975ರಲ್ಲಿ ತೆರೆ ಕಂಡಿದ್ದ ಹಿಂದಿಯ ಜೂಲಿ ಸೇರಿದಂತೆ ಸುಮಾರು 70 ಸಿನಿಮಾಗಳನ್ನು ನಿರ್ದೇಶಿಸಿದ್ದರು.
ಒಡಾಯಿಲ್ ನಿನ್ನು, ದಾಹಂ, ಕೊಟ್ಟುಕುಡುಂಬಂ, ಅನುಭವಂಗಳ್ ಪಾಲಿಚಾಕಾಲ್, ಚಟ್ಟಾಕಾರಿ, ಒಪ್ಪೋಲ್, ಮರುಪಾಕ್ಕಂ ಸೇರಿದಂತೆ ಹಲವಾರು ಜನಪ್ರಿಯ ಸಿನಿಮಾಗಳನ್ನು ಸೇತುಮಾಧವನ್ ನಿರ್ದೇಶಿಸಿದ್ದರು. 1971ರಲ್ಲಿ ಬಿಡುಗಡೆಯಾಗಿದ್ದ ಅನುಭವಂಗಳ್ ಪಾಲಿಚಾಕಾಲ್ ಸಿನಿಮಾದಲ್ಲಿ ನಟ ಮಮ್ಮುಟ್ಟಿ ಅವರು ಸೇತುಮಾಧವನ್ ಜೊತೆ ಕಿರಿಯ ನಟನಾಗಿ ಕಾರ್ಯನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ʼಖಲ್ನಾಯಕ್ʼ ಸಿನಿಮಾದ ಪ್ರಧಾನ ಪಾತ್ರದ ರೇಸ್ನಲ್ಲಿ ಬಿಟೌನ್ ಸ್ಟಾರ್ಸ್ ಜೊತೆ ಯಶ್, ಅಲ್ಲು?
Malaika Arora: ಮಲೈಕಾಗೆ ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಕೇಳಿದ ಮಗ; ಶಾಕ್ ಆದ ಮುನ್ನಿ
Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್
Salman Khan: ನಟ ಸಲ್ಮಾನ್ ಖಾನ್ ನಿವಾಸದ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ
ಪೊಲೀಸ್ ಪೇದೆಯ ಮಗ, ಕಾನೂನು ಪದವೀಧರ ʼಲಾರೆನ್ಸ್ʼ ಕುಖ್ಯಾತ ಗ್ಯಾಂಗ್ ಸ್ಟರ್ ಆದದ್ದೇಗೆ?