ಕುದುರೆ ಮೇಲೆ ನಿಂತು ಪೋಸ್ ಕೊಟ್ಟ ನಟ: ನೆಟ್ಟಿಗರು ಫುಲ್ ಗರಂ
Team Udayavani, Mar 13, 2021, 3:55 PM IST
ಮುಂಬೈ: ಖ್ಯಾತ ಬಾಲಿವುಡ್ ನಟ ವಿಕಿ ಕೌಶಲ್ ಕುದುರೆ ಮೇಲೆ ನಿಂತು ಪೋಸ್ ಕೊಡುವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದು, ಇದೀಗ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ನಟನ ಈ ರೀತಿಯ ವರ್ತನೆಯ ಕುರಿತಾಗಿ ನೆಟ್ಟಿಗರು ಅಸಮಾಧಾನಗೊಂಡಿದ್ದು, ಕಾಮೆಂಟ್ ಗಳ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಈ ಕುರಿತಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿರುವ ನೆಟ್ಟಿಗರು, ಪ್ರಾಣಿಗಳ ಬಗ್ಗೆ ಸ್ಪಲ್ಪ ಯೋಚನೆ ಮಾಡಿ, ಅವುಗಳ ಕುರಿತಾಗಿ ದಯೆ ಇರಲಿ ಎಂದು ಹೇಳಿದ್ದಾರೆ.
ಈ ಪೋಟೋದ ಕುರಿತಾಗಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ನಟ ವಿಕ್ಕಿ ಕೌಶಲ್, ಅನಿಲ್ ಕಪೂರ್ ಅವರ ಕುದುರೆಯ ಚಿತ್ರಕಲೆಯನ್ನು ಹೋಲಿಕೆ ಮಾಡಿದ್ದಾರೆ.
ಈ ವಿಧವಾದ ಪೋಟೋದಲ್ಲಿ ಕಾಣಿಸಿಕೊಂಡಿರುವ ನಟ ಕುದುರೆ ಸವಾರಿ ಮಾಡುವಾಗ ಬಳಸಲಾಗುವ ಉಡುಪನ್ನು ಧರಿಸಿದ್ದು, ಜೊತೆಯಲ್ಲಿ ಹೆಲ್ಮೆಟ್ ಹಾಗೂ ಕಾಲಿಗೆ ಶೂ ವನ್ನು ಧರಿಸಿದ್ದು, ಕುದುರೆ ಮೇಲೆ ನಿಂತು ಬ್ಯಾಲೆನ್ಸ್ ಮಾಡುತ್ತಿರುವುದು ಕಂಡುಬರುತ್ತದೆ.
ಇದನ್ನೂ ಓದಿ:ಶಿವಸೇನೆಯವರು ಕನ್ನಡಿಗರಿಗೆ ಕಿರುಕುಳ ನೀಡುತ್ತಿರುವುದು ಖಂಡನೀಯ: ಡಾ.ವಿ.ಸೋಮಶೇಖರ
ನಟನ ಈ ವರ್ತನೆಯನ್ನು ಕಂಡು ಪ್ರತಿಕ್ರಿಯೆ ನೀಡಿರುವ ವ್ಯಕ್ತಿಯೊಬ್ಬ, ನೀವು ಈ ರೀತಿ ಮಾಡುವುದರಿಂದ ಕುದುರೆಗೆ ತೊಂದರೆಯಾಗುತ್ತದೆ. ವಿಕಿ ನೀವು ಈ ರೀತಿ ಮಾಡುವ ಬದಲು ಬೇರೆ ಏನನ್ನಾದರೂ ಮಾಡಬಹುದಿತ್ತು ಎಂದಿದ್ದಾರೆ. ಇನ್ನೊಬ್ಬ ವ್ಯಕ್ತಿ ಕುದುರೆ ಈಗ ಆರಾಮವಾಗಿದೆ ತಾನೆ ಎಂದು ನಟನನ್ನು ಪ್ರಶ್ನಿಸಿದ್ದಾರೆ.
ನಟ ಈ ಪೋಟೋವನ್ನು ಪೋಸ್ಟ್ ಮಾಡುವ ಮೊದಲು ಕುದುರೆ ಮೇಲೆ ಕುಳಿತು ಸವಾರಿ ಮಾಡುವ ದೃಶ್ಯವೊಂದನ್ನು ಕೂಡಾ ಪೋಸ್ಟ್ ಮಾಡಿದ್ದು , ‘ವಾಕ್ ಎಂಡ್ ಟ್ರೋಟ್, ಬ್ಯಾಕ್ ಟು ಬೆಸಿಕ್ಸ್’ ಎಂದು ಬರೆದುಕೊಂಡಿದ್ದರು.
ಸದ್ಯ ವಿಕಿ ತನ್ನ ಮುಂದಿನ ಸಿನಿಮಾವಾದ ಇಮ್ಮೋರ್ಟಲ್ ಅಶ್ವತ್ಥಾಮಗಾಗಿ ತಯಾರಿ ನಡೆಸುತ್ತಿದ್ದು, ಜೊತೆಗೆ ಇನ್ನೂ ಹಲವಾರು ಸಿನಿಮಾಗಳಲ್ಲಿ ನಟಿಸಲು ತಯಾರಾಗಿದ್ದಾರೆ ಎಂದು ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramayana Movie: ʼರಾವಣʼನ ಪತ್ನಿಯಾಗಿ ಯಶ್ ಜೊತೆ ನಟಿಸಲಿದ್ದಾರೆ 51 ಹರೆಯದ ಈ ನಟಿ?
ದೀರ್ಘಕಾಲದ ಗೆಳೆಯನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ತಾಪ್ಸಿ: ಗುಟ್ಟಾಗಿ ಹಸಮಣೆ ಏರಿದ ನಟಿ
ಮೀಟಿಂಗ್ ಮಾಡೋಕ್ಕೂ ರೇಟ್ ಫಿಕ್ಸ್: ನನ್ನ 10 ನಿಮಿಷ ಬೇಕಿದ್ರೆ 1ಲಕ್ಷ ಕೊಡಿ ಎಂದ ನಿರ್ದೇಶಕ
Box office: ʼವೀರ್ ಸಾವರ್ಕರ್ʼ ಆಗಿ ಗೆದ್ರಾ ರಣದೀಪ್ ಹೂಡಾ?; ಮೊದಲ ದಿನ ಗಳಿಸಿದ್ದೆಷ್ಟು?
Priyanka Chopra: ಅಯೋಧ್ಯೆ ರಾಮಲಲ್ಲಾನ ದರ್ಶನ ಪಡೆದ ಪ್ರಿಯಾಂಕಾ ಚೋಪ್ರಾ ದಂಪತಿ
MUST WATCH
ಹೊಸ ಸೇರ್ಪಡೆ
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ